Breaking News

“ಶ್ರೀ ವಜ್ರಕ್ಷೇತ್ರ” ಖ್ಯಾತಿಯತ್ಯಾಗರಾಜನಗರದ ಶ್ರೀ ಅಭಯ ಲಕ್ಷ್ಮೀ ನರಸಿಂಹದೇವಾಲಯದಲ್ಲಿ ಮೇ. 21 ರಿಂದ 23 ರ ವರೆಗೆ 47 ನೇ ವೈಭವದ “ನರಸಿಂಹ ಜಯಂತಿ ಮಹೋತ್ಸವ”

IMG 20240514 WA0169 200x300

ಬೆಂಗಳೂರು; “ಶ್ರೀ ವಜ್ರಕ್ಷೇತ್ರ” ಎಂದೇ ಖ್ಯಾತಿ ಪಡೆದಿರುವ ಬಸವನಗುಡಿಯ ತ್ಯಾಗರಾಜನಗರದ ಶ್ರೀ ಅಭಯ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಈ ತಿಂಗಳ 21 ರಿಂದ 23 ರ ವರೆಗೆ 47 ನೇ ವರ್ಷದ ವೈಭವದ “ನರಸಿಂಹ ಜಯಂತಿ ಮಹೋತ್ಸವ” ಆಚರಿಸಲಾಗುತ್ತಿದೆ.
ಭಗವಾನ್ ಅಭಯ ಲಕ್ಷ್ಮೀ ನರಸಿಂಹ, ಭಗವಾನ್ ಅಶ್ವಥ ಕುಬೇರ ಲಕ್ಷ್ಮೀ ನರಸಿಂಹ ಮತ್ತು ಕಂಬದ ನರಸಿಂಹನ ವಜ್ರದ ಆಕಾರದ ಸ್ವರೂಪದಿಂದಾಗಿ ಈ ಹೆಸರು ಬಂದಿದ್ದು, ನಗರದಲ್ಲಿ ನರಸಿಂಹ ಜಯಂತಿಗೆ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. 21 ರಂದು ನರಸಿಂಹ ಜಯಂತಿ ಅಂಗವಾಗಿ ನರಸಿಂಹ ತಾರಕ ಹೋಮ, ಇಡೀ ದಿನ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ.
22 ರಂದು ಕಲ್ಯಾಣೋತ್ಸವ, ಶ್ರೀ ಅಶ್ವತ್ಥ ಕುಬೇರ ಲಕ್ಷ್ಮೀನರಸಿಂಹ ದೇವರಿಗೆ ಮಹಾ ಅಭಿಷೇಕ ಹಾಗೂ ನಾಣ್ಯ ಅಭಿಷೇಕ, 23 ರಂದು ನರಸಿಂಹ ಸ್ಥಂಭಕ್ಕೆ ಮಹಾಭಿಷೇಕ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿ ಅರುಣ್ ಚಿಂತೋಪಂತ್ ಡಿ. ರಮಾಬಾಯಿ, ಡಾ.ಎಸ್.ಆರ್. ವಾದಿರಾಜಾಚಾರ್, ಅರ್ಚಕರಾದ ನರಹರಿ ಆಚಾರ್ ತಿಳಿಸಿದ್ದಾರೆ.
ಸಮೃದ್ಧಿ, ಉತ್ತಮ ಆರೋಗ್ಯ, ಸಂಪತ್ತು, ಸಕಾರಾತ್ಮಕ ಶಕ್ತಿ ಮತ್ತು ಔದ್ಯೋಗಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಜಾಹೀರಾತು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.