New State Vice President of All Karnataka Brahmin Mahasabha

ಉಪಾಧ್ಯಕ್ಷರಾಗಿ ಕೆ.ಜಿ. ಕುಲಕರ್ಣಿ, ಪ್ರಾಣೇಶ ಮಾದಿನೂರ ನೇಮಕ
ಕೊಪ್ಪಳ, 1- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ರಾಜ್ಯ ಉಪಾಧ್ಯಕ್ಷರಾಗಿ ಸಮಾಜದ ಹಿರಿಯರಾದ ಡಾ. ಕೆ.ಜಿ. ಕುಲಕರ್ಣಿ ಮತ್ತು ಪ್ರಾಣೇಶ ಮಾದಿನೂರು ಅವರನ್ನು ನೇಮಿಸಿ ಮಹಾಸಭಾದ ನೂತನ ರಾಜ್ಯಾಧ್ಯಕ್ಷ ಎಸ್. ರಘುನಾಥ್ ಆದೇಶ ಹೊರಡಿಸಿದ್ದಾರೆ.
ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದ ತನಕ ಅವರ ಅಧಿಕಾರದ ಅವಧಿ ಇರಲಿದೆ.
ಇತ್ತೀಚೆಗೆ ನಡೆದ ಮಹಾಸಭಾದ ಜಿಲ್ಲಾಪ್ರತಿನಿಧಿ ಚುನಾವಣೆಯಲ್ಲಿ ಪ್ರಾಣೇಶ್ ಅವರು ರಘುನಾಥ್ ಬಣದಿಂದ ಸ್ಪರ್ಧಿಸಿದ್ದರು.