Breaking News

ಆರೋಗ್ಯದತ್ತ ಪ್ರತಿಯೊಬ್ಬರಿಗೂ ಜಾಗೃತಿ ಇರಬೇಕು – ಆಶಾಬೇಗಂ

Everyone should be aware of health - Asha Begum

ಆರೋಗ್ಯದತ್ತ ಪ್ರತಿಯೊಬ್ಬರಿಗೂ ಜಾಗೃತಿ ಇರಬೇಕು – ಆಶಾಬೇಗಂ

ಜಾಹೀರಾತು
Screenshot 2025 11 05 20 37 16 26 E307a3f9df9f380ebaf106e1dc980bb65526469920231036155 1024x632


ಕೊಪ್ಪಳ ನವೆಂಬರ್ 05 (ಕರ್ನಾಟಕ ವಾರ್ತೆ): ನಮ್ಮ ಜೀವನದಲ್ಲಿ ಬಂಗಾರ, ಬೆಳ್ಳಿ, ಮಹಡಿ, ವಸ್ತು-ಒಡವೆ ಏನೆಲ್ಲವೂ ಇದ್ದರೇನು?, ನಾವು ಸುಖ-ಸಂತೋಷದಿಂದ ಇರಬೇಕಾದರೆ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಆರೋಗ್ಯದತ್ತ ವಿಶೇಷವಾಗಿ ಕಾಳಜಿವಹಿಸಿ, ಜಾಗೃತರಾಗಬೇಕು ಎಂದು ಗಂಗಾವತಿ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಕರೆನೀಡಿದರು.
 ಅವರು ಇತ್ತೀಚೆಗೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಎನ್.ಹೆಚ್.ಎಂ. ಯೋಜನೆಗಳು ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕುಷ್ಟಗಿಯ ಶರಣಪ್ಪ ವಡಿಗೇರಿ ಅವರ ನೇತೃತ್ವದ ಜನಜಾಗೃತಿ ಕಲಾರಂಗ ಸಂಸ್ಥೆಯ ಕಲಾತಂಡದವರಿಂದ ನಡೆದ ಬೀದಿ ನಾಟಕ ಪ್ರದರ್ಶನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
 ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ದುರುಗೇಶ್, ಶ್ರೀದೇವಿ, ಶೋಭಾ, ಗುರುರಾಜ ಮತ್ತು ವೀರೇಶ, ಆಶಾ ಉಮಾದೇವಿ, ಅಂಗನವಾಡಿ ಕಾರ್ಯಕರ್ತೆ ಅನ್ನಪೂರ್ಣ, ಸಣ್ಣ ಹುಲಿಗೆಮ್ಮಾ ಭಾಗವಹಿಸಿದ್ದರು.
 ನಂತರ ತಂಡದವರಿಂದ ಆರೋಗ್ಯ ಯೋಜನೆಗಳಾದ ಕ್ಷಯರೋಗ, ಹಾವು ಕಡಿತ, ಹೃದಯಾಘಾತ, ಬಾಲ್ಯವಿವಾಹ, ತಾಯಿ-ಮಗುವಿನ ಆರೋಗ್ಯ, ಲಸಿಕಾ ಯೋಜನೆ, ಹದಿಹರೆಯದವರ ಸಮಸ್ಯೆಗಳು ಮಾನಸಿಕ ಕಾಯಿಲೆ ಮುಂತಾದ ವಿಷಯಗಳನ್ನು ತಿಳಿಸುವ ಸನ್ನಿವೇಶಗಳ ಮೂಲಕ ಅಭಿನಯಿಸಿದ ಬೀದಿನಾಟಕ, ಜಾಗೃತಿ ಗೀತೆಗಳ ಕಾರ್ಯಕ್ರಮವು ಜನಮನ ರಂಜಿಸಿತು.
 ಕಲಾತಂಡದಲ್ಲಿ ದುರಗಪ್ಪ ಅಡವಿಭಾವಿ, ವೀರಯ್ಯಸ್ವಾಮಿ, ಶರಣಯ್ಯ, ರೇಣುಕಾ ಮಡಿವಾಳರ, ಮಂಜುಳಾ ಬೆಟಗೇರಿ, ದೇವೇಂದ್ರಪ್ಪ, ರಾಜಣ್ಣ ಕ್ಯಾದಿಗುಪ್ಪ ಕಲಾವಿದರು ಭಾಗವಹಿಸಿದ್ದರು. ಕೊನೆಯಲ್ಲಿ ದುರುಗೇಶ ಅವರು ವಂದಿಸಿದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.