Breaking News

ಪಂಚಾಯತ್ ರಾಜ್ ಇಲಾಖೆಯಅಧಿಕಾರಿಗಳಿಂದ 15 ಲಕ್ಷವಸೂಲಿಗೆ ಆದೇಶಆರ್ಥಿಕನಿಯಮಗಳ ಉಲ್ಲಂಘನೆಯಡಿ ನಿಯಮಾನುಸಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು

Order to recover Rs 15 lakh from Panchayat Raj Department officials Recommendation for disciplinary action as per rules for violation of financial rules

ಜಾಹೀರಾತು

ಗಂಗಾವತಿ, ಮೇ.28: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಮಾದಿನಾಳ ಮತ್ತು ಮರಳಿ ಗ್ರಾ.ಪಂ.ನ 06 ಚೆಕ್ ಡ್ಯಾಂ ಕಾಮಗಾರಿಗಳ ಬಗ್ಗೆ ದಾಖಲೆಗಳ ಸಮೇತ ಎಸ್.ಹೆಚ್.ಮುಧೋಳ ಗಂಗಾವತಿ ಅವರು ದೂರನ್ನು ಸಲ್ಲಿಸಿದ್ದು, ದೂರುದಾರರು ದೂರಿದಂತೆ ಮನರೇಗಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾಮಾಗ್ರಿ ಸರಬರಾಜು ಮಾಡಿದ ವೆಂಡರ್‍ಗಳಿಂದ ಒಟ್ಟು 15 ಲಕ್ಷ ರೂ. ವಸೂಲು ಮಾಡಿ ಕೆ.ಟಿ.ಟಿ.ಪಿ ಆರ್ಥಿಕ ಮಾರ್ಗಸೂಚಿ

ಉಲ್ಲಂಘನೆಗಾಗಿ ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಶಿಫಾರಸ್ಸು ಮಾಡಿ ಕೊಪ್ಪಳ ಜಿಲ್ಲಾ ಪಂಚಾಯಿತಿ ಒಂಬುಡ್ಸ್‍ಪರ್ಸನ್ ವೀರಣ್ಣ ಕಳಕಪ್ಪ ಕಮತರ ಆದೇಶ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಮಾದಿನಾಳ ಮತ್ತು ಮರಳಿ ಗ್ರಾ.ಪಂ.ನ ಎಲ್ಲಾ 06 ಚೆಕ್ ಡ್ಯಾಂ ಕಾಮಗಾರಿಗಳ ಅಂದಾಜು ಪತ್ರಿಕೆಯ ಮೊತ್ತ ರೂ.5.00 ಲಕ್ಷ ಮೀರಿದ್ದು ಕೆ.ಟಿ.ಪಿ.ಪಿ. ಕಾಯ್ದೆ ಉಲ್ಲಂಘನೆ ಮಾಡಿ ಕೊಟೇಷನ್ ಮೂಲಕ ಸಾಮಾಗ್ರಿ ಪೂರೈಕೆ ಮಾಡಿರುವುದು ನಿಯಮ ಬಾಹೀರ. ಅಂದಾಜು ಪತ್ರಿಕೆಯಲ್ಲಿ ನಿಗದಿಪಡಿಸಿದ ಮೊತ್ತದಲ್ಲಿ ಶೇ.90 ರಷ್ಟು ಕೂಲಿ ಮೊತ್ತ ಪಾವತಿಸಿದ ನಂತರ ಸಾಮಾಗ್ರಿ ಮೊತ್ತಕ್ಕೆ ಪೂರ್ಣ ಪ್ರಮಾಣದ ಎಫ್.ಟಿ.ಓ. ಸೃಜಿಸಬೇಕೆಂದು ಸ್ಪಷ್ಟವಾದ ನಿರ್ದೇಶನವಿದ್ದರೂ ಮಾರ್ಗಸೂಚಿ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೇ ಇಲ್ಲಿಯರೆಗೆ ಕೂಲಿಕಾರರ ಮೊತ್ತ ಬಟವಡೆಗೆ ಯಾವುದೇ ಬೇಡಿಕೆ ಕೂಡಾ ಕಡತಗಳಲ್ಲಿ ಲಭ್ಯವಿಲ್ಲದಿರುವುದು ಅನುಷ್ಠಾನ ವೈಪರಿತ್ಯದ ಕೈಗನ್ನಡಿಯಾಗಿದೆ. ಸದರಿ ಕಡತಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿದ ಪ್ರಯುಕ್ತ, ಲೆಕ್ಕ ಪರಿಶೋಧನೆಯಾಗಿಲ್ಲ. ಕಡತದಲ್ಲಿ ಭುವನ್ ಜೀಯೋ ಟ್ಯಾಗ್ ಭಾವಚಿತ್ರಗಳು ಲಭ್ಯವಿಲ್ಲ. 03 ಕಾಮಗಾರಿಗಳಿಗೆ ಸಾಮಾಗ್ರಿ ಪೂರೈಸಿದ ಸರಬರಾಜುದಾರರಾದ ಓಂ ಸಾಯಿ ಹಾರ್ಡ್‍ವೇರ್ ಅವರು ದಿ:19.01.2022 ರಂದು ಜಿ.ಎಸ್.ಟಿ. ನೋಂದಣಿಯಾಗಿದ್ದು ದಿ:16.01.2021 ರಂದೇ ಬಿಲ್ಲನ್ನು ಕಛೇರಿಗೆ ಸಲ್ಲಿಸಿದ್ದು ಆರ್ಥಿಕ ನಿಯಮಗಳ ಉಲ್ಲಂಘನೆಯಾಗಿದೆ. ಸಾಮಾಗ್ರಿ ಪೂರೈಸಿದ ಮೂಲ ವೆಂಡರ್ ಬದಲಾವಣೆಗೆ ಮಾನ್ಯ ಆಯುಕ್ತರು ಗ್ರಾ.ಅ. ಬೆಂಗಳೂರು ಹಾಗೂ ಮಾನ್ಯ ಮು.ಕಾ.ನಿ.ಅ. ಜಿ.ಪಂ. ಕೊಪ್ಪಳರವರಿಂದ ನಿಯಮಾನುಸಾರ ಅನುಮೋದನೆ ಪಡೆದಿರುವುದಿಲ್ಲ. ಅಲ್ಲದೇ ರೂ.5.00 ಲಕ್ಷ ಮೀರಿದ ಮೊತ್ತಕ್ಕೆ ಕೆ.ಟಿ.ಪಿ.ಪಿ. ನಿಯಮಗಳನ್ವಯ ಟೆಂಡರ್ ಕರೆಯದೇ ಕೋಟೇಶನ್ ಮೇಲೆ ಸಾಮಾಗ್ರಿ ಖರೀದಿ ಕೈಗೊಂಡಿದ್ದು ನಿಯಮಬಾಹೀರ. ಆದ್ದರಿಂದ ಸದರಿ ಮೊತ್ತವನ್ನು ಸಿದ್ದಪ್ಪ ಕಿ.ಇಂ., ಎಸ್.ಡಿ.ನಾಗೋಡ್.(ನಿ) ಸ.ಕಾ.ನಿಅ.ಪಂ.ರಾ.ಇಂ.ಉಪ ವಿಭಾಗ ಗಂಗಾವತಿ,  ರವಿಪ್ರಸಾದ,(ನಿ), ಕಾ.ನಿ.ಇಂ.ಪಂ.ರಾ.ಇಂ. ವಿಭಾಗ ಕೊಪ್ಪಳರವರಿಂದ ತಲಾ ರೂ.2.98694 ಲಕ್ಷ ಮೊತ್ತವನ್ನು ಹಾಗೂ ಶಿವಕುಮಾರ ಪೂಜಾರ, ಸ.ಕಾ.ನಿ.ಇಂ.ಪಂ.ರಾ.ಇಂ. ಉಪ ವಿಭಾಗ ಗಂಗಾವತಿ ಮತ್ತು ರಂಗಯ್ಯ ಬಡಿಗೇರ, ಕಾ.ನಿ.ಇಂ.ಪಂ.ರಾ.ಇಂ.ವಿಭಾಗ ಕೊಪ್ಪಳ ಇವರಿಂದ ತಲಾ ರೂ. 1.49347 ಲಕ್ಷ ಅಧಿಕಾರಿಗಳಿಂದ ಹಾಗೂ ವೆಂಡರ್‍ರವರಿಂದ ವಸೂಲಾತಿಗೆ ಶಿಫಾರಸ್ಸು ಮಾಡುವುದಲ್ಲದೇ ನಿಯಮಾನುಸಾರ ಶಿಸ್ತಿನ ಕ್ರಮ ಜರುಗಿಸಲು ಶಿಫಾರಸ್ಸು ಮಾಡಿದೆ

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *