Breaking News

ಹಬ್ಬಗಳನ್ನುಆಚರಿಸುತ್ತಿರುವುದರಿಂದ ಹಳ್ಳಿಗಳು ಸುಬೀಕ್ಷವಾಗಿವೆ:ಶಾಸಕರಾದ ಎಮ್ ಆರ್ ಆರ್ ನರೇಂದ್ರ ಅಭಿಮತ

IMG 20240530 WA0280 297x300


ವರದಿ: ಬಂಗಾರಪ್ಪ ಸಿ .
ಹನೂರು :ಹಿಂದಿನ ಕಾಲದಿಂದಲೂ ಪ್ರತಿಯೊಂದು ಹಳ್ಳಿಯಲ್ಲು ಹಬ್ಬಗಳನ್ನು ಆಚರಿಸುತ್ತಿರುವುದು ವಾಡಿಕೆ ಅದರಂತೆ ಪ್ರಸ್ತುತದಲ್ಲಿ ಸಹ ಗ್ರಾಮದ ಜನರೆಲ್ಲ ಒಂದೇಡೆ ಸೇರಿ ಒಮ್ಮತದಿಂದ ಹಬ್ಬಗಳನ್ನು ಆಚರಿಸುತ್ತಿರುವುದರಿಂದ ಶುಭ ಸಂಕೇತವಾದಂತಾಗಿದೆ ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು .

ಜಾಹೀರಾತು

ವಿಧಾನಸಭಾ ಕ್ಷೇತ್ರದ ಕೌದಳ್ಳಿ ,ಕೆಂಪಯ್ಯನಹಟ್ಟಿ ,ಮತ್ತು ಶೇಟ್ಟಳ್ಳಿ ಸೇರಿದಂತೆ ವಿವೀದೆಡೆ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಸಮುದಾಯದ ಬಿದಿಯಲ್ಲಿ ಇಂದು ನಡೆದ ಗ್ರಾಮ ದೇವತೆಯ ಹಬ್ಬವು ಬಹಳ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತೋಷದ ವಿಷಯವೆಂದರು. ಇದೇ ಸಮಯದಲ್ಲಿ ಗ್ರಾಮಸ್ಥರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಇದೇ ಸಮಯದಲ್ಲಿ ಮಾಜಿ ಶಾಸಕರ ಜೊತೆಯಲ್ಲಿ ಭಾಗವಹಿಸಿ ಮಾತನಾಡಿದ ಉದ್ಯಮಿ ಪೊನ್ನಾಚಿ ರಂಗಸ್ವಾಮಿಯವರು ಪೂರ್ವಜರ ಪುಣ್ಯದ ಫಲವಾಗಿ ಇಂದು ನಾವುಗಳು ಬಹಳ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೆವೆ ಅದಕ್ಕೆಲ್ಲ ಕಾರಣ ಪೂರ್ವಜರ ಶ್ರಮವಾಗಿದೆ ,ನಾವು ಕೈಗೊಳ್ಳುವ ಪ್ರತಿಯೊಂದು ಕೆಲಸವು ದೈವ ಸಂಕಲ್ಪವಿಲ್ಲದೆ ನಡೆಯುವುದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಉದ್ನುರು ಸಿದ್ದರಾಜು ,ಕೌದಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ನಾಗರಾಜುಸ್ವಾಮಿ .ಮುಖಂಡರುಗಳಾದ ನಟರಾಜುಗೌಡ,ಶಿವಕುಮಾರ್ ,ಪ್ರವೀಣ್ ಕುಮಾರ್ ,ಗೋವಿಂದರಾಜು ,ರವಿಕುಮಾರ್ , ಎಪಿಎಮ್ ಸಿ ಅಧ್ಯಕ್ಷರಾದ ಚಿಕ್ಕಮಾದನಾಯ್ಕ ,ಪ್ರವೀಣ್ ಗ್ರಾಮದ ಮುಖಂಡರು ಕಾರ್ಯಕರ್ತರು ‌ಸದಸ್ಯರು ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.