Breaking News

ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕರಾದ ಎಮ್ ಆರ್ ಮಂಜುನಾಥ್ ರಿಂದ ಸೂಚನೆ ‌

MLA M R Manjunath has instructed officials to ensure that there are no lapses in the cabinet meeting.

ಜಾಹೀರಾತು
IMG 20250419 WA0095


ವರದಿ : ಬಂಗಾರಪ್ಪ .ಸಿ .
ಹನೂರು:ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ ತಿಂಗಳು ಏಪ್ರಿಲ್ 24 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಸ್ಥಳವನ್ನು ತಜ್ಞರ ಅಭಿಪ್ರಾಯ ಮೇರೆಗೆ ದೀಪದ ಗಿರಿ ವಡ್ಡುವಿನ 108 ಅಡಿ ಪ್ರತಿಮೆ ಆವರಣದ ಬದಲಾಗಿ ನೂತನ 376 ವಸತಿಗೃಹದ ಮುಂಭಾಗದ ಖಾಲಿ ನಿವೇಶನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಎಂ. ಆರ್ ಮಂಜುನಾಥ್ ಮಾಹಿತಿಯನ್ನು ನೀಡಿದರು.
ನಂತರ ಮಾದ್ಯಮದವರ ಜೋತೆಯಲ್ಲಿ ಮಾತನಾಡಿದ ಅವರು
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ 108 ಅಡಿ ಪ್ರತಿಮೆ ಆವರಣದ ದೀಪದಗಿರಿ ಒಡ್ಡಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ತಜ್ಞರ ಅಭಿಪ್ರಾಯ ಮೇರೆಗೆ ಸ್ಥಳ ಬದಲಾಯಿಸಲಾಗಿದೆ.

ದೀಪದ ಗಿರಿ ಒಡ್ಡು ತುಂಬಾ ಎತ್ತರ ಇರುವುದರಿಂದ ಆ ಸ್ಥಳದಲ್ಲಿ ವಿಪರೀತ ಗಾಳಿ ಬೀಸುವ ಕಾರಣದಿಂದ ಸಭೆ ನಡೆಸಲು ತೊಡಕುಂಟಾಗಬಹುದೆಂದು ಜೊತೆಗೆ ಮಳೆ ಸಂಧರ್ಭದಲ್ಲಿ ಈ ಸ್ಥಳವು ಸೂಕ್ತವಲ್ಲ ಅದಲ್ಲದೆ ಇಲ್ಲಿ ಕಲ್ಲು ಮಣ್ಣು ಮಿಶ್ರಿತವಾಗಿರುವುದರಿಂದ ಸಭೆ ಮಾಡಲು ಹಾಕಲಾಗುವ ಶಾಮಿಯಾನಗಳು ಬಿಗಿ ಇರುವುದಿಲ್ಲ ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ನೂತನ 376 ಕೊಠ್ಠಡಿಯ ಮುಂಬಾಗ ಸಭೆಗೆ ಬರುವ ವಾಹನಗಳನ್ನು ನಿಲ್ಲಿಸಲು ಆಯೋಜಿಸಲಾಗಿತ್ತು, ಇಂದು ಸಭೆಯನ್ನು ಇಲ್ಲಿ ಆಯೋಜನೆ ಮಾಡಲಾಗಿದ್ದು, ವಾಹನಗಳ ನಿಲುಗಡೆಯನ್ನು ನೂತನ ವಸತಿ ಗೃಹದ ಹತ್ತಿರ ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಉಪಕಾರ್ಯದರ್ಶಿ ಚಂದ್ರಶೇಖರ್, ಅಪಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಶಿಧರ್,ಡಿ.ವೈ ಎಸ್. ಪಿ ಧರ್ಮೇಂದ್ರ,ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನನ್,ಮಹದೇವಸ್ವಾಮಿ, ಮುಖಂಡರುಗಳಾದ ರಾಜುಗೌಡ,ವಿಜಯ್ ಕುಮಾರ್ , ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಉಪಸ್ಥಿತರಿದ್ದರು…

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.