Breaking News

ತಾಯಿ ಹೆಸರಲ್ಲಿ ಒಂದು ವೃಕ್ಷ ಅಭಿಯಾನಕ್ಕೆ ಪಿಡಿಓ ಚಾಲನೆ

PDO launched a tree campaign in the name of mother

ಜಾಹೀರಾತು
WhatsApp Image 2024 08 23 At 5.51.05 PM 300x139

ಪ್ರತಿ ಮನೆ ಮನೆಯಲ್ಲಿ ಗಿಡ ಬೆಳೆಸಿ

ಕುಕನೂರ : ಆಧುನಿಕತೆ ಹೆಚ್ಚಾಗಿ ಅದಕ್ಕೆ ತಕ್ಕಂತೆ ಜನಸಂಖ್ಯೆ ಹೆಚ್ಚಾಗುತ್ತಿದ್ದು ಅದರಿಂದ ಮನೆಗಳು ಕಾರ್ಖಾನೆಗಳು ಹೆಚ್ಚಾಗಿ ಗಿಡ ಮರಗಳ ಮಾರಣಹೋಮ ನಡೆಯುತ್ತಿದೆ ಇದರಿಂದ ವಾತಾವರಣದಲ್ಲಿ ವ್ಯತಿರಿಕ್ತವಾಗುತ್ತಿದೆ ಎಂದು ಪಿಡಿಓ ಅಡಿವೆಪ್ಪ ಯಡಿಯಾಪೂರ ಹೇಳಿದರು.

ತಾಲೂಕಿನ ಯರೇಹಂಚಿನಾಳ ಗ್ರಾ.ಪಂ ವ್ಯಾಪ್ತಿಯ ಸಿದ್ನೇಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರ 2 ರಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಸಿ ನೆಟ್ಟು ಅವರು ಮಾತನಾಡಿದರು.

ಮರಗಳು ನಮ್ಮನ್ನು ರಕ್ಷಿಸುವ ತಾಯಿ ಇದ್ದ ಹಾಗೆ ಸಸಿಗಳು ಬೆಳೆದು ಮರವಾಗಬೇಕಾದರೆ ಅವುಗಳಿಗೆ ಪೋಷಣೆ ಅವಶ್ಯಕ ಅದಕ್ಕಾಗಿ ತಾಯಿ ಯಾವ ರೀತಿ ಮಕ್ಕಳನ್ನು ನೋಡಿಕೊಳ್ಳುತ್ತಾಳೆಯೋ ಅದೇ ರೀತಿ ಸಸಿಗಳನ್ನು ಶಾಲಾ ವಿಧ್ಯಾರ್ಥಿಗಳು ಒಂದೊಂದು ಗಿಡವನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡಬೇಕು.
ಸರ್ಕಾರ ಹಾಗೂ ಅರಣ್ಯ ಇಲಾಖೆಯಿಂದ ಸಾಕಷ್ಟು ಸಸಿಗಳನ್ನು ನಡೆಸುತ್ತಾರೆ ಆದರೆ ಸರಿಯಾದ ಪೋಷಣೆ ಇಲ್ಲದೇ ಸಸಿಗಳು ಬೆಳೆಯದೆ ಕುಂಟಿತವಾಗುತ್ತಿವೆ ಅದಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳು ಪ್ರತಿಯೋಬ್ಬರೂ ಸಹ ಮರಗಳನ್ನು ಬೆಳೆಸಬೇಕು ಎನ್ನುವ ಉದ್ದೇಶದಿಂದ ತಾಯಿಯ ಹೆಸರಿನಲ್ಲಿ ಮರ ನೆಡಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ನೀಡಿದ್ದು ಅದರಂತೆ ಎಲ್ಲರೂ ಕಾರ್ಯಪ್ರವೃತ್ತರಾಗಿ ಎಂದರು.

ಈ ವೇಳೆ ಗ್ರಾ.ಪಂ ಉಪಾಧ್ಯಕ್ಷ ಶರಣಯ್ಯ ಹಿರೇಮಠ. ಅಂಗನವಾಡಿ ಕಾರ್ಯಕರ್ತೆ ಶಿಲ್ಪಾ ವಿರೇಶ್ವರಯ್ಯ ಲಕ್ಜಲಕಟ್ಟಿ.ಕರವಸೂಲಿಗಾರರಾದ ಶರಬಣ್ಣ ಕೋಳೂರ. ಈರಣ್ಣ ಇಟಗಿ ಸೇರಿದಂತೆ ಇನ್ನೀತರರು ಹಾಜರಿದ್ದರು.

About Mallikarjun

Check Also

screenshot 2025 10 17 17 14 29 84 e307a3f9df9f380ebaf106e1dc980bb6.jpg

ಬೆಳ್ಳೆತೆರೆಗೆ ಬರಲು ಸಜ್ಜಾದ “ಮಾವುತ”

Mavutha" is all set to hit the big screen ಬೆಂಗಳೂರು : ಎಸ್ ಡಿ ಆರ್ ಪ್ರೊಡಕ್ಷನ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.