Breaking News

ಗ್ಯಾರಂಟಿ ಸಮಿತಿ ಗೌರವಧನ ನಿಲ್ಲಿಸಿ: ಕೆಆರ್‌ಎಸ್ ಗಣೇಶ್

Stop guarantee committee honorarium: KRS Ganesh

ಜಾಹೀರಾತು
03 012 1


ಗಂಗಾವತಿ: ನಾಡಿನ ಜನತೆಯ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಕರ್ನಾಟಕ ಸರಕಾರ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಆದರೆ ಅನುಷ್ಠಾನಕ್ಕಾಗಿ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿ ಸರಕಾರದಿಂದ ಕೊಡುತ್ತಿರುವ ಗೌರವಧನ ಇತರೆ ಭತ್ಯೆ ಕೂಡಲೆ ರದ್ದು ಮಾಡಿ ಬೊಕ್ಕಸದ ಭಾರ ಕಡಿಮೆ ಮಾಡಬೇಕೆಂದು ಕೆಆರ್‌ಎಸ್ ಪಕ್ಷದ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಗಣೇಶ್ ಅಮೃತ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗ್ಯಾರಂಟಿ ಯೋಜನೆಗಳಿಂದಾಗಿ ಸಾಕಷ್ಟು ಹೊರೆಯಾಗಿದೆ, ಗಾಯದ ಮೇಲೆ ಬರೆ ಎಳೆದಂತೆ ಬೆಲೆ ಏರಿಕೆ, ಸೇವಾ ಶುಲ್ಕಗಳಲ್ಲಿ ಹೆಚ್ಚಳ ನಾಡಿನ ಜನತೆ ತತ್ತರಗೊಂಡಿದ್ದಾರೆ. ಸರಕಾರದಿಂದ ಅಭಿವೃದ್ಧಿ ಯೋಜನೆಗಳಿಗೆ ಬಿಡಿಗಾಸು ಬಿಡುಗಡೆಗೊಳ್ಳುತ್ತಿಲ್ಲ, ಬರಿದಾಗಿದೆ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಅದರಲ್ಲಿ ಗೌರವಧನದ ಹೊರೆ ಬೇರೆ, ಅದಕ್ಕಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಪದಾಧಿಕಾರಿಗಳಿಗೆ ಸಂಬಳ ನೀಡುವುದನ್ನು ನಿಲ್ಲಿಸಿ, ಸೇವೆಯ ಅಗತ್ಯವಿದ್ದಲ್ಲಿ ಕೆಆರ್‌ಎಸ್ ಪಕ್ಷದ ಸರ್ವ ಸದಸ್ಯರು ಉಚಿತವಾಗಿ ದುಡಿಯಲು ಸಿದ್ದರಿದ್ದು, ಸಿಎಂ ಸಿದ್ದರಾಮಯ್ಯ ಅವರು ನಮ್ಮ ಅಗ್ರಹವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಗಣೇಶ್ ಮನವಿ ಮಾಡಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.