Breaking News

ದಲಿತಸಂಘಟನೆಒಕ್ಕಟದಿಂದ ಸಂಭ್ರಮಾಚರಣೆ.

Dalit organization celebrates together.

ಜಾಹೀರಾತು

ದಲಿತ ಸಂಘಟನೆಗಳ ಹೋರಾಟದ ಫಲವಾಗಿ ದೊರೆತ ಒಳ ಮೀಸಲಾತಿ. ದಲಿತ ಸಂಘಟನೆ ಒಕ್ಕಟದಿಂದ ಸಂಭ್ರಮಾಚರಣೆ.

ತಿಪಟೂರು. ಸದಾಶಿವ ಆಯೋಗದ ವರದಿ ಜಾರಿಯಾದ ಹಿನ್ನೆಲೆ ಇಂದು ನಗರದ ಅಂಬೇಡ್ಕರ್ ವೃತ್ತದ ಬಳಿ ದಲಿತ ಸಂಘಟನೆ ಒಕ್ಕೂಟದಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಮಾಧ್ಯಮಕ್ಕೆ ಪ್ರತಿಕ್ರಿಸಿದ ಜಿಲ್ಲಾ ಸಂಚಾಲಕ ನಾಗತಿಹಳ್ಳಿ ಕೃಷ್ಣಮೂರ್ತಿ ದಲಿತ ಸಂಘಟನೆಗಳ ಹೋರಾಟದ ಫಲವಾಗಿ ಇಂದು ನಮಗೆ ಸಮಾನತೆಯ ನ್ಯಾಯ ಸಿಕ್ಕಿದೆ ಹಾಗೂ ದಲಿತ ಸಮುದಾಯ ಸುಮಾರು ವರ್ಷಗಳಿಂದ ಅನೇಕ ಹೋರಾಟಗಳನ್ನು ಮಾಡಿದ್ದು ಇದರ ಫಲವಾಗಿ ಇಂದು ಸದಾಶಿವ ಆಯೋಗದ ವರದಿ ಜಾರಿ ಮಾಡುವ ಮೂಲಕ ದಲಿತ ಸಮುದಾಯಕ್ಕೆ ಸಿಗಬೇಕಿದ್ದ ಒಳ ಮೀಸಲಾತಿಯನ್ನು ನಿನ್ನೆ ಸುಪ್ರೀಂ ಕೋರ್ಟ್ ತೀರ್ಪಿನತೆ ಜಾರಿಗೆ ತಂದಿರೋದು ನಮಗೆ ಖುಷಿ ತಂದಿದೆ ಎಂದರು.
ನಂತರ ಮಾತಾಡಿದ ದಲಿತ ಮುಖಂಡ ಕುಪ್ಪಾಳು ರಂಗಸ್ವಾಮಿ. ಇಡೀ ರಾಜ್ಯದ್ಯಂತ ಹೋರಾಟಗಾರರ ಹಾಗೂ ಮುಂಚೂಣಿ ನಾಯಕರ ಹೋರಾಟದ ಫಲವಾಗಿ ಸದಾಶಿವ ಆಯೋಗದ ವರದಿ ಜಾರಿ ಮಾಡುವ ಮೂಲಕ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ ನಮಗೆ ಸಂಭ್ರಮ ತಂದಿದೆ ಎಂದರು.
ಈ ಸಂದರ್ಭದಲ್ಲಿ.. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೊಪ್ಪ ಶಾಂತಪ್ಪ. ಬಿಳಿಗೆರೆ ಚಂದ್ರಣ್ಣ. ಶೆಟ್ಟಿಹಳ್ಳಿ ಕಲ್ಲೇಶ್.ಅಶೋಕ್ ಗೌಡನ್ ಕಟ್ಟೆ. ರಾಘು. ಶಿವಕುಮಾರ್. ಟಿ ರಾಜು. ಮಂಜು ಗುರುಗದಹಳ್ಳಿ. ಆನಂದ್. ಮಾರನಗೆರೆ ಸಂತೋಷ್. ಹರಚನಹಳ್ಳಿ ಮಂಜು. ಬಸವರಾಜ್. ಪ್ರಮುಖ ಮುಖಂಡರುಗಳು ಹಾಜರಿದ್ದರು.
ವರದಿ ಮಂಜು ಗುರುಗದಹಳ್ಳಿ.

About Mallikarjun

Check Also

ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಜನಾನುರಾಗಿಯಾಗಿದ್ದ ನ್ಯಾಯಾಧೀಶ ರಮೇಶ ಗಾಣಿಗೇರ ಅವರಿಗೆ ಆತ್ಮೀಯ ಬೀಳ್ಕೊಡುಗೆ

A heartfelt farewell to Judge Ramesh Ganigera, who was popular for his social work. ಗಂಗಾವತಿ: …

Leave a Reply

Your email address will not be published. Required fields are marked *