Dinni Hanumantaraya Sahukar who celebrated his birthday simply at Neru Orphanage
ಮಾನ್ವಿ:ಪಟ್ಟಣದ ನೇರಳು ಅನಾಥಶ್ರಮದಲ್ಲಿನ ವೃದ್ದರಿಗೆ,ಅನಾಥರಿಗೆ ಆಹಾರ ಹಾಗೂ ವಸ್ತುಗಳನ್ನು ವಿತರಿಸುವ ಮೂಲಕ ದಿನ್ನಿ ಹನುಮಂತರಾಯ ಸಾಹುಕರ್ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಇತರರಿಗೆ ಮಾದರಿಯಾಗುವಂತೆ ಆಚರಿಸಿಕೊಂಡರು.ನಂತರ ಪಟ್ಟಣದಲ್ಲಿನ ಚನ್ನಬಸವೇಶ್ವರ ಅಂಧ ಮಕ್ಕಳ ಶಾಲೆಯಲ್ಲಿನ ನಿವಾಸಿಗಳಿಗೂ ಕೂಡ ಆಹಾರ ಹಾಗೂ ವಸ್ತುಗಳನ್ನು ವಿತರಿಸಲಾಯಿತು.
ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಬಲ್ಲಟಗಿ ಗುರುಬಸಯ್ಯ ತಾತಾ ಹಿರೇಮಠ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹಾರ ಪಾಟೀಲ್, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಶಿವಶಂಕರಯ್ಯ ಸ್ವಾಮಿ ರಾಜಲದಿನ್ನಿ, ಮುಖಂಡರಾದ ದಿನ್ನಿ ಅರುಣಕುಮಾರ ನಾಯಕ,ವೀರೇಶ ಪೂಜಾರಿ,ದಿನ್ನಿ ರಮೇಶ ಅಲ್ದಾಳ್, ಹನುಮೇಶ, ಕೆ.ವೈ.ಬಸವರಾಜ,ಶಂಕರ,ಕೋಟಿ,ಅನೀಲ್ ಗೌಡ, ನಾಗಪ್ಪ ಬಲ್ಲಟಗಿ,ಮಂಜುನಾಥ ಜಾನೇಕಲ್,ನಾಗಪ್ಪ ಕುಂಬಾರ,ಅದೇಪ್ಪ ಚಪ್ಪಡಿ,ಶಿವಾನಂದ ಆಗ್ರಾಹಾರ, ಅಮರೇಶ ಪಾಟೀಲ್, ಮಂಜುನಾಥ ಜಾನೇಕಲ್,ಕೋಟಿ,ಅನೀಲ್ ಗೌಡ ಸೇರಿದಂತೆ ಇನ್ನಿತರರು ಇದ್ದರು.