Breaking News

ಸ್ವಾತಂತ್ರ್ಯ ದಿನೋತ್ಸವ ದಿನದಂದೆ ಅಖಿಲ ಕರ್ನಾಟಕ ಯೌಟ್ಯೂಬ್ ಪತ್ರಕರ್ತರ ಸಂಘ ಉದ್ಘಾಟನೆ.

All Karnataka YouTube Journalists Association inaugurated on Independence Day.
Screenshot 2025 08 16 15 06 35 75 6012fa4d4ddec268fc5c7112cbb265e72354442849876715118 1024x692

ತಿಪಟೂರು. ನಗರದ ಹಾಸನ ಸರ್ಕಲ್ ನಂದಿನಿ ಡೈರಿ ಸಭಾಂಗಣದಲ್ಲಿ ಯೂಟ್ಯೂಬ್ ಪತ್ರಕರ್ತರ ಸಂಘದ ಉದ್ಘಾಟನೆಯನ್ನು ಗಿಡಕ್ಕೆ ನೀರು ಎರೆಯುವ ಮುಖಾಂತರ ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಅವರು ನೆರವೇರಿಸಿ ಮಾತನಾಡಿದ ಅವರು

ಜಾಹೀರಾತು

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು, ವಿಶೇಷವಾಗಿ ಯೂಟ್ಯೂಬ್, ಪತ್ರಿಕೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಅಖಿಲ ಕರ್ನಾಟಕ ಯೂಟ್ಯೂಬ್ ಪತ್ರಕರ್ತರ ಸಂಘದ ಸ್ಥಾಪನೆಯು ಮಾಧ್ಯಮ ಕ್ಷೇತ್ರದಲ್ಲಿ ಒಂದು ಹೊಸ ಬೆಳವಣಿಗೆಯಾಗಿದೆ. ಇದು ಯೂಟ್ಯೂಬ್ ಚಾನೆಲ್ ಗಳನ್ನು ಹೊಂದಿರುವ ಪತ್ರಕರ್ತರಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ ಮತ್ತು ಅವರ ಕೆಲಸವನ್ನು ಬೆಂಬಲಿಸುತ್ತದೆ. ಇಂತಹ ಸಂಘಟನೆಗಳು ಪತ್ರಕರ್ತರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರ ವೃತ್ತಿಪರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಎಂದರು

ಸಂಸ್ಥಾಪಕ ಅಧ್ಯಕ್ಷರಾದ ಡಾ. ಭಾಸ್ಕರ್ ಮಾತನಾಡಿ. ಸರ್ಕಾರ ಯೂಟ್ಯೂಬ್ ಪತ್ರಕರ್ತರಿಗೆ ಸವಲತ್ತು ರಕ್ಷಣೆ ಒಳ್ಳೆ ವೇದಿಕೆ ಕಲ್ಪಿಸಿಕೊಡಲಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಕಾರ್ಯಕ್ರಮದಲ್ಲಿ. ಕಾಂಗ್ರೆಸ್ ಸೇನಾದಳ ಅಧ್ಯಕ್ಷರಾದ ಉಮೇಶ್ ಬಿಜೆಪಿ ಮುಖಂಡರಾದ ಬಸವರಾಜ್ ತಾಲೂಕು ಸಂಚಾಲಕ ಹರಚನಹಳ್ಳಿ ಮಂಜುನಾಥ್. ಮಹಿಳಾ ಘಟಕ ಅಧ್ಯಕ್ಷ ನಂದಿನಿ ಕಾರ್ಮಿಕ ಘಟಕ ಅಧ್ಯಕ್ಷ ಚಂದ್ರಶೇಖರ್. ಅಧ್ಯಕ್ಷರಾದ ಗುರುಗದಹಳ್ಳಿ ಮಂಜು. ಉಪಾಧ್ಯಕ್ಷರಾದ ಮಂಜುನಾಥ್ ಡಿ. ಪ್ರಧಾನ ಕಾರ್ಯದರ್ಶಿ ರಘು ತಿಪಟೂರು. ಪತ್ರಕರ್ತರಾದ ಶುಭ ವಿಶ್ವಕರ್ಮ. ಸುನಿಲ್. ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು.
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

screenshot 2025 10 09 09 44 42 09 40deb401b9ffe8e1df2f1cc5ba480b12.jpg

ಭೀಮಣ್ಣ ಖಂಡ್ರೆಯವರು ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಅನರ್ಹ -ಸದ್ಗುರು ಬಸವಪ್ರಭು ಸ್ವಾಮೀಜಿ 

Bhimanna Khandre is not eligible for the Sharan Samaj Seva Ratna award - Sadhguru Basavaprabhu …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.