The banana crop grown on two acres of land in the village has been destroyed by the torrential rain.

ವರದಿ : ಬಂಗಾರಪ್ಪ .ಸಿ .
ಹನೂರು :ದಿನವಿಡೀ ಸುರಿದ ಬಾರಿ ಮಳೆಗೆ ಹಲವಾರು ಗ್ರಾಮಗಳಲ್ಲಿ ಸಂಚಾರಿ ರಸ್ತೆಯೆ ಗುಂಡಿಮಯವಾಗಿದೆ ಅಲ್ಲದೆ ರೈತರು ಬೆಳೆದ ಬೆಳೆಗಳು ಮಳೆಯಿಂದ ನೆಲಕಚ್ಚಿವೆ ಇದರಿಂದ ನಮಗೆ ಅಪಾರ ನಷ್ಟ ಉಂಟಾಗಿದೆ ಎಂದು ಕಣ್ಣೂರು ಗ್ರಾಮದ ಬಸವರಾಜಪ್ಪ ಎಂಬುವವರು ತಿಳಿಸಿದರು.
ನಂತರ ಮಾತನಾಡಿದ ಅವರು
ಹನೂರು ತಾಲ್ಲೂಕಿನ ಕಣ್ಣುರು ಗ್ರಾಮದಲ್ಲಿನ ಸರ್ವೆ ನಂಬರ್ 134 ರಲ್ಲಿನ ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ಅಂದಾಜು ವೆಚ್ಚ ನಾಲ್ಕು ಲಕ್ಷವೆಚ್ಚದ ಒಂದು ಸಾವಿರ ಬಾಳೆ ಗೊನೆಯನ್ನು ಹೊಂದಿರುವ ಬಾಳೆ ಬೆಳೆಯು ನಷ್ಠ ಹೊಂದಿದೆ ಈ ಕೂಡಲೆ ಸಂಬಂದಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರವನ್ನು ನೀಡಬೇಕಾಗಿದೆ ಎಂದು ತಿಳಿಸಿದರು. ಇದೇ ರೀತಿಯಲ್ಲಿ ನಿತ್ಯ ಸುರಿಯುತ್ತಿರುವ ಮಳೆಯಿಂದ ಹಲವಾರು ಗ್ರಾಮಗಳಲ್ಲಿ ಬೆಳೆಗಳು ನೆಲ ಕಚ್ಚಿವೆ ಎನ್ನಲಾಗಿದೆ.