Breaking News

ಸಾಂಗವಾಗಿ ಜರುಗಿದ ಲಕ್ಷ್ಮೀ ವೆಂಕಟೇಶ್ವರ ರಥೋತ್ಸವ ಹಾಗೂ ಬನ್ನಿ ಹಬ್ಬ,,

Lakshmi Venkateswara Chariotsava and Bunny festival held in association.

ಜಾಹೀರಾತು

ಕೊಪ್ಪಳ : ವಿಜಯ ದಶಮಿಯ ಪ್ರಯುಕ್ತ ದಶಮಿಯಂದು ಮಹಾಮಾಯ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಹಾ ರಥೋತ್ಸವವು ಶನಿವಾರ ಸಾಯಂಕಾಲ 7 ಗಂಟೆಗೆ ನೆರೆದ ನೂರಾರು ಭಕ್ತಾಧಿಗಳ ಜಯಘೋಷದೊಂದಿಗೆ ವಿಜೃಂಬಣೆಯಿಂದ ಜರುಗಿತು.

ಶುಕ್ರವಾರದಂದು ಜರುಗಿದ ಮಹಾಮಾಯ ದೇವಿಯರಥೋತ್ಸವದ ನಂತರ ಪ್ರತಿ ವರ್ಷದ ಪದ್ದತಿಯಂತೆ ಮಾರನೇ ದಿನ ಶನಿವಾರದಂದು ಶ್ರೀ ಲಕ್ಷ್ಮೀ ವೆಂಕಟೇಶ್ವರ ಮಹಾರಥೋತ್ಸವದಲ್ಲಿ ಶ್ರೀ ಭಾರತಿ ಭಜನಾ ಮಂಡಳಿ, ಶ್ರೀ ಶಾರದಾ ಭಜನಾ ಮಂಡಳಿ ಇವರ ಭಜನಾ ಸೇವೆಯೊಂದಿಗೆ ಸಾಂಗವಾಗಿ ಜರುಗಿತು.

ನೂರಾರು ಭಕ್ತಾಧಿಗಳು ರಥೋತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದರು.

ನಂತರದಲ್ಲಿ ಮಹಾಮಾಯ ದೇವಸ್ಥಾನದಿಂದ ಶ್ರೀ ದೇವಿಯ ಪಾಲಕಿಯೊಂದಿಗೆ ಪಾದಗಟ್ಟಿಗೆ ಆಗಮಿಸಿ ಮಹಾಮಾಯದೇವಿ ಸಿಮೋಲ್ಲಂಘನ, ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ಈ ವೇಳೆ ಕಿರಿಯರು ಹಿರಿಯರಿಗೆ ಬನ್ನಿ ಸಮರ್ಪಿಸಿದರು. ಪರಸ್ಪರ ಬನ್ನಿ ನೀಡಿ ನಿಮ್ಮ ಜೀವನ ಬಂಗಾರವಾಗಲಿ ಎಂದು ಬನ್ನಿಪತ್ರಿಯನ್ನು ವಿನಿಮಯ ಮಾಡಿಕೊಂಡರು.

About Mallikarjun

Check Also

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಸ್ವಾಗತಾರ್ಹ: ಸಚಿವ ಬೋಸರಾಜು ಹರ್ಷ

Naming after Maharshi Valmiki for Raichur University is welcome: Minister Bosaraju Harsha ಬೆಂಗಳೂರು ಅಕ್ಟೋಬರ್‌ 17: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.