Breaking News

ಪತ್ರಿಕೆ ವಿತರಕರ ಶ್ಯೆಯೋಭಿವೃದ್ಧಿಗೆ ಬದ್ಧ* . ಜಿ.ಎಂ. ರಾಜಶೇಖರ್

  • Committed to the professional development of newspaper distributors*. G.M. Rajashekar
Screenshot 2025 09 04 21 39 56 48 6012fa4d4ddec268fc5c7112cbb265e72189896213038179061 1024x489

 ಚಿಕ್ಕಮಗಳೂರು:ಪತ್ರಿಕೆ ಮುದ್ರಣ ಎಷ್ಟು ಮುಖ್ಯವೋ ಪತ್ರಿಕೆಗಳ ವಿತರಣೆಯು ಅಷ್ಟೇ, ಪ್ರಮುಖವಾಗಿದ್ದು ಅಂತಹ ವಿತರಕರ ಶ್ರೇ ಯೋಭಿವೃದ್ಧಿಗೆ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಬದ್ಧವಾಗಿದೆ ಎಂದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಜಿ.ಎಂ ರಾಜಶೇಖರ್ ತಿಳಿಸಿದರು
ಗುರುವಾರ ಚಿಕ್ಕಮಗಳೂರಿನ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಪತ್ರಕರ್ತರೊಂದಿಗೆ ಸಮಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತರಿಗೆ ಸಂಘದ ಧೈರ್ಯೋದ್ದೇಶಗಳು ಕುರಿತಂತೆ ಪತ್ರಕರ್ತರಾದ ನಾವುಗಳು ಒಗ್ಗಟ್ಟಾಗಿ ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕಾಗಿದೆ ಎಂದರು. ಪತ್ರಕರ್ತರ ಸಮಸ್ಯೆಗಳಿಗೆ ಸಂಘವು ಸದಾ ಸ್ಪಂದಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿಯೂ ಅವರ ಸಂಕಷ್ಟಗಳಿಗೆ ಸ್ಪಂದಿಸಲಿದ್ದೇವೆ
ಎಂದರು.
ಪತ್ರಕರ್ತರ ಸಮಸ್ಯೆಗಳನ್ನು ಅರಿತು ಸಂಘವು ಆರೋಗ್ಯ ವಿಮೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಎಂದರು.
ಹಿರಿಯ ಪತ್ರಕರ್ತರಾದ ತಿಪ್ಪೇರುದ್ರಪ್ಪ ಮಾತನಾಡಿ ಜಿಲ್ಲಾ ಪತ್ರಕರ್ತರ ಸಂಘವು ಹಲವು ವರ್ಷಗಳಿಂದ ಪತ್ರಕರ್ತರ ಏಳಿಗೆಗೆ ಶ್ರಮಿಸುತ್ತಾ ಬಂದಿರುತ್ತದೆ. ಇದರಿಂದ ಪತ್ರಕರ್ತರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ ಪತ್ರಕರ್ತರಲ್ಲಿ ಯಾವುದೇ ಭಿನ್ನವಿಪ್ರಾಯಗಳಿದ್ದರೂ ಸಮಾಜದ ಒಳತಿಗಾಗಿ ದುಡಿಯುವ ಅವಶ್ಯಕತೆ ಇದೆ ಎಂದರು.
ಹೊಸದಿಗಂತ ಪತ್ರಿಕೆ ಜಿಲ್ಲಾ ವರದಿಗಾರ ಸುರೇಶ್ ಮಾತನಾಡಿ ಸಂಘದ ಉದ್ದೇಶಗಳು ಉತ್ತಮವಾಗಿದ್ದು ಎಲ್ಲಾ ಪತ್ರಕರ್ತರು ಒಗ್ಗಟ್ಟಾಗಿ ಸಂಘಟನೆಗಳ ಹೊರತಾಗಿಯೂ ಉತ್ತಮ ಬಾಂಧವ್ಯ ಹೊಂದಬೇಕು ಎಂದರು. ಇದೇ
ಈ ಸಂದರ್ಭದಲ್ಲಿ ಪತ್ರಿಕೆ ವಿತರಕರಾದ ಹನುಮಂತಪ್ಪ ಹಾಗೂ ನಂಜುಂಡಿ ಇವರಗಳನ್ನು ಸನ್ಮಾನಿಸಲಾಯಿತು
ಸುವರ್ಣ ನ್ಯೂಸ್ ವರದಿಗಾರ ಕಿರಣ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ್, ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಎಂ.ಸಿ ಮಂಜುನಾಥ , ಕಾರ್ಯದರ್ಶಿ ಪ್ರಸನ್ನ ಕಿಬ್ಬ್ಲಿ ಸದಸ್ಯರಾದ ಪ್ರಕಾಶ್ ಮೂರ್ತಿ ಪುರುಷೋತ್ತಮ್ ಹಾಗೂ ತಾಲೂಕು ಅಧ್ಯಕ್ಷರಾದ ಅನಿಲ್ ಜಿಲ್ಲಾ ಖಜಾಂಚಿ ರಾಜೇಶ್, ಸೇರಿದಂತೆ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.

ಜಾಹೀರಾತು

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.