Winner of the Golden Achievement Award. Rooprani Laxman.

ಗಂಗಾವತಿ. ನಗರದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಶ್ರೀಮತಿ ರೂಪಾರಾಣಿ ಲಕ್ಷ್ಮಣ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸುವರ್ಣ ಚಾನೆಲ್ ಹಾಗೂ ಕನ್ನಡಪ್ರಭ ಸಂಯುಕ್ತ ಆಶ್ರಯದಲ್ಲಿ ನೀಡಲಾಗುತ್ತಿರುವ ಸುವರ್ಣ ಸಾದಕಿ ಪ್ರಶಸ್ತಿಗೆ ನಗರದ ಆರ್ಯವೈಶ್ಯ ಸಮಾಜ ಅಧ್ಯಕ್ಷ ರೂಪ ರಾಣಿ ಆಯ್ಕೆಯಾಗಿದ್ದು ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದರು ಶನಿವಾರದಂದು ಬೆಳಗಾವಿಯ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಬೆಳಿಗ್ಗೆ 10:30 ಗಂಟೆಗೆ ಪ್ರಶಸ್ತಿ ಪ್ರಧಾನ ಜರುಗಲಿದ್ದು ಇದಕ್ಕೆ ತಮ್ಮ ಸಮಾಜ ಬಾಂಧವರ ತುಂಬು ಹೃದಯದ ಸಹಕಾರ ಹಾಗೂ ಕುಟುಂಬಸ್ಥರ ಸಹಕಾರದೊಂದಿಗೆ ತಾವು ಸಮಾಜಮುಖಿಯಾಗಿ ಬೆಳೆಯಲು ಸಹಕಾರಿಯಾಗಿದೆ. ತಮ್ಮ ಮಾವ ರಾಯಚೂರು ಶಿವಯ್ಯ ಸ್ವತಂತ್ರ ಹೋರಾಟಗಾರರಾಗಿದ್ದು. ಸ್ಮರಿಸಿದವರು ಪ್ರತಿ ವರ್ಷ ತಮ್ಮ ಕುಟುಂಬದ ನೇತೃತ್ವದಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ ಉಪಹಾರ ಊಟದ ವ್ಯವಸ್ಥೆಯನ್ನು ಹಲವು ದಶಕಗಳಿಂದ ಮಾಡಲಾಗಿದ್ದು ಲಕ್ಷಾಂತರ ಅಸ್ತಮಾ ರೋಗಿಗಳಿಗೆ ಗುಣಮುಖ ಆದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸುವರ್ಣ ಸಾಧಕ ಪ್ರಶಸ್ತಿಯಿಂದ ತಮ್ಮ ಜವಾಬ್ದಾರಿ ಹೆಚ್ಚಾಗಿದ್ದು ಮುಂಬರುವ ದಿನಗಳಲ್ಲಿ ಸಮಾಜದವರ ಸಂಪೂರ್ಣ ಸಹಕಾರ ಪಡೆದು ಹಲವು ಉಪಯುಕ್ತ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುವುದೆಂದು ಹೇಳಿದರು. ತಮ್ಮ ಆಯ್ಕೆಗೆ ಸಂಬಂಧಿಸಿದಂತೆ ಸಮಾರಂಭದ ಆಯೋಜಕರಿಗೆ ಕೃತಜ್ಞತಾ ಮನೋಭಾವನೆ ವ್ಯಕ್ತಪಡಿಸಿದರು..