Breaking News

ಗಂಗಾವತಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ

Gangavathi Guarantee Schemes Progress Review Meeting

ಗಂಗಾವತಿ ಗ್ಯಾರಂಟಿ ಯೋಜನೆಗಳ ಪ್ರಗತಿ ವರದಿ

ಜಾಹೀರಾತು

ಗೃಹಲಕ್ಷ್ಮಿ ಯೋಜನೆ ಅಡಿ ಗಂಗಾವತಿ ತಾಲೂಕಿನಲ್ಲಿ ಒಟ್ಟು 56084 ಜನ ಫಲಾನುಭವಿಗಳಿದ್ದು ಇದರಲ್ಲಿ 56045 ಜನ ನೋಂದಣಿಯಾಗಿರುತ್ತಾರೆ. ಇದರಲ್ಲಿ 40810 ಗಂಗಾವತಿ ವಿಧಾನ ಸಭಾಕ್ಷೇತ್ರ ಮತ್ತು 15274 ಕನಕಗಿರಿ ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳು. ಪರಿಶಿಷ್ಟ ಜಾತಿ 11472, ಪರಿಶಿಷ್ಟ ಪಂಗಡ 6817, ಅಲ್ಪ ಸಂಖ್ಯಾತ 12319, ಇತರೆ ಸಮುದಾಯಗಳ 25437 ಜನ ಫಲಾನುಭವಿಗಳಿಗೆ ನಮ್ಮ ಸರಕಾರ ಮಾಸಿಕ ತಲಾ 2000/- ಹಣವನ್ನು ತಾಯಂದಿರ ಖಾತೆಗೆ ಜಮೆ ಮಾಡುವ ಮೂಲಕ ಸದೃಢ ಬದುಕು ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸುತ್ತಿದೆ.

ಅನ್ನಭಾಗ್ಯ ಯೋಜನೆ ಅಡಿ 55441 BPL ಕಾರ್ಡುಗಳ 189866 ಜನ ಫಲಾನುಭವಿಗಳು ಅನ್ನಭಾಗ್ಯ ಯೋಜನೆ ಅಡಿ ಅಕ್ಕಿಯನ್ನು ಪಡೆಯುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅಕ್ಕಿಯ ಬದಲಿಗೆ ಬೇಳೆ, ಅಡುಗೆ ಎಣ್ಣೆಯ ವಿತರಿಸಿದರೆ ಅನುಕೂಲ ಎಂಬ ಬೇಡಿಕೆ ಬಂದಿದ್ದು ಸರಕಾರಕ್ಕೆ ಗಮನಕ್ಕೆ ತರಲಾಗುವುದು.

ಗೃಹಜ್ಯೋತಿ. ಗಂಗಾವತಿ ತಾಲೂಕಿನಲ್ಲಿ ಸುಮಾರು 60570 ಸ್ಥಾವರಗಳಿದ್ದು ಅದರಲ್ಲಿ ಶೇ 98 ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಯೋಜನೆಗೆ ಗಂಗಾವತಿ ತಾಲೂಕು ಒಂದರಲ್ಲೇ ಸರಕಾರ 2.5 ಕೋಟಿ ಹಣ ವನ್ನು ಕಟ್ಟಿ ಜನರ ಜೇಬಿಗೆ ವಿದ್ಯುತ್ ಹೊರೆಯಾಗದಂತೆ ನಮ್ಮ ಗ್ಯಾರಂಟಿ ಸರಕಾರ ತಡೆದಿದೆ.

ಶಕ್ತಿ ಯೋಜನೆ ಅಡಿ ಜೂನ್ ತಿಂಗಳಿನಲ್ಲಿ 3.05 ಕೋಟಿ ಪ್ರಯಾಣ ಪ್ರಯಾಣ ವೆಚ್ಚವಾಗಿದ್ದು ಕಳೆದ ಸಾಲಿಗೆ ಹೋಲಿಸಿದರೆ 50 ಲಕ್ಷ ಆದಾಯ ಹೆಚ್ಚಾಗಿದೆ. ಶಕ್ತಿ ಯೋಜನೆ ಅತ್ಯಂತ ಮಹತ್ವದ ಯೋಜನೆಯಾಗಿದ್ದು ಇದು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ. ಯೋಜನೆಯಿಂದ ಉದ್ಯೋಗದಲ್ಲಿ ತೊಡಗಿಕೊಳ್ಳುವ ಮಹಿಳೆಯರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಯುವನಿಧಿ ಯೋಜನೆ ಅಡಿ 1901 ಜನ ಮಾತ್ರ ನೋಂದಣಿಯಾಗಿದ್ದು ಈ ಯೋಜನೆಯಲ್ಲಿ 2023-24 ನೇ ಸಾಲಿನಲ್ಲಿ ಡಿಪ್ಲೋಮಾ ಮುಗಿಸಿದರಿಗೆ 1500 ಮತ್ತು ಪದವಿ ಮುಗಿಸಿದವರಿಗೆ 3000 ಸಾವಿರ ಹಣವನ್ನು 2 ವರ್ಷ ಗಳ ಕಾಲ ನೀಡುತ್ತಿದೆ ಎಂದು ತಾಲೂಕ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ವೆಂಕಟೇಶ ಬಾಬು ತಿಳಿಸಿದ್ದಾರೆ.



About Mallikarjun

Check Also

ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಸಾಮಾಜಿಕ ಕಾರ್ಯವು ಶ್ಲಾಘನೀಯವಾದುದ್ದು : ಕುಮಾರಸ್ವಾಮಿ .

The social work of the Karnataka Media Journalists Association is commendable: Kumaraswamy. ವರದಿ : ಬಂಗಾರಪ್ಪ …

Leave a Reply

Your email address will not be published. Required fields are marked *