Breaking News

ಕೊಪ್ಪಳದಲ್ಲಿ  ದಿ,8 ಜರುಗುವ ಬಸವ ಸಂಸ್ಕ್ರತಿ ಅಭಿಯಾನದ ಆಮಂತ್ರಣ ಸಭೆ.

Invitation meeting for Basava Culture Campaign to be held in Koppal on the 8th.

ಗಂಗಾವತಿ: ಇಂದು ನಗರದ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ದಿ,8/9/2025 ರಂದು ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಬಸವ ಸಂಸ್ಕ್ರತಿಯ ಅಭಿಯಾನಕ್ಕೆ ಗಂಗಾವತಿ ಸರ್ವ ಸಮಾಜದವರಿಗೆ ಆಮಂತ್ರಣ ನೀಡುವುದಕ್ಕಾಗಿ ಸಭೆಯನ್ನು ಕರೆಯಲಾಗಿತ್ತು .

ಜಾಹೀರಾತು

ಸಭೆಯ ಅಧ್ಯಕ್ಷತೆಯನ್ನು ಲಿಂಗಾಯತ ಸಮಾಜದ ಮುಖಂಡರಾದ ಹೊಸಳ್ಳಿ ಶಂಕ್ರಗೌಡರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪಳದ ಬಸವರಾಜಪ್ಪ ಬೊಳ್ಳೊಳ್ಳಿ ಮತ್ತು ಬಸವರಾಜಪ್ಪ ಇಂಜಿನೀಯರ್ ಅವರು ವಹಿಸಿಕೊಂಡಿದ್ದರು . ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ ಬಸವರಾಜಪ್ಪನವರು ಶರಣ ವಿಚಾರಗಳನ್ನು ವಿಸ್ತ್ರೃತವಾಗಿ ಜನರಿಗೆ ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಬಸವರಾಜಪ್ಪ ಬೊಳ್ಳೊಳ್ಳಿಯವರು ಮತನಾಡುತ್ತಾ ಬಸವ ಸಂಸ್ಕ್ರತಿ ಅಭಿಯಾನದ ರೂಪರೇಷುಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೊಸಳ್ಳಿ ಶಂಕ್ರಗೌಡರು ಆ ಕಾರ್ಯಕ್ರಮಕ್ಕೆ ಗಂಗಾವತಿ ತಾಲೂಕಿನ ಎಲ್ಲಾ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕತೆಯನ್ನು ಮಾತಾಡಿದ ಡಾ.ರಾಜಶೇಖರ ನಾರನಾಳ ಅವರು ಸಂಸ್ಕ್ರತಿ ಅಂದರೆ ಒಂದು ಸಮುದಾಯ ನಿರ್ದಿಷ್ಟವಾಗಿ ಆಚರಿಸಬೇಕಾದಂತ ಆಚಾರ ಮತ್ತು ವಿಚಾರಗಳಿಗೆ ಸಂಸ್ಕ್ರತಿ ಎನ್ನುವರು . ಬಸವ ಸಂಸ್ಕ್ರತಿಯಂದರೆ ಅದು ವಿಶ್ವ ಪ್ರಜ್ಞೆಯ ಸಂಸ್ಕ್ರತಿ , ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ಎನ್ನುವ ವಿಶ್ವಮಾನವ ಸಂಸ್ಕೃತಿ . ಇಂತಹ ವಿಶ್ವ ಮಾನವ ಪ್ರಜ್ಞೆಯ ತತ್ವ ಸಿದ್ದಾಂತಗಳನ್ನು ಇಂದು ಮನೆ ಮನೆಗೆ , ಮನ ಮನಕ್ಕೆ ಮುಟ್ಟಿಸುವ ಸದುದ್ದೇಶದಿಂದ ನಡೆಯುವ ಕಾರ್ಯಕ್ರಮವೆ ಬಸವ ಸಂಸ್ಕ್ರತಿಯ ಅಭಿಯಾನ. ಈ ಕಾರ್ಯಕ್ರಮದ ಮೂಲ ಆಸೆಯವೆ ವಿಶ್ವ ಮಾನವ ಪ್ರಜ್ಞೆ ಹಾಗಾಗಿ ಈ ಕಾರ್ಯಕ್ರಮದಲ್ಲಿ ಬಸವಣ್ಣನನ್ನು ಅಪ್ಪಿ ಒಪ್ಪಿಕೊಳ್ಳುವ ಮನಸ್ಸುಗಳೆಲ್ಲಾ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಕೆ . ಪಂಪಣ್ಣ ಮಾಡಿದರು. ಸ್ವಾಗತವನ್ನು ಬಸವಕೇಂದ್ರ ಅಧ್ಯಕ್ಷರಾದ ಕೆ . ಬಸವರಾಜ ನೆರವೇರಿಸಿದರು . ಕಾರ್ಯಕ್ರಮದ ಶರಣು ಸಮರ್ಪಣೆಯನ್ನು ಬಸವ ದಳದ ಅಧ್ಯಕ್ಷರಾದ ದಿಲೀಪ್ ಅವರು ನಡೆಸಿಕೊಟ್ಟರು. ಶರಣ ಸಾಹಿತ್ಯಪರಿಷತ್ತಿನ ಅಧ್ಯಕ್ಷರಾದ ಶ್ರೀಶೈಲ ಪಟ್ಟಣಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೊಸಕೇರಾ, ತಿಪ್ಪಣ್ಣ ಗುಗ್ರಿ, ಶರಬಣ್ಣ ಮಾಸ್ಟರ್ ಶರಣಪ್ಪ ಹೀರೆಜಂತಕಲ್ , ಬಸವಾನೀಲಾಂಬಿಕ ಸಂಸ್ಥೆಯ ರೇಣುಕಮ್ಮಾ ಮತ್ತು ಇನ್ನಿತರ ಬಸವಪರ ಸಂಘಟನೆಗಳು ಮತ್ತು ಗಂಗಾವತಿಯ ಎಲ್ಲಾ ಬಸವಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು.

About Mallikarjun

Check Also

ವಾಣಿಜ್ಯ ಸಂಸ್ಥೆ, ಉದ್ದಿಮೆ & ಕಾರ್ಖಾನೆಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯ

Formation of an internal grievance committee is mandatory in commercial establishments, industries & factories. ಕೊಪ್ಪಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.