Breaking News

ತಾಲೂಕು ಮಟ್ಟದ ಸಮನ್ವಯ ಸಮಿತಿಯಿಂದ ಸಭೆ

Meeting of the Taluk Level Coordination Committee

ಜಾಹೀರಾತು

ಗಂಗಾವತಿ:ನ್ಯಾಯಮೂರ್ತಿ ಡಾll H. N. ನಾಗಮೋಹದಾಸ ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮಿತಿ 2025 ರನ್ವಯ ತಹಸೀಲ್ದಾರ್ ಗಂಗಾವತಿ ರವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ಈ ಸಮೀಕ್ಷೆಯಿಂದ ಹೊರಗೂಳಿಯಬಾರದೆಂದು ಪರಿಶಿಷ್ಟ ಜಾತಿಯ ಮುಖಂಡರು ಹಾಗೂ ಗಣತಿ ಮೇಲ್ವಿಚಾರಕರಿಗೆ ತಾಲೂಕು ಮಟ್ಟದ ಸಮನ್ವಯ ಸಮಿತಿಯಿಂದ ಸಭೆ ಏರ್ಪಡಿಸಲಾಗಿತ್ತು,ದಿನಾಂಕ 31- 05- 2025 ರಂದು ಸಮಯ ಬೆಳಗ್ಗೆ 10 ಗಂಟೆಗೆ ಮಾನ್ಯ ತಹಶೀಲ್ದಾರ ಕಾರ್ಯಾಲಯ ಗಂಗಾವತಿ ಇಲ್ಲಿ ಏರ್ಪಡಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಮಾನ್ಯ ಮಹಾಂತಗೌಡ ಗೌಡರ, ತಹಸಿಲ್ದಾರರು ಗ್ರೇll, ಶ್ರೀಮತಿ ಜಯಶ್ರೀ ಆರ್, ಸಿ ಡಿ ಪಿ ಓ ಗಂಗಾವತಿ. ಶ್ರೀ ಸಂಗಪ್ಪ ಜೈನಾಪುರ ಕಚೇರಿ ಅಧೀಕ್ಷ ಕರು ಸಮಾಜ ಕಲ್ಯಾಣ ಇಲಾಖೆ, ಗಂಗಾವತಿ.ಶ್ರೀ ಮಂಜುನಾಥ BEO ಆಫೀಸ ಗಂಗಾವತಿ,ಸಂಪನ್ಮೂಲ ವ್ಯಕ್ತಿಗಳು,
ತಾಲೂಕಿನ ಗಣತಿ ಮೇಲ್ವಿಚಾರಕರು, ವಿವಿಧ ಪರಿಶಿಷ್ಟ ಜಾತಿಯ ಮುಖಂಡರು ಭಾಗವಹಿಸಿದ್ದರು, ಶೇ 99%ರಷ್ಟು ಗಣತಿ ಕಾರ್ಯ ಮುಗಿದಿದ್ದು, ಇನ್ನೂ 1% ತಾಂತ್ರಿಕ ಕಾರಣ ಇತರೆ ಕಾರಣಗಳಿಂದ ಉಳಿದವುಗಳನ್ನು ಒಂದು ದಿನದಲ್ಲಿ ಪೂರ್ಣಗೊಳಿಸುವದಾಗಿ ಸಭೆಯಲ್ಲಿ ಚರ್ಚಿಸಲಾಯಿತು,

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *