![](https://kalyanasiri.in/wp-content/uploads/2024/07/IMG-20240704-WA0254-300x184.jpg)
ಯಲಬುರ್ಗಾ.ಜು.4.: ಜನರು ತಮ್ಮಲ್ಲಿಯ ಒಡವೆಗಳನ್ನು ಅಡವಿಟ್ಟು ತಕ್ಷಣ ಸಾಲ ಸೌಲಭ್ಯ ನೀಡುವಲ್ಲಿ ಮುತುಟ್ ಬ್ಯಾಂಕ್ ಸೇವೆ ನೀಡುತ್ತಿದ್ದು ದುಡ್ಡಿನ ಅವಶ್ಯಕತೆ ಇರುವ ಜನತೆ ಈ ಬ್ಯಾಂಕ್ ಸೌಲಭ್ಯ ಪಡೆಯಬೇಕು ಎಂದು ಜೆ.ಕೆ ಎಂಟರ್ ಪ್ರೈಜಸ್ ಮಾಲಕರಾದ ಅಬ್ದುಲರೆಹಮಾನ್ ಅಶ್ರಫಅಲಿಸಾಬ ಜರಕುಂಟಿ ಹೇಳಿದರು.
ಯಲಬುರ್ಗಾ ಪಟ್ಟಣದ ಕೊಪ್ಪಳ ರಸ್ತೆ ಹತ್ತಿರ ಇತ್ತೀಚೆಗೆ ನೂತನ ಮುತುಟ್ ಬ್ಯಾಂಕ್ ಶಾಖೆಗೆ ಚಾಲನೆ ನೀಡಿ ಮಾತನಾಡಿದರು. ಜನ ಎಷ್ಟೇ ಸ್ಥಿತಿವಂತರಿದ್ದರು ದುಡ್ಡಿನ ಅವಶ್ಯಕತೆ ಬಂದೆ ಬರುತ್ತೆ ಅದರಲ್ಲಿ ವಿವಿಧ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಾಗೂ ಕುಟುಂಬ ನಿರ್ವಹಣೆ ನಿಗಿಸುವಲ್ಲಿ ದುಡ್ಡಿನ ಅವಶ್ಯಕತೆ ಬಂದೆ ಬರುತ್ತೆ ಅಂತಹ ಸಂದರ್ಭದಲ್ಲಿ ಬಂಗಾರದ ಒಡವೆಗಳನ್ನು ಅಡವಿಟ್ಟುಕೊಂಡು ತಕ್ಷಣ ಸಾಲ ದೊರಕಿಸುವದು ಮತ್ತು ಇತರ ಯೋಜನೆಗಳ ಸಂಭಂಧಿಸಿದಂತೆ ಸಾಲ ನೀಡುವಲ್ಲಿ ಮುತುಟ್ ತುಂಬಾ ಸಹಕಾರಿಯಾಗಿದೆ ಎಂದರು. ಹುಬ್ಬಳ್ಳಿ ಮುತುಟ್ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ ಅವರು ಮಾತನಾಡಿ ಯಲಬುರ್ಗಾ ಸೇರಿ ಸುತ್ತಮುತ್ತಲ ಗ್ರಾಮಗಳ ಜನತೆಗೆ ಸಾಲ ಸೌಲಭ್ಯ ಅನುಕೂಲವಾಗುವ ದೃಷ್ಟಿಯಿಂದ ಈ ಮುತುಟ್ ಶಾಖೆಯನ್ನು ಪ್ರಾರಂಭಿಸಲಾಗಿದ್ದು ಈ ಮುತುಟ್ ಬ್ಯಾಂಕ್ ಸೌಲಭ್ಯ ಪಡೆಯುವಲ್ಲಿ ಜನತೆ ಮುಂದಾಗುವಂತೆ ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಕ್ತರಸಾಬ ಖಾಜಿ, ಮೆಹಬೂಬಸಾಬ ಮಕಾಂದಾರ, ವ್ಯವಸ್ಥಾಪಕ ಮಂಜನಗೌಡ, ಯಲಬುರ್ಗಾ ವ್ಯವಸ್ಥಾಪಕ ಚೇತನ್ ಪಾಟೀಲ್, ರೂಫ್ ಖಲಂದರ್ ಜರಕುಂಟಿ ಹಾಗೂ ಸಿಬ್ಬಂದಿಯವರು ಇತರರು ಇದ್ದರು.