Breaking News

ಹನೂರು ತಾಲ್ಲೂಕಿನಲ್ಲಿ ದೊಡ್ಡಾಲತ್ತೂರು ಗ್ರಾಮದಲ್ಲಿಮೈಸೂರು ವಿವಿಯಿಂದ 2 ಸಾವಿರ ವರ್ಷಗಳಷ್ಟು ಹಳೆಯ ಸಮಾಧಿಗಳ ಉತ್ಖನನ ಆರಂಭ.

At Doddalathur Village in Hanur Taluk Excavation of 2000 year old tombs started from Mysore University.

ಜಾಹೀರಾತು


ವರದಿ : ಬಂಗಾರಪ್ಪ ಸಿ‌.
ಹನೂರು :ತಾಲೂಕಿನ ದೊಡ್ಡಾಲತ್ತೂರು ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಕಬ್ಬಿಣ ಯುಗದ ಸಮಾಧಿಗಳಿದ್ದು 2000-2500 ವರ್ಷಗಳಾದ್ದಾಗಿದೆ‌.‌ ಸ್ಥಳೀಯಯವಾಗಿ ಇದನ್ನು ಪಾಂಡವರ ಮನೆ ಎಂದು ಕರೆಯಲಾಗುತ್ತಿದ್ದು,
ಬಂಡೆಕಲ್ಲ‌ಗಳನ್ನು ಸುತ್ತಲೂ ಜೋಡಿಸಿ ಮಧ್ಯದಲ್ಲಿ ಕಲ್ಲಿನ ರಾಶಿಗಳನ್ನು ಗುಪ್ಪೆ ಥರಾ ಮಾಡಲಾಗಿದೆ. ಇಂದಿನಿಂದ ಈ ಸಮಾಧಿಗಳ ಉತ್ಖನನ ಕಾರ್ಯ ಆರಂಭಗೊಂಡಿದೆ.
ಸಂಶೋಧನೆಯಲ್ಲಿ‌
ಮೈವಿವಿಯ ಪ್ರಾಚೀನ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿ ಶೋಭಾ ನೇತೃತ್ವದಲ್ಲಿ 20 ಕ್ಕೂ ಅಧಿಕ ಸಂಶೋಧಕರು, ವಿದ್ಯಾರ್ಥಿಗಳು ಈ ಉತ್ಖನನ ಕಾರ್ಯದಲ್ಲಿ ತೊಡಗಿದ್ದಾರೆ.

1961 ರಲ್ಲಿ ಭಾರತೀಯ ಪುರಾತತ್ತ್ವ ಇಲಾಖೆ ವತಿಯಿಂದ ಈ ಸಮಾಧಿಗಳನ್ನು ಕೃಷ್ಣಮೂರ್ತಿ ಎಂಬವರು ಗುರುತು ಮಾಡಿದ್ದರು. ಆದಾದ ಬಳಿಕ ಸಂಶೋಧನಾ ಕಾರ್ಯ ನಡೆದಿರಲಿಲ್ಲ. ಈಗ , ಉತ್ಖನನ ಆರಂಭಿಸಿದ್ದು ಕಬ್ಬಿಣ ಯುಗದ ಜನರ ನಂಬಿಕೆ ಏನಾಗಿತ್ತು, ಸಮಾಧಿಯಲ್ಲಿ ಅವರು ಯಾವ ವಸ್ತುಗಳನ್ನು ಇಡುತ್ತಿದ್ದರು, ಅವರ ದೃಷ್ಟಿಯಲ್ಲಿ ಸಮಾಧಿ ಅಂದರೆ ಏನಾಗಿತ್ತು, ಸಮಾಧಿ ಒಳಗಡೆ ಎಷ್ಟೆಲ್ಲಾ ವಸ್ತುಗಳನ್ನು ಇಡುತ್ತಿದ್ದರು ಎಂಬ ವಿಚಾರ ಈ ಉತ್ಖನನದಲ್ಲಿ ತಿಳಿಯುವ ನಿರೀಕ್ಷೆ ಇದೆ ಎನ್ನಲಾಗಿದೆ.

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.