![](https://kalyanasiri.in/wp-content/uploads/2024/06/IMG-20240630-WA0181-300x225.jpg)
ಬೆಂಗಳೂರು, ಜೂ, 30; ಎಪಿಎಸ್ ಶೈಕ್ಷಣಿಕ ಟ್ರಸ್ಟ್ ನ ಎನ್.ಆರ್. ಕಾಲೋನಿಯ ಆಚಾರ್ಯ ಪಾಠಶಾಲಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ಸಂಸ್ಥೆಯ ಉತ್ಸಾಹಭರಿತ ಸಮ್ಮಿಲನ ಆಯೋಜಿಸಲಾಗಿತ್ತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಎ.ವಿಷ್ಣು ಭರತ್ ಆಲಂಪಳ್ಳಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ವಾರಾಂತ್ಯದಲ್ಲಿ ಶಿಕ್ಷಣ ಕೇಂದ್ರ ಉತ್ಸಾಹದ ಕೇಂದ್ರವಾಗಿ ಮಾರ್ಪಟ್ಟಿತ್ತು. ಈ ಕಾರ್ನೀವಲ್ ಕಿರಿಯರಿಂದ ಹಿರಿಯ ನಾಗರಿಕವರೆಗೆ ಎಲ್ಲರಿಗೂ ಮೋಜಿನ ವೇದಿಕೆಯಾಗಿತ್ತು. ಸ್ವಚ್ಛ ಮತ್ತು ಸುಂದರ ಮಳಿಗೆಗಳಲ್ಲಿ ರೋಮಾಂಚಕ ಆಟಗಳು, ಸಮ್ಮೋಹನಗೊಳಿಸುವ ಸಂಗೀತ, ಆಕರ್ಷಕ ನೃತ್ಯ ಪ್ರದರ್ಶನಗಳು, ಮನಸೂರೆಗೊಳ್ಳುವ ನಾಟಕಗಳು ಮತ್ತು ರುಚಿಕರವಾದ ತಿಂಡಿ – ತಿನಿಸುಗಳು ಗಮನ ಸೆಳೆದವು. ಅತ್ಯಾಕರ್ಷಕ ಅದೃಷ್ಟದ ಲಾಟರಿ ಡ್ರಾಗಳಲ್ಲಿ ಬಹುಮಾನ ಗೆದ್ದು ಬೀಗಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಂದ ಉತ್ಸಾಹದ ಸಮ್ಮಿಲನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸೃಜನಶೀಲತೆ ಮತ್ತು ಸಮುದಾಯ ಮನೋಭಾವದ ಆಚರಣೆ ಜೊತೆಗೆ ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು.