Breaking News

ಅಕ್ಟೋಬರ್ ತಿಂಗಳ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದಲ್ಲಿ 3ಲಕ್ಷ ಶರಣರು ಭಾಗವಹಿಸುವ ನಿರೀಕ್ಷೆ:ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ

3 lakh devotees expected to participate in the concluding ceremony of Basava Samskriti Abhiyan to be held at the Palace Grounds in Bengaluru on October 5th: Pujya Sri Jagadguru Channabasavananda Swamiji

ಗಂಗಾವತಿ:ಅಕ್ಟೋಬರ್ ತಿಂಗಳ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದಲ್ಲಿ 3ಲಕ್ಷ ಶರಣರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಚನ್ನಬಸವೇಶ್ವರ ಜ್ಞಾನಪೀಠ ಕುಂಬಳಗೋಡು, ರಾಷ್ಟ್ರೀಯ ಬಸವ ದಳ ಕೇಂದ್ರ ಸಮಿತಿ ಅಧ್ಯಕ್ಷರು ಹೆಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಇಂದು ಶನಿವಾರ ಸಂಜೆ ನಗರ ಬಸ್ಸು ನಿಲ್ದಾಣದ ಹೆದರುಗಡೆ ಇರುವ ಬಸವ ಪುತ್ಥಳಿ ಮುಂದೆ ಪತ್ರಿಕೆಯೊಂದಿಗೆ ಮಾತನಾಡುತ್ತ

*ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ, ಜಾತಿ ಗಣತಿಯ ಬಗ್ಗೆ ಮಾಹಿತಿ ನೀಡುತ್ತಾ, ಲಿಂಗಾಯತ ಸಮುದಾಯದ ಸರ್ವ ಒಳ ಪಂಗಡದವರು, ಗಣತಿಯಲ್ಲಿ ಇತರೆ ಕಾಲಂನಲ್ಲಿ, ಲಿಂಗಾಯತ ಎಂದು ಬರೆಸಬೆಕು. ಹಾಗೂ ಜಾತಿ ಕಾಲಂನಲ್ಲಿ ನಿಮ್ಮ ನಿಮ್ಮ ಕಾಯಕಗಳ ಜಾತಿ ಹೆಸರುಗಳನ್ನು ಮತ್ತು ಉಪಜಾತಿಗಳಿದ್ದರೆ ಉಪಜಾತಿಕಾಲಂ ಬರೆಸಬೆಕು ಎಂದು ಕರೆ ನೀಡಿದರು ಮತ್ತು ಅಕ್ಟೋಬರ್ 5 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದಲ್ಲಿ ಗಂಗಾವತಿ ತಾಲೂಕಿನ ನಿಂದ ಹೆಚ್ಚಿ ಸಂಖೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ದಿಲೀಪ್ ಕುಮಾರ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಜೆ ನಾಗರಾಜ್, ಬಸವ ಕೇಂದ್ರದ ಕಾರ್ಯದರ್ಶಿ ಎ ಕೆ ಮಹೇಶ್ ಕುಮಾರ್, ರಾಷ್ಟ್ರೀಯ ಬಸವ ದಳದ ಗೌರವ ಅಧ್ಯಕ್ಷರಾದ ಹೆಚ್ ಮಲ್ಲಿಕಾರ್ಜುನ, ಹೊಸಕೆರಾ, ರಾಷ್ಟ್ರೀಯ ಬಸವ ದಳದ ಉಪಾಧ್ಯಕ್ಷರಾದ ಕೆ ವೀರೇಶಪ್ಪ, ಸಂಗಪ್ಪ ಅಂಗಡಿ, ಶರಣಪ್ಪ ಕುಂಬಾರ, ಸಿದ್ದಣ್ಣ ಸಿದ್ದಾಪುರ, ವಿನಯ್ ಕುಮಾರ್ ಅಂಗಡಿ, ಚಿನ್ಮಯ ಪ್ರಸಾದ ಬಿ ಲಿಂಗಾಯತ, ಕೇದಾರನಾಥ, ಶಿವಯ್ಯ ಸ್ವಾಮಿ, ಹಾಗೂ ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ವೀರೇಶ ಅಸರೆಡ್ಡಿ ಮತ್ತು ಬಸವ ಭಕ್ತರು ಇದ್ದರು*

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *