![](https://kalyanasiri.in/wp-content/uploads/2024/06/IMG-20240620-WA0171-300x225.jpg)
ಕನಕಗಿರಿ: ತಾಲೂಕು ಪಂಚಾಯತಿಯ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಇಂದು ತಾಲೂಕು ಪಂಚಾಯತಿಯ ಯೋಜನಾಧಿಕಾರಿಗಳಾಗಿದ್ದ ಕೆ.ರಾಜಶೇಖರ್ ಅವರು ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅವರು, ಎಲ್ಲಾ ಸಿಬ್ಬಂದಿಗಳ ಸಭೆಯನ್ನು ನಡೆಸಿ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ಪ್ರಗತಿ ಸಾಧಿಸಲು ತಿಳಿಸಿದರು. ನಂತರ ತಾಲೂಕು ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ನೂತನ ಇಓ ರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಿಬ್ಬಂದಿಗಳಾದ ಹನುಮಂತ, ಕೊಟ್ರಯ್ಯ ಸ್ವಾಮಿ, ಪವನಕುಮಾರ್, ಯಂಕೋಬ, ಹನುಮವ್ವ, ರಿಯಾಜ್, ಸಯ್ಯದ್ ತನ್ವೀರ್, ಮೇಘರಾಜ್, ಶಿವಕುಮಾರ್ ಕೆ, ಸಂಗಾರೆಡ್ಡಿ, ಮೌನೇಶ್, ರೇಣುಕಮ್ಮ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.