Breaking News

ಹನೂರು ಪಟ್ಟಣದಲ್ಲಿ ಅಪೂರ್ಣ ಚರಂಡಿ ಕಾಮಗಾರಿ ಮಳೆ ನೀರು ರೈತನ ಜಮಿನಿಗೆ ಅಪಾರ ಬೆಳೆ ನಾಶ.

Incomplete drainage work in Hanur town causes massive crop damage to farmer's land due to rainwater.

Screenshot 2025 10 23 18 05 48 18 6012fa4d4ddec268fc5c7112cbb265e74642802294567417872 1024x747


ವರದಿ: ಬಂಗಾರಪ್ಪ .ಸಿ .
ಹನೂರು : ಪಟ್ಟಣದ ಕೇಂದ್ರ ಭಾಗದಲ್ಲಿರುವ ತಹಶೀಲ್ದಾರ್ ರವರ ಕಚೇರಿಯ ಹಿಂಭಾಗದಲ್ಲಿನ ೧೧ನೇ ವಾರ್ಡಿನ ವಿನಾಯಕನಗರ ಪ್ರದೇಶದಲ್ಲಿ ಗುತ್ತಿಗೆದಾರನ ಯಡವಟ್ಟಿನಿಂದ ಅಪೂರ್ಣವಾಗಿ ಬಿಟ್ಟುಹೋಗಿರುವ ಚರಂಡಿ ಕಾಮಗಾರಿಯಿಂದಾಗಿ ಮಳೆ ಆರ್ಭಟಕ್ಕೆ ಸ್ಥಳೀಯ ರೈತನ ಜಮೀನಿಗೆ ನೀರು ನುಗ್ಗಿ ಫಸಲು ಹಾನಿಯಾಗಿರುವ ಘಟನೆ ನಡೆದಿದೆ.

ಜಾಹೀರಾತು

ಪಟ್ಟಣದ ೧೧ನೇ ವಾರ್ಡಿನ ಸೋಮಣ್ಣ ಎಂಬ ರೈತನ ಜಮೀನು ಸಮೀಪದಲ್ಲಿಯೇ ಸುಮಾರು ಎರಡು ವರ್ಷಗಳ ಹಿಂದೆ ಚರಂಡಿ ಕಾಮಗಾರಿ ಪ್ರಾರಂಭವಾಗಿದ್ದರೂ ಇಂದಿಗೂ ಅದು ಪೂರ್ಣಗೊಂಡಿಲ್ಲ. ಪ್ರತೀ ಬಾರಿ ಮಳೆ ಸುರಿದಾಗ ಪಟ್ಟಣದ ಅನೇಕ ಬಡಾವಣೆಗಳ ನೀರು ಈ ಮಾರ್ಗವಾಗಿ ಹರಿದು ಸಮೀಪದಲ್ಲೆ ಹರಿಯುವ ಸ್ವಾಮಿಹಳ್ಳಕ್ಕೆ ಸೇರುವುದರ ಜೊತೆಗೆ ಮಧ್ಯದಲ್ಲಿನ ಜಮೀನಿಗೆ ನೀರು ನುಗ್ಗಿ ನಷ್ಟ ಉಂಟುಮಾಡುತ್ತಿದೆ.
ಈ ಕುರಿತು ಸ್ಥಳೀಯರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬುಧವಾರ ಸುರಿದ ಭಾರಿ ಮಳೆಯಿಂದ ಮತ್ತೆ ಸೋಮಣ್ಣ ಅವರ ಜಮೀನಿನಲ್ಲಿ ಬೆಳೆದಿದ್ದ ಫಸಲು ನೀರಿನಲ್ಲಿ ಮುಳುಗಿ ಹಾನಿಯಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವಂತೆ ಮತ್ತು ಹಾನಿಗೊಳಗಾದ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ತಮ್ಮ ಮೊಂಡುತನವನ್ನು ಪ್ರದರ್ಶಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

About Mallikarjun

Check Also

screenshot 2025 10 23 18 09 37 81 6012fa4d4ddec268fc5c7112cbb265e7.jpg

ಹನೂರು ಪಟ್ಟಣದಲ್ಲಿ ಪ್ರಚಾರದ ಪ್ಲೆಕ್ಸ್ ಗಳಿಗಿಲ್ಲ ತಡೆ ಸರ್ಕಾರದ ಅಪಾರ ಪ್ರಮಾಣದ ಹಣ ಬೊಕ್ಕಸಕ್ಕೆ ನಷ್ಟ

The lack of a ban on campaign plexes in Hanur town is a huge loss …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.