Threat to journalist: Complaint to superiors over action against CPI Revanna

ಬೇಲೂರು : ಪಟ್ಟಣದ ನೆಹರು ನಗರ ವೃತ್ತದ ಸಮೀಪ ಕಳೆದ ಗುರುವಾರ ಬೈಕ್ ಹಾಗೂ ಆಟೋ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಿದ
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯ ಹಾಗೂ ವಾರ್ತಾ ಭಾರತಿ ಪತ್ರಿಕೆಯ ವರದಿಗಾರ ಮಹಮದ್ ಅಬ್ರಾರ್ ರವರು ಮಾಡಿರುವ ಸುದ್ದಿಗೆ ಬೇಲೂರು ವೃತ್ತ ನಿರೀಕ್ಷಕ ರೇವಣ್ಣ ರವರು ಬೆದರಿಸಿ ಧಮ್ಕಿ ಹಾಕಿ ಮಾನಸಿಕವಾಗಿ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ ಎಂ ರಾಜಶೇಖರ್ ರವರ ನೇತೃತ್ವದಲ್ಲಿ ಪತ್ರಕರ್ತರು ಬುಧವಾರ ಅರಸೀಕೆರೆ ಡಿವೈಎಸ್ಪಿ ಗೋಪಿ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಜಿ ಎಂ ರಾಜಶೇಖರ್ ಪೋಲೀಸ್ ಇಲಾಖೆ ಜನ ಸ್ನೇಹಿಯಾಗಿ ಕೆಲಸ ಮಾಡಬೇಕು ಸಮಾಜದಲ್ಲಿ ಪತ್ರಕರ್ತರು ಹಾಗೂ ಪೋಲಿಸ್ ಅಧಿಕಾರಿಗಳ ನಡುವೆ ಅವಿನಾಭಾವ ಸಂಬಂಧವಿದ್ದು ಈ ರೀತಿ ಘಟನೆ ಯಿಂದ ಪ್ರಾಮಾಣಿಕ ಪತ್ರಕರ್ತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದ್ದು, ಈ ಘಟನೆಯನ್ನು ರಾಜ್ಯ ಸಂಘವು ಖಂಡಿಸುತ್ತದೆ. ಇಂತಹ ಉಡಾಫೆ ವೃತ್ತ ನಿರೀಕ್ಷಕ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಗೋಪಿ ರವರು ಘಟನೆ ಬಗ್ಗೆ ಪರೀಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಪತ್ರಕರ್ತರಾದ ಹೆಚ್ ಡಿ ರಮೇಶ್, ಬಸವರಾಜು, ಅರುಣ್ ರಜಪೂತ್ ಮಹಮದ್ ಅಬ್ರಾರ್ ವಿನೋದ್ ಕುಮಾರ್, ಚೇತನ್, ನೂರ್ ಅಹಮದ್,ಸೋಮಶೇಖರ್, ಸುನಿಲ್ ಹಾಜರಿದ್ದರು