Breaking News

ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿಮಾಚ್-೦೮ರಂದುಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆಗಳು.

At Sri Amriteshwar Temple Special pujas on the occasion of Mahashivaratri on March-08.

ಜಾಹೀರಾತು

ಗಂಗಾವತಿ: ಮಾರ್ಚ್-೦೮ ಶುಕ್ರವಾರ ಮಹಾಶಿವರಾತ್ರಿ ಪ್ರಯುಕ್ತ ಗಂಗಾವತಿ ಹತ್ತಿರದ ದೇವಘಾಟ್‌ನಲ್ಲಿರುವ ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ರಾತ್ರಿಯಿಡೀ ಜಾಗರಣೆ, ಮಹಾರುದ್ರಾಭಿಶೇಕ, ಸಹಸ್ರಬಿಲ್ವಾರ್ಚನೆ, ಮಹಾಮಂಗಳಾರತಿ, ಭಜನಾಮಂಡಳಿ ಜೊತೆ ಮಹಾರುದ್ರಾಭಿಷೇಕ, ಅನ್ನಸಂತರ್ಪಣೆ, ಮತ್ತು ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗಲಿವೆ.
ಮಾರ್ಚ್-೧೦ ಭಾನುವಾರ ಅಮಾವಾಸ್ಯೆಯ ದಿನದಂದು ಕೂಡಾ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳುಗೆ ಸಕಲ ಭಕ್ತಾದಿಗಳು ಸಹಕಾರ ನೀಡಿ ಯಶಸ್ವಿಯಾಗಿ ಜರುಗಲಿವೆ.
ಶ್ರೀ ಅಮೃತೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಪಂಚ ಲಿಂಗಗಳಲ್ಲಿ ಒಂದಾಗಿದೆ. ಅಲ್ಲದೇ ಪ್ರತಿನಿತ್ಯ ಅಮೃತೇಶ್ವರನ ಮೇಲೆ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಕಿರಣಗಳು ಬೀಳುವ ವಿಶೇಷತೆಯನ್ನು ಹೊಂದಿದೆ. ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಅಸಂಖ್ಯಾತ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಕೊಪ್ಪಳ ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮಗಳ ದೇವರುಗಳು ಗಂಗೆಸ್ಥಳಕ್ಕೆ ಬಂದು ಅಮೃತೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ಮತ್ತೊಂದು ವಿಶೇಷವಾಗಿದೆ. ವಿಪ್ರ, ಮಾಗಾಣಿ ರೈತರು ಹಾಗೂ ಸಮಸ್ತ ಭಕ್ತಾದಿಗಳ ಸಮ್ಮುಖದಲ್ಲಿ ಪ್ರತಿವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಎಲ್ಲಾ ಭಕ್ತಾದಿಗಳು ತನು-ಮನ-ಧನದ ಸೇವೆ ಸಲ್ಲಿಸುವುದರ ಮೂಲಕ ಅಮೃತೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಸ್ಥಾನ ಸಮಿತಿ ಅಧ್ಯಕ್ಷರಾದ ವೀರೇಶಪ್ಪ ಕೊಳ್ಳಿ ಇವರು ತಿಳಿಸಿದ್ದಾರೆ.

About Mallikarjun

Check Also

ಹರಿದು ಹೋಗಿದೆ ಕೌದಿ ಹೊಲಿಯುವವರ ಬದುಕು

The lives of those who sew clothes have been torn apart. ಉತ್ತರ ಕರ್ನಾಟಕದಲ್ಲಿ ಕೌದಿಗೆ ತನ್ನದೇ …

Leave a Reply

Your email address will not be published. Required fields are marked *