ಸಾರ್ವಜನಿಕರಿಗೆ ಅನೂಕೂಲವಾಗುವಂತೆ ಕಾಮಗಾರಿನಿರ್ಮಾಣವಾಗಬೇಕು:ರಾಯರಡ್ಡಿ,,

Mallikarjun
1 Min Read
ಜಾಹೀರಾತು

Works should be constructed to make it convenient for the public: Rayardi

ಜಾಹೀರಾತು

ಕೊಪ್ಪಳ : ಕುಕನೂರು ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್, ಬಾಲಭವನ ಮತ್ತು ಶಾದಿಮಹಲ್ ಕಾಮಗಾರಿಯನ್ನು ಶಾಸಕ ಬಸವರಾಜ ರಾಯರಡ್ಡಿ ಬುಧವಾರ ವೀಕ್ಷಣೆ ಮಾಡಿದರು.

ನಂತರ ಶಾಸಕ ರಾಯರಡ್ಡಿ ಮಾತನಾಡಿ ಅಂಬೇಡ್ಕರ್ ಭವನ, ಶಾದಿಮಹಲ್ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ನಿರ್ಮಾಣವಾಗಬೇಕು ಎಂದರು.

ಕಟ್ಟಡಗಳಿಗೆ ಅಗತ್ಯಕ್ಕೆ ಬೇಕಾದ ಕೆಲಸದ ಮಾಹಿತಿ ಒದಗಿಸಿ, ಅದಕ್ಕೆ ಬೇಕಾದ ಅನುದಾನವನ್ನು ನಾನು ತಕ್ಷಣ ಒದಗಿಸುತ್ತೇನೆ ಎಂದರು.

ಮುಖಂಡರಾದ ಸತ್ಯನಾರಾಯಣಪ್ಪ ಹರಪನಹಳ್ಳಿ, ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ,
ಉಪಾಧ್ಯಕ್ಷ ಪ್ರಶಾಂತ ಆರಬೆರಳಿನ, ಸ್ಥಾಯಿ ಸಮಿತಿ ಅಧ್ಯಕ್ಷ ನೂರುದ್ದೀನ ಸಾಬ ಗುಡಿಹಿಂದಲ್, ಸದಸ್ಯರಾದ ಗಗನ ನೋಟಗಾರ, ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ, ಮಂಜುನಾಥ ಕೋಳೂರು, ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ, ಸಿಡಿಪಿಒ ಬೆಟದಪ್ಪ ಮಾಳೇಕೊಪ್ಪ, ಜೆಇ ಶಿವಕುಮಾರ, ವೀರಯ್ಯ ದಳಪತಿ, ಯಲ್ಲಪ್ಪ ಕಲ್ಮನಿ, ಪರಶುರಾಮ ಸಕ್ರಣ್ಣವ‌ರ್, ರಮೇಶ ಮಾಳೇಕೊಪ್ಪ, ಸಣ್ಣಯಲ್ಲಪ್ಪ ಕಲ್ಮನಿ, ಮಂಜುನಾಥ ಯಡಿಯಾಪೂರ, ರಾಘವೇಂದ್ರ ಕಾತರಕಿ ಸೇರಿದಂತೆ ಅನೇಕರು ಇದ್ದರು.

Total Views: 0
Share This Article