
BJP party suffers losses due to some leaders in Hanur constituency, senior leaders should expose the confusion among workers: Anapur Umesh
ಹನೂರು ಕ್ಷೇತ್ರದಲ್ಲಿ ಕೆಲವು ನಾಯಕರಿಂದ ಬಿಜೆಪಿ ಪಕ್ಷಕ್ಕೆ ನಷ್ಟ ವರಿಷ್ಠರು ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆಯಬೇಕು: ಆನಾಪುರ ಉಮೇಶ್ .

ವರದಿ:ಬಂಗಾರಪ್ಪ .ಸಿ.
ಹನೂರು : ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷಕ್ಕೆ ಅಪಾರ ಪ್ರಮಾಣದಲ್ಲಿ ದುಡಿದ ಪ್ರಾಮಾಣಿಕ ಕಾರ್ಯಕರ್ತರ ಒಂದು ಪಡೆಯೆ ಇದೆ , ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಗೆಲುವ ತಂದುಕೊಡುವ ಕಾರ್ಯಕರ್ತರನ್ನು ಹುಟ್ಟುಹಾಕುವಂತೆ ಪಕ್ಷದ ವರಿಷ್ಠರು ಇತ್ತ ಕಡೆ ಗಮನಹರಿಸಿ, ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸಲು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ನಾಯಕರು ಗಮನ ಹರಿಸಬೇಕು ,
ಅಲ್ಲದೆ ನಮ್ಮಲ್ಲಿ ನಾಯಕರಾದವರು ಸಹ ಕ್ಷೇತ್ರಗಳಲ್ಲಿ ಹೊರಗಿನವರ ಸಹವಾಸ ಬಿಟ್ಟು ಸ್ಥಳಿಯ ಮುಂಚೂಣಿ ನಾಯಕರ ಜೊತೆಯಲ್ಲಿ ಸೇರಿಕೊಂಡು ಕ್ಷೇತ್ರದ ಹಿತ ಕಾಪಡವಂತೆ ಮಾಡಬೇಕು. ಕಳೆದ ಚುನಾವಣೆಗಳಲ್ಲಿ ಗೆಲುವ ಕಾಣುವ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ಗೊಂದಲದಲ್ಲಿ ಅಪಪ್ರಚಾರ ಮಾಡಿ ಸೋಲುವಂತೆ ಕೆಲವರು ಮಾಡಿದ್ದಾರೆ, ಅದನ್ನು ಯಾರು ಮರೆಯಬಾರದು ಅಲ್ಲದೆ,ಇಂತಹವರನ್ನು ಕ್ಷೇತ್ರದ ಜನರು ಮರೆಯುವುದಿಲ್ಲ ,ವರಿಷ್ಠರು ಗಮನ ಹರಿಸಿ ಕ್ಷೇತ್ರದಿಂದ ದೂರವಿರಬೇಕು , ತಮ್ಮ ಪಕ್ಷದ ಕಾರ್ಯಕರ್ತರ ನೋವನ್ನು ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ನಾಯಕರುಗಳಿಗೆ ತಿಳಿಸುವಂತೆ ಪತ್ರಿಕೆಗಳ ಮುಖಾಂತರ ಅನಾಪುರ ಉಮೇಶ್ ರವರು ತೋಡಿಕೊಂಡರು .ಇಂದಿನ ಪರಿಸ್ಥಿತಿಯಲ್ಲಿ ಒಬ್ಬ ಸಾಮನ್ಯ ಕಾರ್ಯಕರ್ತಗಿರುವ ಸಾಮಾನ್ಯ ಜ್ಞಾನದ ಮಟ್ಟಿಗೆ ಹೇಳುವುದಾದರೆ,ಪಕ್ಷದ ಉನ್ನತ ಮಟ್ಟದ ಮುಖಂಡರುಗಳು ಕ್ಷೇತ್ರದ ಬಗ್ಗೆ ಗಮನ ಹರಿಸಬೇಕಾಗಿದೆ ,ಮುಂದಿನ ದಿನಗಳಲ್ಲಿ ನಡೆಯುವ ಸ್ಥಳಿಯ ಮಟ್ಟದ ಚುನಾವಣೆಗಳಿಗೆ ಹೊರಗಿನ ನಾಯಕರುಗಳನ್ನು ದೂರಕ್ಕೆ ಸರಿಸಿ , ಸ್ಥಳಿಯ ನಾಯಕರುಗಳಿಗೆ ಜವಾಬ್ದಾರಿ ನೀಡಿ ಚುನಾವಣಾ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ನಿಲ್ಲಿಸಿ ಜಯಿಸಿ ಕೊಳ್ಳುವ ಮೂಲಕ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರ ಜಿಲ್ಲೆಯಲ್ಲಿಯೆ ಹನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲುವಿನತ್ತ ಕೊಡೊಯ್ಯಲು ಗಮನ ಹರಿಸ ಬೇಕಾಗಿದೆ , ಈಗಾಗಲೇ ನಮ್ಮ ಕಾರ್ಯಕರ್ತರು ದಿಕ್ಕಾಪಾಲಾಗಿದ್ದಾರೆ ಅವರನ್ನೆಲ್ಲ ಒಗ್ಗೂಡಿಸಿ ಮುಂದೆ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುವ ಜವಾಬ್ದಾರಿಯು ನಮ್ಮದಾಗಿರುತ್ತದೆ ಎಂದು ಹಲವಾರು ಪ್ರಾಮಾಣಿಕ ಕಾರ್ಯಕರ್ತರು ತಿಳಿಸಿದರು .
ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷದ ಇಪ್ಪತ್ತು ಸಾವಿರ ಮತದಾರರಿದ್ದಾರೆ ಕಳೆದ ಎರಡು ಸಲವು ಬಹು ಸುಲಭವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲ್ಲಬಹುದಾಗಿತ್ತು , ಬಿಜೆಪಿ ಪಕ್ಷದ ಆಂತರಿಕ ಕಚ್ಚಾಟವೆ ನಮ್ಮ ಸೋಲಿಗೆ ಕಾರಣ ,
ಹನೂರು ಕ್ಷೇತ್ರದಲ್ಲಿ ಸರಿಯಾದ ಮಂಡಲ ಅದ್ಯಕ್ಷರುಗಳಾಧಿಯಾಗಿ ತಮ್ಮ ಕೆಲಸ ಕಾರ್ಯ ನಿರ್ವಹಿಸುತ್ತಿಲ್ಲ,
,ಇನ್ನು ಸಂಘಟನೆಯ ಕೊರತೆಯನ್ನು ತುಂಬಲು ಕಾರ್ಯಕರ್ತರು ಅಗಾದವಾಗಿ ಕಷ್ಟ ಪಡುವ ಸ್ಥಿತಿಯನ್ನು ನಿರ್ಮಾಣಮಾಡಲಾಗಿದೆ ,ಮುಂಚೂಣಿ ಘಟಕದಲ್ಲಿ ಕಾರ್ಯನಿರ್ವಹಿಸುವ ಇವರಕಾರ್ಯ ಅಲ್ಲೊಬ್ಬ ಇಲ್ಲೊಬ್ಬರು ನೋಡ್ತ ನಗ್ತಿದ್ದಾರೆ , ಆದರೆ ಪ್ರಾಮಾಣಿಕ ಕಾರ್ಯಕರ್ತರ ಕತೆ ಅಯೋಮಯವಾಗಲಿದೆ ಎಂದು ಬಿಜೇಪಿಯ ಮುಖಂಡರಾದ ಆನಾಪುರ ಉಮೇಶ್ ತಿಳಿಸಿದರು.




