Bharat Sugamya Yatra campaign launched

ಸರಕಾರಿ, ಸಾರ್ವಜನಿಕ ಕಟ್ಟಡಗಳು ವಿಕಲಚೇತನ ಸ್ನೇಹಿಯಾಗಿರಲಿ–ತಾ.ಪಂ. ಇಓ ರಾಮರೆಡ್ಡಿ ಪಾಟೀಲ್ ಹೇಳಿಕೆ
ಗಂಗಾವತಿ: ತಾಲೂಕು ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೊಪ್ಪಳ ಹಾಗೂ ಎಂಆರ್ ಡಬ್ಲ್ಯು, ವಿಆರ್ ಡಬ್ಲ್ಯು ಯುಆರ್ ಡುಬ್ಲ್ಯು ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಭಾರತ ಸುಗಮ್ಯ ಯಾತ್ರೆ ಅಭಿಯಾನಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಸೋಮವಾರ ಚಾಲನೆ ನೀಡಿದರು.
ನಂತರ ತಾಪಂ ಇಓ ರಾಮರೆಡ್ಡಿ ಪಾಟೀಲ್ ಅವರು ಮಾತನಾಡಿ, ವಿಕಲಚೇತನರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಭಾರತ ಸುಗಮ್ಯ ಯಾತ್ರೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸರಕಾರಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಓಡಾಡಲು ವಿಕಚೇತನರಿಗೆ ಅಡೆ-ತಡೆ ರಹಿತ ವಾತಾವರಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಸರಕಾರಿ ಕಚೇರಿ & ಕಟ್ಟಡ, ಸಾರ್ವಜನಿಕ ಕಟ್ಟಡಗಳು , ಮನರಂಜನೆ ಸ್ಥಳಗಳು, ಪಾರ್ಕ್ ಗಳು, ಗ್ರಂಥಾಲಯ, ಮಾರುಕಟ್ಟೆ, ಪ್ರವಾಸಿ ತಾಣಗಳು, ಸಾರ್ವಜನಿಕ ಶೌಚಾಲಯಗಳಲ್ಲಿ ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳು ಇರಬೇಕು ಎಂದರು.
ಸರಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳನ್ನು ವಿಕಲಚೇತನ ಸ್ನೇಹಿಯಾಗಿ ಮಾಡಲು ಭಾರತ ಸುಗಮ್ಯ ಯಾತ್ರೆ ಅಭಿಯಾನದಡಿ ಎಂಆರ್ ಡಬ್ಲ್ಯು (ತಾಲೂಕು ವಿವಿದುದ್ದೇಶ ಪುನರ್ವಸತಿ ಕಾರ್ಯಕರ್ತೆ), ಯುಆರ್ ಡುಬ್ಲ್ಯು (ನಗರ ವಿವಿದುದ್ದೇಶ ಪುನರ್ವಸತಿ ಕಾರ್ಯಕರ್ತೆ) , ವಿಆರ್ ಡಬ್ಲ್ಯು ಗಳು(ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು) ವಿಕಲಚೇತನರಿಗೆ ಮೂಲಸೌಕರ್ಯ ಕಲ್ಪಿಸಲು ಸ್ಥಳ ಪರಿಶೀಲನೆ ಮಾಡಿ YES TO ACCESS ಎಂಬ ಮೊಬೈಲ್ ಆ್ಯಪ್ ನಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.
ಈ ವೇಳೆ, ತಾಪಂ ಸಿಬ್ಬಂದಿಗಳಾದ ರಾಘವೇಂದ್ರ, ಸಂತೋಷ, ಸುಮಂಗಲಾ, ರಂಗಮ್ಮ, ಶರಣಪ್ಪ, ಭೀಮರಾವ್, ಶಿವಕುಮಾರ್, ಸಂತೋಷ, ಎಂಆರ್ ಡಬ್ಲ್ಯು ಮಂಜಾಳ ಪುರಾಣಿಕಮಠ, ವಿಆರ್ ಡಬ್ಲ್ಯು ಗಳಾದ ಬಸವರಾಜ ಗೋನಾಳ, ಶಮಿಬೇಗಂ, ಯಮನಮ್ಮ, ವೀರಣ್ಣ, ಭೀಮೇಶ ಸೇರಿ ಇತರರು ಇದ್ದರು.