Breaking News

ಸಚಿನ್ ಪಂಚಾಳ ಸಾವಿನ ಬಗ್ಗೆ ಸಿಬಿಐ ತನಿಖೆನಡೆಸಿತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಿಂಧನೂರು ವಿಶ್ವಕರ್ಮ ಮುಖಂಡರು ಒತ್ತಾಯ

Vishwakarma leaders insisted

ಜಾಹೀರಾತು

ಸಿಂಧನೂರು: ಬೀದರನಲ್ಲಿ ಆತ್ಮಹತ್ಯೆಗೆ ಸಚಿನ್ ಪಂಚಾಳ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಿಂಧನೂರು ತಾಲೂಕ ವಿಶ್ವಕರ್ಮ ಮುಖಂಡರು ಸಿಂಧನೂರು ತಹಸೀಲ್ದಾರ್ ಕಚೇರಿಯಲ್ಲಿ ಮಾನ್ಯ ತಹಸೀಲ್ದಾರ ಅರುಣ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.

ಬೀದರ ಜಿಲ್ಲೆಯ ನಿವಾಸಿಯಾದ ಸಚಿನ್ ಮಾನಪ್ಪ ಪಂಚಾಳ ಅವರು ಉನ್ನತ ಗುತ್ತಿಗೆದಾರರು ಎಂದು ತಿಳಿದು ಬಂದಿದ್ದು ಸಚಿನ್ ಪಂಚಾಳ ಅವರು ಪ್ರಭಾವಿ ಸಚಿವರ ಬೆಂಬಲಿಗರ ಕಿರುಕುಳಕ್ಕೆ ಬೇಸತ್ತು ಸ್ವಯಂ ಪ್ರೇರಿತವಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ಆಸರೆಯಾಗಿರುವ ಸಚಿನ್ ಪಂಚಾಳ ಅವರ ಕುಟುಂಬದವರ ಅನಾಥರಾಗಿದ್ದು,ಈ ಘಟನೆ ಇಡೀ ಮನುಕುಲವನ್ನೇ ನಾಚಿಸುವಂತಹದಾಗಿದ್ದು ಖಂಡನೀಯವಾಗಿದೆ.ಸರ್ಕಾರ ಕೂಡಲೇ ಸಾವಿಗೆ ಕಾರಣರಾದದವರನ್ನು ಬಂಧಿಸಬೇಕು.ಡೆತ್ ನೋಟ್ ನಲ್ಲಿ ಬರೆದಿರುವಂತಹ ಆರೋಪಿಗಳಿಗೆ ನೀಡಿರುವ ಹಣವನ್ನು ಸಚಿನ್ ಕುಟುಂಬಸ್ಥರಿಗೆ ಹಿಂತಿರುಗಿಸಿಕೊಟ್ಟು,ಸಚಿನ್ ಪಂಚಾಳ ಅವರ ಸಾವಿಗೆ ನ್ಯಾಯ ದೊರಕಿಸಿ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ 50ಲಕ್ಷ್ಮಿ ರೂಪಾಯಿಗಳನ್ನು ಪರಿಹಾರವನ್ನು ಕೊಡಬೇಕೆಂದು ಹಾಗೂ ಆತ್ಮಹತ್ಯೆಯ ಸಾವಿನ ಬಗ್ಗೆ ತನಿಖೆ ಮಾಡಲು ಸಿಬಿಐ ಗೆ ಕೊಡಬೇಕೆಂದು ತಹಸೀಲ್ದಾರ್ ಅರುಣ್ ದೇಸಾಯಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ಸಿಂಧನೂರು ನಿಂದ ಮಸ್ಕಿ ಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿ ಪಿ ಡಬ್ಲ್ಯೂ ಡಿ ಕ್ಯಾಪ್ ಕಂಪೌಂಡ್ ಗೆ ಹೊಂದಿಕೊಂಡು ಸುಮಾರು ವರ್ಷಗಳಿಂದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಇದೆ.ಮುಖ್ಯ ರಸ್ತೆ ಅಗಲೀಕರಣದಿಂದ ದೇವಸ್ಥಾನವನ್ನು ತೆರವುಗೊಳಿಸಬೇಕಾಗಿರುವುದರಿಂದ ಸರ್ಕಾರದ ವತಿಯಿಂದ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನಕ್ಕೆ ಜಾಗವನ್ನು ಮಂಜೂರು ಮಾಡಬೇಕು ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಶ್ರೀ ವೆಂಕಟೇಶ ಮಹಾಸ್ವಾಮಿಗಳು ಶ್ಯಾಡಲಗೇರಿ ಮಠ,ವಿಶ್ವಕರ್ಮ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಬಡಿಗೇರ,ಸಮಾಜದ ಹಿರಿಯರಾದ ಅಯ್ಯಪ್ಪ ನಿವೃತ್ತ ಬಿ.ಇ.ಓ,ವೀರಭದ್ರಪ್ಪ ಹಂಚಿನಾಳ,ರವೀಂದ್ರ ಗದ್ರಟಗಿ,ಡಾ.ವೀರೇಶ ತಿಡಿಗೋಳ,ದೇವಪ್ಪ ದೇವರಗುಡಿ,ಚನ್ನಪ್ಪ ಕೆ ಹೊಸಹಳ್ಳಿ ಇನ್ನಿತರ ಸಮಾಜದ ಮುಖಂಡರು ಇದ್ದರು.

About Mallikarjun

Check Also

ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ

Progress review of guarantee schemes in Anegundi Gram Panchayat ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.