Breaking News

ನಾಗಮಲೆಗೆ ತೆರಳುವ ಭಕ್ತರಿಗೆ ಜೀಪಿನ ವ್ಯವಸ್ಥೆಯನ್ನು ಮಾಡಲು ಗ್ರಾಮಸ್ಥರಿಂದ ಮಾಜಿ ಶಾಸಕ ಆರ್ ನರೇಂದ್ರರಿಗೆ ಮನವಿ.

Villagers appeal to former MLA R. Narendra to arrange jeeps for devotees going to Nagamale.

ಜಾಹೀರಾತು

ವರದಿ : ಬಂಗಾರಪ್ಪ .ಸಿ .‌
ಹನೂರು :ಸಾವಿರಾರು ಜನರು ಭಕ್ತಿಯಿಂದ ತಮ್ಮ ಆರಾದ್ಯ ದೈವ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಗಮಲೆಗೆ ವಾಹನಗಳಲ್ಲಿ ತೆರಳಲು ನಾನು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.
ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಆಹಾವಾಲು ಸ್ವೀಕರಿಸುತ್ತಿದ್ದ ಸಮಯದಲ್ಲಿ ಇಂಡಿಗನಥ ಗ್ರಾಮದ ಮುಖಂಡರು ಆಗಮಿಸಿ ಮಾಜಿ ಶಾಸಕರ ಬಳಿಯಲ್ಲಿ ಚರ್ಚಿಸುತ್ತ ನಾಗಮಲೆಗೆ ಬರುವ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಬೇಕೆಂದು ಹಾಗೂ ಇಂಡಿಗನಥದವರೆಗೆ ಭಕ್ತರಿಗೆ ಹಿಂದಿನಂತೆ ಜೀಪ್ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಮಾಜಿ ಶಾಸಕರಾದ ಆರ್ ನರೇಂದ್ರ ರಾಜುಗೌಡ ರವರಿಗೆ ಮನವಿ ಮಾಡಿದರು. ತಕ್ಷಣವೇ ಸ್ಪಂದಿಸಿ ಸಹಕರಿಸುವುದಾಗಿ ತಿಳಿಸಿದರು .
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಹಳೆಯೂರು -1ವಾರ್ಡಿನ ಗ್ರಾಮ ಪಂಚಾಯಿತಿ ಸದಸ್ಯರಾದ ತಮ್ಮಯ್ಯ ರವರ ನಿಧನದ ನಂತರ ತೆರವಾದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು.ಈ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಿರಿಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದರು . ಇವರಿಗೆ ಜನಪ್ರಿಯ ಮಾಜಿ ಶಾಸಕರಾದ ಆರ್ ನರೇಂದ್ರ ರಾಜುಗೌಡ ಸನ್ಮಾನಿಸಿದರು.
ಇದೇ ಸಮಯದಲ್ಲಿ ಕಾಂಗ್ರೆಸ್ ಮುಖಂಡರು ಸೇರಿದಂತೆ ಅನೇಕರು ಹಾಜರಿದ್ದರು.

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *