Breaking News

ಗುಡೇಕೋಟೆ ಮೃತ ರೈತ ಕುಟುಂಬಕ್ಕೆ ಶಾಸಕ ಡಾ||.ಎನ್.ಟಿ.ಶ್ರೀನಿವಾಸ್ ಸಾಂತ್ವನ.

Condolences to the Gudekote deceased farmer’s family MLA Dr. NT Srinivas.

ಜಾಹೀರಾತು
ಜಾಹೀರಾತು




ಗುಡೇಕೋಟೆ:- ಕೂಡ್ಲಿಗಿ ತಾಲೂಕು ಗುಡೇಕೋಟೆ ಗ್ರಾಮದ ರೈತ ಎಂ.ಚಂದ್ರಪ್ಪ ಎಂಬುವವರು ಕಳೆದ ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ಹೊಲದಲ್ಲಿ ಧನಗಳಿಗೆ ಹುಲ್ಲು ಕೊಯ್ಯುವಾಗ ವಿಷಜಂತು ಹಾವೊಂದು ಕಚ್ಚಿ ಸಾವಿಗೀಡಾಗಿದ್ದರು. ಮೃತ ಬಡರೈತ ಕುಟುಂಬಕ್ಕೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ||.ಎನ್.ಟಿ.ಶ್ರೀನಿವಾಸ್ ರವರು ತಮ್ಮ ನಿವಾಸದಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳಿ ಆರ್ಥಿಕ ಸಹಾಯ ಮಾಡಿದರು.

ಶಾಸಕ ಡಾ||ಎನ್ ಟಿ ಶ್ರೀನಿವಾಸ್ ಮಾತನಾಡಿ, ಈ ಘಟನೆ ನಮಗೆ ಜೀರ್ಣಿಸಲು ಆಗುವುದಿಲ್ಲ. ಭಗವಂತ ಮೃತರ ಕುಟುಂಬಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಕುಟುಂಬದ ಉಳಿದ ಸದಸ್ಯರಿಗೆ ದೈರ್ಯ ತುಂಬಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಸಹಾಯ ಮಾಡಬಹುದು. ಆದರೆ ಸಮಾಧಾನ ಮಾಡುವುದು ಕಷ್ಟ. ಈ ದುರ್ಘಟನೆಯ ನೆನಪು ಸದಾ ಕಾಡುತ್ತಿರುತ್ತದೆ. ಅದನ್ನು ಗೆಲ್ಲುವ ಶಕ್ತಿ ದೇವರು ಕುಟುಂಬಕ್ಕೆ ಕೊಡಲಿ. ಘಟನೆ ಸುದ್ದಿ ಕೇಳಿ ನನಗೆ ಬಹಳ ದುಃಖವಾಯಿತು. ಕುಟುಂಬದ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗುಡೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ ಕೃಷ್ಣ, ಮೃತ ಸಹೋದರ ಪಾಲಯ್ಯ, ಕಾಂಗ್ರೆಸ್ ಮುಖಂಡ ಪೇಂಟ್ ತಿಪ್ಪೇಸ್ವಾಮಿ, ವಾಟಾಳ್ ನಾಗರಾಜ್,ಮೊಟುಪಾಲಯ್ಯನವರ್ ರಾಜಣ್ಣ, ಶ್ರೀನಿವಾಸ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

About Mallikarjun

Check Also

ಕಲ್ಪತರು ರತ್ನ ಡಾ.ಜಿ.ಎಸ್.ಶ್ರೀಧರ್ ರವರ 51ನೇ ಹುಟ್ಟು ಹಬ್ಬ ಆಚರಣೆ.

Kalpataru Ratna Dr. GS Sridhar’s 51st birthday celebration. ತನ್ನ ಪ್ರಾಣವನ್ನು ಲೆಕ್ಕಿಸದೆ ಕೋವಿಡ್ ಸಮಯದಲ್ಲಿ ನೀಡಿದ ಸೇವೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.