Breaking News

ಭರವಸೆ ಬೆಳಕು ಫೌಂಡೇಶನ್ ಮಾಜಿ ಡಿಸಿಎಂ,ಅಥಣಿ ಶಾಸಕ ಲಕ್ಷ್ಮಣ ಸವದಿಯವರು ಉದ್ಘಾಟಿಸಿದರು

Hope Light Foundation was inaugurated by former DCM, MLA Lakshmana Savadi of Athani

ಜಾಹೀರಾತು
Screenshot 2024 03 09 20 41 31 33 6012fa4d4ddec268fc5c7112cbb265e7 300x198

ಅಥಣಿ : ಪಟ್ಟಣದ ಸುಕ್ಷೇತ್ರ ಗಚ್ಚಿನಮಠದಲ್ಲಿ ಇಂದು ಆಯೋಜಿಸಿದ್ದ ಭರವಸೆ ಬೆಳಕು ಫೌಂಡೇಶನ್ ಅನ್ನು ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಉದ್ಘಾಟಿಸಿ ಮಾತನಾಡಿದರು. ಶ್ರೀಮತಿ ರೂಪಾ ಕಾಂಬಳೆಯವರು ಸ್ಥಾಪಿಸಿರುವ ಭರವಸೆ ಬೆಳಕು ಫೌಂಡೇಶನ್ ಹೆಸರಿಗೆ ತಕ್ಕಂತೆ ಸಮಾಜದಲ್ಲಿ ಭರವಸೆ ಬೆಳಕಾಗಿ ಕಾರ್ಯ ಮಾಡಲಿ. ಬಡವರು, ಹಿಂದುಳಿದವರ ಧ್ವನಿಯಾಗಿ, ಅವರಿಗೆ ಆಸರೆಯಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸಿದರು.
ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಅಥಣಿಯ ಭರವಸೆ ಬೆಳಕು ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ರೂಪಾ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಾಮನಗೌಡ ಪಾಟೀಲ, ಫರೀದ ಅವಟಿ, ದುಂಡಪ್ಪಾ ಪಡಸಲಗಿ, ರಮೇಶ ಹರಿಜನ, ಸುಶಾಂತ ಪಟ್ಟಣ, ರಾವಸಾಬ ಕಾಂಬಳೆ, ಶ್ರೀಮತಿ ರೇಖಾ ಪಾಟೀಲ, ಶ್ರೀಮತಿ ವಿದ್ಯಾ ಹಿರೇಮಠ, ಶ್ರೀಮತಿ ಕಲಾವತಿ ಕಿತ್ತೂರ , ಶ್ರೀಮತಿ ಸಂಗೀತಾ ಚನಗೌಡರ, ಶ್ರೀಮತಿ ಜಯಶ್ರೀ ಸೂರ್ಯವಂಶಿ, ಶ್ರೀಮತಿ ವೇದಾ ಪಟ್ಟಣ ಸೇರಿದಂತೆ ಮತ್ತಿತರ ಗಣ್ಯಮಾನ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿನ ಸಾಧಕರು, ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಶ್ರೀ ವಿಜಯ ಹುದ್ದಾರ ಅವರು ಕಾರ್ಯಕ್ರಮ ನಿರ್ವಹಿಸಿದರು.

About Mallikarjun

Check Also

screenshot 2025 11 25 20 24 32 83 e307a3f9df9f380ebaf106e1dc980bb6.jpg

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸುರಕ್ಷತಾ ಕ್ರಮ

ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಜರುಗಿದ ನೋಡಲ್ ಅಧಿಕಾರಿಗಳ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.