Breaking News

ಮುಡಾ ಹಗರಣದಲ್ಲಿ ಸಿಎಂ ಪತ್ನಿಗೆ ರಿಲೀಫ್‌ – ಇ.ಡಿ ಗೆ ಚಾಟಿ ಬೀಸಿದ ಸುಪ್ರೀಂ!

Relief for CM's wife in Muda scam - Supreme Court lashes out at ED!


Screenshot 2025 07 21 14 15 24 57 A71c66a550bc09ef2792e9ddf4b16f7a4404121235458313415 1024x570

ನವದೆಹಲಿ : ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ಪತ್ನಿ ಪರ‍್ವತಿ ವಿರುದ್ದ ಪ್ರಕರಣದ ದಾಖಲಿಸಿದ್ದ ಜಾರಿ ನರ‍್ದೇಶನಾಲಯಕ್ಕೆ ಸುಪ್ರೀಂಖಿಗಿ ಕರ‍್ಟ್‌ ಚಾಟಿ ಬೀಸಿದೆ. ಹೈಕರ‍್ಟ್‌ ಆದೇಶವನ್ನು ಪ್ರಶ್ನಿಸಿ ಇ.ಡಿ ಸಲ್ಲಿಸಿದ್ದ ರ‍್ಜಿಯನ್ನು ಸುಪ್ರೀಂ ಕರ‍್ಟ್‌ ವಜಾಗೊಳಿಸಿದೆ.
ಇದರಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಮಹತ್ವದ ಗೆಲುವು ದೊರತಂತಾಗಿದೆ.

ಜಾಹೀರಾತು

ಸಾಮಾಜಿಕ ಕರ‍್ಯರ‍್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ದೂರನ್ನಾಧರಿಸಿ ಜಾರಿ ನರ‍್ದೇಶನಾಲಯದ ತನಿಖೆ ಕೈಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಜಾರಿ ನರ‍್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ರಾಜಕೀಯ ಯುದ್ಧ ಚುನಾವಣೆಯಲ್ಲಿ ನಡೆಯಲಿ. ನ್ಯಾಯಾಲಯದಲ್ಲಿ ಬೇಡ. ರಾಜಕೀಯ ದಾಳವಾಗಿ ಇದನ್ನು ಪರಿರ‍್ತಿಸಬೇಡಿ ಎಂದು ಹೇಳಿದ್ದಾರೆ. ಅಲ್ಲದೇ ಇಂಥಾ ಚಟುವಟಿಕೆ ಮುಂದುವರೆಸಿದರೆ ಇ.ಡಿ ಬಗ್ಗೆ ಕಠಿಣವಾಗಬೇಕಾಗುತ್ತದೆ ಎಂದು ಸುಪ್ರಿಂ ಎಚ್ಚರಿಕೆಯನ್ನೂ ರವಾನಿಸಿದೆ.

ಸಿಎಂ ಪತ್ನಿ ವಿರುದ್ದ ದಾಖಲಿಸಲಾಗಿದ್ದ ಪ್ರಕರಣವನ್ನು ಹೈಕರ‍್ಟ್‌ ರದ್ದುಪಡಿಸಿತ್ತು. ಹೈಕರ‍್ಟ್‌ ಆದೇಶವನ್ನು ಪ್ರಶ್ನಿಸಿ ಇ.ಡಿ ಸುಪ್ರೀಂ ಕರ‍್ಟ್‌ ಮೆಟ್ಟಿಲೇರಿತ್ತು. ಪ್ರಕರಣವನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯ ಹೈಕರ‍್ಟ್‌ ಆದೇಶವನ್ನು ರದ್ದುಪಡಿಸಲು ನಿರಾಕರಿಸಿದೆ.

ಮೈಸೂರಿನ ಮುಡಾ ಕಚೇರಿ ಮೇಲೆ ಧಿಡೀರ್‌ ದಾಳಿ ನಡೆಸಿದ್ದ ಜಾರಿ ನರ‍್ದೇಶನಾಲಯ , ಮೊದಲು ನಮಗೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪರ‍್ವತಿ ಸಿದ್ದರಾಮಯ್ಯ ಅವರ ನಿವೇಶನಗಳ ಮೂಲ ದಾಖಲೆ ಕೊಡಿ ಎಂದು ಮುಡಾ ಅಧಿಕಾರಿಗಳಿಗೆ ತಾಕೀತು ಮಾಡಿತ್ತು.

ಸುಮಾರು ೮ ಅಧಿಕಾರಿಗಳು ಆಗಮಿಸಿದ್ದು, ಮುಡಾ ಆಯುಕ್ತ ರಘುನಂದನ್ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಡಾದಲ್ಲಿ ನಡೆದಿರುವ ೫೦:೫೦ ಹಗರಣದ ಬಗ್ಗೆ ತನಿಖೆ ನಡೆಸಲಾಗಿತ್ತು.

ಪರ‍್ವತಿ ಸಿದ್ದರಾಮಯ್ಯ ಅವರ ಮೂಲ ದಾಖಲಾತಿ‌ ಕೇಳಿದಾಗ, ನಕಲು ಪ್ರತಿ ಸಾಕೇ ಎಂದು ಮುಡಾ ಅಧಿಕಾರಿಗಳು ನುಣುಚಿಕೊಳ್ಳಲು ಯತ್ನಿಸಿದ್ದಾರೆಂದು ವರದಿಯಾಗಿತ್ತು. ಈ ವೇಳೆ ನಮಗೆ ಮೂಲ ದಾಖಲೆಯೇ ಬೇಕು ಪಟ್ಟು ಹಿಡಿದಿದ್ದ ಇ.ಡಿ. ಅಧಿಕಾರಿಗಳು, ಪರ‍್ವತಿ ಸಿದ್ದರಾಮಯ್ಯ ಕೇಸ್ ಸಂಬಂಧ ೨೦೦೪ ರಿಂದ ೨೦೨೩ರವರಗಿನ ಮೂಲ ದಾಖಲೆ ತಕ್ಷಣ ಒದಗಿಸಿ ಎಂದು ತಾಕೀತು ಮಾಡಿದ್ದರು. ಜೊತೆಗೆ, ಮುಡಾ ಕರ‍್ಯರ‍್ಶಿ ಪ್ರಸನ್ನ ಕುಮಾರ್ ಅವರನ್ನ ದಾಖಲೆ ತರಲು ಹೊರಗೆ ಕಳುಹಿಸಿದ ಅಧಿಕಾರಿಗಳು, ೫೦:೫೦ ವಿಚಾರ ಏನು, ಇಲ್ಲಿಯವರೆಗೆ ಎಷ್ಟು ಸೈಟ್ ಗಳು ಹಂಚಿಕೆಯಾಗಿದೆ ಎಂದು ಪರಿಶೀಲನೆ ನಡೆಸಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.