Breaking News

ಬಿ.ವಿ.ಎಂ. ಶಾಲೆಯಲ್ಲಿ ಮಕ್ಕಳಿಗೆ ಪುಷ್ಪ ಹಾಗೂ ಸಸಿಗಳನ್ನು ನೀಡುವ ಮೂಲಕ ಶಾಲೆಗೆ ಆಹ್ವಾನ.

BVM School invites children to school by giving them flowers and saplings.

ಜಾಹೀರಾತು



ಗಂಗಾವತಿ: ನಗರದ ಕನಕಗಿರಿ ರಸ್ತೆಯಲ್ಲಿರುವ ಬಸವಲಿಂಗಪ್ಪ ವೀರಶೆಟ್ಟಿ ಸ್ಮಾರಕ (ಬಿ.ವಿ.ಎಂ) ಹಿರಿಯ ಪ್ರಾಥಮಿಕ ಶಾಲೆಯ ೨೦೨೫-೨೬ನೇ ಸಾಲಿನ ವಿದ್ಯಾರ್ಥಿಗಳಿಗೆ ಪುಷ್ಪ ಹಾಗೂ ಸಸಿಗಳನ್ನು ನೀಡುವ ಮೂಲಕ ವಿಶೇಷವಾಗಿ ಶಾಲೆಗೆ ಆಹ್ವಾನಿಸಲಾಯಿತು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಸವರಾಜ ವೀರಶೆಟ್ಟಿಯವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಮಕ್ಕಳಿಗೆ ಸಸಿಗಳನ್ನು ನೀಡುವ ಮೂಲಕ ಉದ್ಘಾಟಿಸಿದರು.


ಶಾಲೆಯ ಮಕ್ಕಳು ವಿವಿಧ ಬಣ್ಣಗಳಿಂದ ರಚಿಸಿದ ಪರಿಸರದ ಚಿತ್ರಪಟಗಳನ್ನು ವೀಕ್ಷಿಸಿದ ಗಣ್ಯರು ವಿವಿಧ ಬಣ್ಣಗಳಿಂದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಅಧ್ಯಕ್ಷರು ಬಿಳಿಹಾಳೆಯ ಪುಟದ ಮೇಲೆ ಹಸ್ತಮುದ್ರಿಕೆಯನ್ನು ಗುರುತಿಸಿ, ಸಮಾರಂಭಕ್ಕೆ ಚಾಲನೆ ನೀಡಿದರು.
ನಂತರ ಆಡಳಿತ ಮಂಡಳಿಯ ಸದಸ್ಯರಾದ ಸಿ.ಜಿ ಜವಳಿ ಹಾಗೂ ಶಿವಲಿಂಗಪ್ಪ ರವರು ಹಾಗೂ ಆಡಳಿತಾಧಿಕಾರಿಗಳಾದ ಮಂಜುನಾಥಸ್ವಾಮಿ ರವರು ಬಹಳ ಮಾರ್ಮಿಕವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಾದ ನಾರಾಯಣಪ್ಪ, ಶ್ರೀಮತಿ ಶಿವಗಂಗಾ ಅವರು ಪರಿಸರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು.
ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ಮೋಮೆಂಟ್ ಆಫ್ ದ ಡೇ ಎನ್ನುವ ವಿನೂತನ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಸುನಿತಾ, ಶ್ರೀಮತಿ ಗಂಗಮ್ಮ ಹಾಗೂ ಶ್ರೀಮತಿ ನಿರ್ಮಲಾ ರವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಫರ್ಹಾದ್ ಶಿಕ್ಷಕರು ಮಾಡಿದರೆ, ಸ್ವಾಗತ ಭಾಷಣವನ್ನು ಶ್ರೀಮತಿ ಸುನಿತಾ ಶಿಕ್ಷಕಿ ಮಾಡಿದರು.
ಈ ಕಾರ್ಯಕ್ರಮಕ್ಕೆ ಶಿಕ್ಷಕಿಯರಾದ ಶ್ರೀಮತಿ ಸರೋಜಾ, ಶ್ರೀಮತಿ ನಾಗರತ್ನಾ, ಶ್ರೀಮತಿ ಮಮತಾ, ಶ್ರೀಮತಿ ಚೇತನಾ, ಬೋಧಕೇತರ ಸಿಬ್ಬಂದಿಯವರಾದ ಶ್ರೀಮತಿ ನೇತ್ರಾವತಿ ಆಯಾ, ಶ್ರೀಮತಿ ರುಕ್ಮಿಣಿ ಆಯಾ, ಶ್ರೀಮತಿ ರತ್ನಮ್ಮ ಆಯಾ ಎಲ್ಲ ರೀತಿಯ ಸಹಕಾರ ನೀಡಿದರು.

About Mallikarjun

Check Also

ಜೂ.17 ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ

KDP meeting chaired by District In-charge Minister Shivaraj Thangadagi on June 17 ಗಂಗಾವತಿ : ತಾಲೂಕು …

Leave a Reply

Your email address will not be published. Required fields are marked *