Breaking News

ಅದ್ದೂರಿಯಾಗಿಜರುಗಿದ ಶ್ರೀ ಮಾರುತೇಶ್ವರ ರಥೋತ್ಸವ,,

The grand Sri Maruteshwara Rathtsava festival

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.

ಕೊಪ್ಪಳ : ತಾಲೂಕಿನ ಇರಕಲ್ ಗಡ ಗ್ರಾಮದಲ್ಲಿ ಸೋಮವಾರದಂದು ಸಾಯಂಕಾಲ ಶ್ರೀ ಮಾರುತೇಶ್ವರನ ಮಹಾರಥೋತ್ಸವವು ಸಹಸ್ರಾರು ಭಕ್ತಾಧಿಗಳ ಜಯಘೋಷದೊಂದಿಗೆ ವಿಜೃಂಭಣೆಯಿಂದ ಜರಗಿತು.

ಗ್ರಾಮದ ಶ್ರೀ ಮಾರುತೇಶ್ವರನ ಮಹಾ ರಥೋತ್ಸವಕ್ಕೆ ಕೊಪ್ಪಳ ಸಂಸ್ಥಾನ ಗವಿ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕುದರಿಮೋತಿ ಸಂಸ್ಥಾನ ಮಠದ ವಿಜಯ ಮಹಾಂತೇಶ್ವರ ಮಹಾಸ್ವಾಮಿಗಳು ಹಾಗೂ ಕುಕನೂರು ಪಟ್ಟಣದ ಮುಂಡರಗಿ ಶ್ರೀಅನ್ನದಾನೇಶ್ವರ ಶಾಖಾಮಠದ ಮಹದೇವ ಮಹಾಸ್ವಾಮಿಗಳು ಚಾಲನೆ ನೀಡಿದರು.

ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಮಾರುತೇಶ್ವರನಿಗೆ ವಿಷೇಶ ಅಭಿಷೇಕ ಜರುಗಿತು, ಈ ವೇಳೆ ಹರಕೆ ಹೊತ್ತ ಭಕ್ತಾಧಿಗಳು ದಿರ್ಘದಂಡನೆ ಹಾಕಿದರು.

ಈ ವೇಳೆ ವಿವಿಧ ಪೂಜಾ ಕೈಂಕರ್ಯಗಳು ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ರಥೋತ್ಸವದ ನಂತರದಲ್ಲಿ ವಿವಿಧ ಮಠಾಧೀಶರಿಂದ ಆಶಿರ್ವಚನ ಜರುಗಿದವು ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು

ರಥೋತ್ಸವಕ್ಕೂ ಮುನ್ನ ದಿನ ಭಾನುವಾರ ಸಂಜೆ ಲಘು ರಥೋತ್ಸವ ನಡೆಯಿತು. ಬೆಳಿಗ್ಗೆ ಜೋಡಿ ಎತ್ತುಗಳ ಭಾರ ಎಳೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು .

ಸ್ಪರ್ಧೆಯಲ್ಲಿ ಸುತ್ತಮುತ್ತಲಿನ ಸುಮಾರು ಒಂದು 20 ರಿಂದ 30 ಜೋಡಿಗಳು ವಿವಿಧ ಗ್ರಾಮದ ಎತ್ತುಗಳು ಭಾಗವಹಿಸಿದ್ದು ಪ್ರಥಮ ಬಹುಮಾನ 15 ತೊಲೆ ಬೆಳ್ಳಿ, ದ್ವಿತೀಯ ಬಹುಮಾನ ಹತ್ತು ತೊಲೆ ಬೆಳ್ಳಿ ಘೋಷಿಸಿದರು. ಪ್ರಥಮ ಬಹುಮಾನವನ್ನು ಲಾಯದುಣಸಿ ಗ್ರಾಮದ ಜೋಡೆತ್ತುಗಳು ಪಡೆದುಕೊಂಡವು, ದ್ವಿತೀಯ ಬಹುಮಾನವನ್ನು ಲಿಂಗದಳ್ಳಿ ಎತ್ತುಗಳು ಪಡೆದುಕೊಂಡವು.

ರಥೋತ್ಸವ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಹರಕೆ ಹಾಗೂ ಇಷ್ಟಾರ್ಥಗಳನ್ನು ಈಡೇರಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು .

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹನುಮೇಶಪ್ಪ ಕುಷ್ಟಗಿ, ವೀರಬಸಪ್ಪ ಶೆಟ್ಟರ್,
ಮಾರುತಿ ತೋಟಗಂಟಿ, ಗಂಗಾಧರಸ್ವಾಮಿ, ಹನುಮಂತ್ ಕಾಟಾಪುರ, ಬಸವರಾಜ್ ಬೋವಿ, ರವಿ ಪಟ್ಟಣಶೆಟ್ಟಿ ಮಾರುತೇಶ್ವರ ಕಮಿಟಿಯವರು ರೈತ ಸಂಘದ ಸರ್ವ ಸದಸ್ಯರು, ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಪಾಲ್ಗೊಂಡಿದ್ದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *