Breaking News

ಅಭಿನಂದನೆಗೆ ಅರ್ಹ ಸಿದ್ಧರಾಮಯ್ಯನವರು

Siddaramaiah deserves congratulations

ಜಾಹೀರಾತು

ಬಸವಾದಿ ಶರಣರ ಚಿಂತನೆಗಳನ್ನು ಸದಾ ಮೆಲುಕು ಹಾಕುವ, ಆಗಾಗ ಬಸವಣ್ಣನವರ ವಚನಗಳನ್ನು ವಿಧಾನಸೌಧದಲ್ಲಿ ಉಲ್ಲೇಖಿಸುವ ಸಿದ್ಧರಾಮಯ್ಯ ನಮ್ಮ ನಡುವಿನ ಅಪರೂಪದ ರಾಜಕಾರಣಿ. ಇದರೊಂದಿಗೆ ಸಾಂದರ್ಭಿಕವಾಗಿ ಮೌಢ್ಯ, ಕಂದಾಚಾರಗಳನ್ನು ಮೆಟ್ಟಿ ತುಳಿಯುವ ಧೀಮಂತ ವ್ಯಕ್ತಿ.

ಜನ್ಮತಃ ಲಿಂಗಾಯತನಾಗಿರುವ ಯಾವ ರಾಜಕಾರಣಿಯೂ ಸಹ ನಾನು ಬಸವಣ್ಣನವರ ಅನುಯಾಯಿ ಎಂದು ಹೇಳಿಲ್ಲ. ಆದರೆ ಸಿದ್ಧರಾಮಯ್ಯನವರು ಮಾತ್ರ ಸಾವಿರಾರು ಸಲ ಈ ಮಾತನ್ನು ಹೇಳಿದ್ದಾರೆ. ಬರೀ ಹೇಳುವುದು ಅಷ್ಟೆ ಅಲ್ಲ, ಬಸವ ಜಯಂತಿಯಂದು ಮುಖ್ಯ ಮಂತ್ರಿಯ ಪದ ಗ್ರಹಣ ಮಾಡುವ ಮೂಲಕ ಅದನ್ನು ಆಗು ಮಾಡಿದ್ದಾರೆ.

ಬಿಜಾಪುರದ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಶಿವ ಶರಣೆ ಅಕ್ಕಮಹಾದೇವಿಯ ಹೆಸರನ್ನು ನಾಮಕರಣ ಮಾಡಿದ್ದಾರೆ. ಬಸವ ಕಲ್ಯಾಣದಲ್ಲಿ ಅನುಭವ ಮಂಟಪದ ಕಟ್ಟಡಕ್ಕೆ ಅನುದಾನ ನೀಡಿ ಕಾಮಗಾರಿ ಆರಂಭಿಸಿದ್ದಾರೆ. ಶಿವಮೊಗ್ಗದ ಪಾರ್ಕಗೆ ಅಲ್ಲಮಪ್ರಭುವಿನ ಹೆಸರಿನಿಂದ ನಾಮಕರಣ ಮಾಡಿದ್ದಾರೆ. ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ತಮ್ಮ ದೃಷ್ಠಿಕೋನ ಎಂಥದ್ದು ಎಂದು ಸ್ಪಷ್ಟ ಪಡಿಸಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಬಸವ ಪ್ರಣೀತ ಲಿಂಗಾಯತ ಸ್ವತಂತ್ರ ಧರ್ಮವೆಂದು ಸರಕಾರ ನ್ಯಾಯ ಮೂರ್ತಿ ನಾಗಮೋಹನದಾಸ ವರದಿಯನ್ನು ಒಪ್ಪಿಕೊಂಡಿದೆ. ಈ ವರದಿಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ತನ್ನ ದಿಟ್ಟತನ ಮೆರೆದಿದೆ. ಇದಕ್ಕೆಲ್ಲ ಕಾರಣ ಸಿದ್ಧರಾಮಯ್ಯನವರು ಎಂಬುದು ಸ್ಪಷ್ಟ.

ಬಸವ ತತ್ವ ಪ್ರೀತಿಸುವ,ಗೌರವಿಸುವ, ಆ ತತ್ವಗಳ ಚಿಂತನೆಗಳನ್ನು ಜಾರಿಗೆ ಮಾಡಲು ಯತ್ನಿಸುವ ಸಿದ್ಧರಾಮಯ್ಯನೇ ನಿಜ ಲಿಂಗಾಯತ. ಸಿದ್ಧರಾಮಯ್ಯನವರ ಈ ಅಸೀಮ ಪ್ರೇಮವನ್ನು ಗುರುತಿಸಿ ನಿನ್ನೆ ಬಸವ ಕಲ್ಯಾಣದಲ್ಲಿ ಅವರನ್ನು ಗುಲಾಬಿ ಹೂವಿನ ಪಕಳೆಗಳಿಂದ ಅವರನ್ನು ಹೃದಯಾರೆ ಸನ್ಮಾನಿಸಲಾಯಿತು.

ಸಚಿವ ಈಶ್ವರ ಖಂಡ್ರೆ, ಭಾಲ್ಕಿಯ ಡಾ.ಬಸವಲಿಂಗ ಪಟ್ಟದ್ದೇವರು, ಬಸವಪರ ಸಂಘಟನೆಗಳು ಅಭಿನಂದನಾರ್ಹ ಕೆಲಸ ಮಾಡಿವೆ. ಎಲ್ಲರಿಗೂ ಅಭಿನಂದನೆಗಳು.

೦ ವಿಶ್ವಾರಾಧ್ಯ ಸತ್ಯಂಪೇಟೆ

Siddaramaiah #bhalkihiremath #SatishJarkiholi #priyankakarge

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *