Breaking News

ಕರಡಿ ದಾಳಿ ಬೆನ್ನಲ್ಲೆಯೇ ಈಗ ಚಿರತೆ ದಾಳಿಗೆ 13 ಕುರಿಗಳು ಸಾವು ತತ್ತರಿಸಿದ ದೇವಪ್ಪ ಬೇವಿನ ಗಿಡದ ರೈತ ಮತ್ತು ರೈತರು

After bear attack, now 13 sheep killed in leopard attack Devappa neem farmer and farmers in distress
Screenshot 2025 07 17 20 52 39 27 6012fa4d4ddec268fc5c7112cbb265e73722877857199658788 568x1024

ವರದಿ ಮಂಗಳೇಶ ಮೆತಗಲ್ ಮಂಗಳೂರು

ಜಾಹೀರಾತು

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ,: ಕೆಲವು ದಿನಗಳ ಹಿಂದೆ ಇದೇ ಭಾಗ ಮಂಗಳೂರು ಗ್ರಾಮದ ಹತ್ತಿರ ಕರಡಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತಬ್ಬನಿಗೆ ದಾಳಿ ಮಾಡಿತ್ತು. ಈಗ ನೆಲಜೇರಿ ಗ್ರಾಮದಲ್ಲಿ ಬುಧವಾರ ರಾತ್ರಿ ಚಿರತೆ ದಾಳಿ ಮಾಡಿ ಸುಮಾರು 13 ಕುರಿಗಳನ್ನು ಕೊಂದುಹಾಕಿದೆ.

ನೆಲಜೇರಿ ಗ್ರಾಮದ ದೇವಪ್ಪ ಬೇವಿನಗಿಡದ ಅವರಿಗೆ ಸೇರಿದ 13 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ದೇವಪ್ಪ ಅವರ ಕೊಟ್ಟಿಗೆಯಲ್ಲಿ ಇದ್ದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿದೆ. ಇದರಿಂದ ರೈತನಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಚಿರತೆ ಹಾವಳಿ ತಪ್ಪಿಸಲು ಆಗ್ರಹ : ಗ್ರಾಮಗಳಲ್ಲಿ ಚಿರತೆ ಬಂದಿದ್ದು, ಇದರಿಂದ ರೈತರು ಹಸು, ಕರು, ಎಮ್ಮೆ ಮೇಕೆ, ಕುರಿಗಳನ್ನು ಮೇಯಿಸಲು ಭಯಪಡುವ ಸ್ಥಿತಿ ಇದೆ. ಚಿರತೆ ದಾಳಿಯಿಂದ ಈಗಾಗಲೇ ಸಾಕು ಪ್ರಾಣಿಗಳನ್ನು ಕಳೆದುಕೊಂಡಿದ್ದೇವೆ. ಚಿರತೆ ಹಾವಳಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಅರಣ್ಯ ಇಲಾಖೆಯ ಅಧಿಕಾರಿ ಲಿಂಗರಾಜ ಕನ್ನಾಳ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಡಾ. ಬಾಪುಗೌಡ್ ಪಾಟೀಲ್, ಡಾ. ಸುಷ್ಮಾ ಬೆಲ್ಲದ ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಪಶು ಸಂಗೋಪನೆ ಇಲಾಖೆ ಸಿಬ್ಬಂದಿಗಳು ಗ್ರಾ.ಪ. ನೆಲಜೇರಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಮತ್ತು ಗ್ರಾಮದ ಎಲ್ಲಾ ಹಿರಿಯರು ಮುಖಂಡರು ಯುವಕ ಮಿತ್ರರು ಹಾಗೂ ಸುತ್ತಮುತ್ತಲಿನ ಅನೇಕರು ನೋಡಲು ಆಗಮಿಸಿದ್ದರು

ವರದಿ ಮಂಗಳೇಶ ಮೆತಗಲ್ ಮಂಗಳೂರು

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.