
ಗಂಗಾವತಿ ನಗರವು ಬ್ರಹತ್ ಮಟ್ಟದಲ್ಲಿ ಬೆಳೆದಿದ್ದು,ಇನ್ನೂ ಬೆಳೆಯುತ್ತಲೇ ಇದೆ. ನಗರವು ವಾಣಿಜ್ಯ ಕೇಂದ್ರವಾಗಿದ್ದು ನಗರದ ಸುತ್ತಮುತ್ತಲಿನ ಜನ ಮಾತ್ರವಲ್ಲದೆ ಬೇರೆಕಡೆಯಿಂದ ವ್ಯವಹಾರಕ್ಕಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ನಗರದಲ್ಲಿ ಸಂಚರಿಸುತ್ತಿವೆ. ಅದೇ ರೀತಿ ಗಂಗಾವತಿಯ ಸಮೀಪದ ಅಂಜನಾದ್ರಿ ಪ್ರಸಿದ್ದಿ ಹೊಂದಿದೆ, ಹುಲಿಗಿಯ ಹುಲಿಗೆಮ್ಮ ದೇವಿಗೆ ಬರುವ ಭಕ್ತಾದಿಗಳ ಜನಸಂಖ್ಯೆ ಅಧಿಕಾವಾಗಿದೆ. ರಾಯಚೂರು, ಲಿಂಗಸಗೂರು, ವಿವಿಧ ಊರುಗಳಿಂದ ಸಾವಿರಾರು ವಾಹನಗಳು ಗಂಗಾವತಿ ಒಳಗಡೆಯಿಂದಲೇ ಹೋಗುವದು ಕೂಡಾ ಅನಿವಾರ್ಯವಾಗಿರುತ್ತದೆ. ಇವುಗಳಲ್ಲದೆ ಗಂಗಾವತಿ ಸುತ್ತುಮುತ್ತು ಮರಳು ದಂಧೆ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದ್ದು ಅಲ್ಲದೇ ಕಲ್ಲು ಗಾಣಿಗರಿಕೆ ನಡೆಯುತ್ತಿದ್ದು ಎಲ್ಲಾ ವಾಹನಗಳು ನಗರದ ಒಳಗಡೆಯಿಂದಲೇ ಟ್ಯಾಕ್ಟರ್ಗಳು, ಲಾರಿಗಳು, ಟಿಪ್ಪರ್ ಗಳು ಭಾರಿ ವಾಹನಗಳು ಸೇರಿದಂತೆ ಪ್ರತಿನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿವೆ.ಇದರಿಂದ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿರುತ್ತದೆ. ಜೀವದ ಭಯದಿಂದ ಎಲ್ಲರೂ ಆತಂಕದಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದರ ಬಗ್ಗೆ ಕೂಡಲೇ ಪರಿಶೀಲನೆ ಮಾಡಿ ಶೀಘ್ರದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ಗಂಗಾವತಿಯ ತಹಶೀಲ್ದಾರ್ ರ ಮೂಲಕ ಕೊಪ್ಪಳ ಜಿಲ್ಲೆ. ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಮನವಿ ಸಲ್ಲಿಸಿದರು.