Inauguration of Sri (Lord) Kari Thimmarayaswamy, Mahadeshwara Temple in Kuratti Hosur village.

ವರದಿ : ಬಂಗಾರಪ್ಪ .ಸಿ .
ಹನೂರು:ಸಾಲೂರು ಮಠಕ್ಕೂ ಕುರಟ್ಟಿ ಹೊಸೂರು ಸುತ್ತಮುತ್ತಲಿನ ಜನಾಂಗಕ್ಕೂ ಮತ್ತು ವಿದ್ಯಾರ್ಥಿಗಳಿಗೂ ಅವಿನಾಭಾವ ಸಂಬಂಧವಿದೆ ಅದನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ ನನಗಿಂತ ಹಿರಿಯ ವಿದ್ಯಾರ್ಥಿಗಳು ಮಠಕ್ಕೆ ತಮ್ಮದೆ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ ಈ ಭಾಗದಲ್ಲಿ ಯಾವುದೇ ಧಾರ್ಮಿಕ ಕಾರ್ಯ ಮಾಡಿದರು ಸಹ ಅದು ಶ್ರೀ ಮಠದಲ್ಲಿ ಮಾಡಿದಂತೆಯೆ ಭಾಸವಾಗುತ್ತದೆ ಈ ದೇವಾಲಯವನ್ನು ನಿರ್ಮಿಸಿರುವ ಎಲ್ಲಾ ಗ್ರಾಮಸ್ಥರಿಗೂ ಶುಭವಾಗಲಿ ಎಂದು ಶ್ರೀ ಸಾಲೂರು ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ತಿಳಿಸಿದರು.
ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾಮದ ಶ್ರೀ (ಕರ್ತ )ಕರಿ ತಿಮ್ಮರಾಯಸ್ವಾಮಿ ದೇವಸ್ಥಾನ ಮತ್ತು ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಶ್ರೀ ಗಳು
ಸಾಲೂರು ಬೃಹನ್ಮಠಕ್ಕೂ ಮಲೆ ಮಹದೇಶ್ವ ರರಿಗೂ ಅವಿನಾಭಾವ ಸಂಬಂಧವಿದೆ. ಮಲೆ
ಮಹದೇಶ್ವರರು ತಪಸ್ಸು ಮಾಡಿದ ಜಾಗವು ಇಂದಿಗೂ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡಿ ತಮ್ಮ ಹರಕೆ ಸಮರ್ಪಿಸಿ ಉತ್ತಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಮಾಜಿ ಶಾಸಕರಾದ ಆರ್ ನರೇಂದ್ರ ಮಾತನಾಡಿ ಪ್ರಪಂಚದಲ್ಲಿ ನಮ್ಮ ದೇಶವು ಬಹಳ ಶಾಂತಿಯ ಸಮೃದ್ಧಿಯ ದೇಶವಾಗಿದ್ದು ಧಾರ್ಮಿಕವಾಗಿ ಮುಂದುವರಿದ ದೇಶ ಅಂತಹ ದೇಶದಲ್ಲಿ ಹುಟ್ಟಿರುವುದೆ ನನ್ನ ಸೌಭಾಗ್ಯ . ಕುರಟ್ಟಿಹೊಸೂರು ಗ್ರಾಮದಲ್ಲಿ ಮಾಡಿರುವ ದೇವಾಲಯವು ಬಹಳ ಅದ್ಭುತವಾಗಿ ಮೂಡಿ ಬಂದಿದೆ ಎಲ್ಲಾ ಪೂಜೆ ಕಾರ್ಯವು ವಿಧಿವತ್ತಾಗಿ ನಡೆಯಲಿ ಎಂದರು .
ಇದೇ ಸಂದರ್ಭದಲ್ಲಿ ಶಾಸಕರಾದ ಎಮ್ ಆರ್ ಮಂಜುನಾಥ್ .ಮಾಜಿ ಶಾಸಕರಾದ ಪರಿಮಳ ನಾಗಪ್ಪ ,ದತ್ತೇಶ್ ಕುಮಾರ್ . ಮುಖಂಡರಾದ ಉದ್ಯಮಿ ಪೊನ್ನಾಚಿ ರಂಗಸ್ವಾಮಿ,ಅರಗು ವೆಂಕಟೇಶ್ ,ಗೋಪಾಲ್ ,ಶ್ರೀರಂಗಶೇಟ್ರು . ವಿಜಯಕುಮಾರ್ , ಊರ ಶೇಟ್ರುಗಳು ,ಸದಸ್ಯರುಗಳಾದ ಬಸವರಾಜು ,ದಂಟಳ್ಳಿ ಶಿವು ಸೇರಿದಂತೆ ಇನ್ನಿತರರು ಹಾಜರಿದ್ದರು .