
ವರದಿ : ಬಂಗಾರಪ್ಪ ಸಿ .
ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ
ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕುಳ್ಳೆಗೌಡ ಮಾದಪ್ಪ ರವರ ಮಗ ಸುಂದರಿ/ನಾಗ ಜಮೀನಿನಲ್ಲಿ ಸಂಗ್ರಹಿಸಿದ ಜೋಳದ ಹಸುವಿನ ಮೇವಿಗೆ ಕಿಡಿಗೇಡಿಗಳಿಂದ ಹಾನಿಯಾಗಿದೆ .
ನಂತರ ಮಾತನಾಡಿದ ಗ್ರಾಮದ ಕಾಂಗ್ರೆಸ್ ಮುಖಂಡರಾದ ನಾಗರಾಜು ನಮ್ಮ ಭಾಗದಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಬರಗಾಲ ಆವರಿಸಿದೆ ಆದರೆ ಸುಮಾರು 25000/ಸಾವಿರ ರೂ ವೆಚ್ಚದಲ್ಲಿ ಎರಡು ಟ್ರ್ಯಾಕ್ಟರ್ ಜೋಳದ ಕಡ್ಡಿಯನ್ನು ಹಸುಗಳಿಗೆ ಸಂಗ್ರಹ ಮಾಡಿದ್ದ ಗುಡ್ಡೆಗೆ ಬೆಂಕಿ ಬಿದ್ದ ಪರಿಣಾಮವಾಗಿ ಮೇವು ಸಂಪೂರ್ಣವಾಗಿ ಬೆಂದು ಬೂದಿಯಾಗಿರುತ್ತದೆ .ಅದ್ದರಿಂದ ಸಂಬಂದಪಟ್ಟ ಅಧಿಕಾರಿಗಳು ಪರಿಹಾರ ಒದಗಿಸಿ ಕೊಡಬೇಕಾಗಿ ಮನವಿ ಮಾಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಗ್ರಾಮದ ಇತರ ಮುಖಂಡರು ಹಾಜರಿದ್ದರು.