Breaking News

ಆಶಾ ಸಮಸ್ಯೆಗಳ ಬಗ್ಗೆ ಚರ್ಚಿಸಲುಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ – ಆಶಾ ಹೋರಾಟ ಮುಂದೂಡಿಕೆ.

ಆಶಾ ಕಾರ್ಯಕರ್ತೆಯರ ವಿಧಾನಸೌಧ ಚಲೋ ಅಂಗವಾಗಿ ನಡೆಯುತ್ತಿರುವ ಅಹೋ ರಾತ್ರಿ ಹೋರಾಟವು ಅಂತ್ಯಗೊಂಡಿದೆ .  ಆರೋಗ್ಯ ಸಚಿವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕೆಲವು ಭರವಸೆಗಳು ನೀಡಿದ್ದರೂ , ಪ್ರಮುಖ ಬೇಡಿಕೆಗಳು ಈಡೇರಿರಲಿಲ್ಲ . ಹಾಗಾಗಿ  ಹೋರಾಟವು ಮುಂದುವರೆಯಿತು . ಹೋರಾಟದ ಒತ್ತಡದ ಫಲವಾಗಿ ಮಾನ್ಯ ಮುಖ್ಯಮಂತ್ರಿಗಳು , ಆಶಾ ಸಂಘದ ರಾಜ್ಯ ಅಧ್ಯಕ್ಷರು , ರಾಜ್ಯ ಕಾಯದರ್ಶಿಗಳು ಹಾಗೂ ರಾಜ್ಯ ಮುಖಂಡರ ನಿಯೋಗವನ್ನು ಕರೆದು ಇಂದು ಚರ್ಚಿಸಿದರು . ಈ ಚರ್ಚೆಯ ನಂತರ ಕೆಳಗಿನ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು .

ಜಾಹೀರಾತು

ಸಂಘದ ನಿಯೋಗವು ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿತು . ಆಶಾಗಳ ಗಂಭೀರ ಸಮಸ್ಯೆಗಳು ಮತ್ತು ಅವರಿಗಾಗಿರುವ ಅನ್ಯಾಯಗಳು ಗಮನದಲ್ಲಿದೆಯೆಂದು ತಿಳಿಸಿದ ಮಾನ್ಯ ಮುಖ್ಯಮಂತ್ರಿಗಳು ಅವುಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು . ಅದಕ್ಕೆ ಸಂಬಂಧಪಟ್ಟಂತೆ ಆಶಾಗಳ ಗಂಭೀರ ಸಮಸ್ಯೆಗಳನ್ನು ಚರ್ಚಿಸಲು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ , ಆರೋಗ್ಯ ಸಚಿವರು , ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಒಳಗೊಂಡ ವಿಸ್ತ್ರತ ಸಭೆಯನ್ನು ಫೆ .23 ರ ನಂತರ ಕರೆಯಲಾಗುವುದು ಎಂದು ತಿಳಿಸಿದರು .

ಮುಖ್ಯಮಂತ್ರಿಗಳ ಜೊತೆ ಮಾತುಕತೆಯ ನಂತರ , ತುರ್ತು ಸಭೆ ನಡೆಸಿದ ಆಶಾ ಸಂಘನೆಯ ಮುಖಂಡರು , ಮುಖ್ಯಮಂತ್ರಿಗಳು ವಿಸ್ತ್ರತ ಸಭೆ ಕರೆದಿರುವ ಹಿನ್ನಲೆಯಲ್ಲಿ ಹೋರಾಟವನ್ನು ಮುಂದೂಡುವ ತೀರ್ಮಾನ ಕೈಗೊಂಡರು . ಸರ್ಕಾರದ ತೆಗೆದುಕೊಳ್ಳುವ ತೀರ್ಮಾನಗಳನ್ನು ಆಧರಿಸಿ ಮುಂದಿನ ನಡೆಯನ್ನು ಸಂಘವು ನಿರ್ಧರಿಸಲಿದೆ . ಈ ತೀರ್ಮಾನವನ್ನು ಸಂಘದ ಸಭೆಯಲ್ಲಿ ಕೈಗೊಳ್ಳಲಾಯಿತು .

About Mallikarjun

Check Also

screenshot 2025 07 28 19 58 25 20 6012fa4d4ddec268fc5c7112cbb265e7.jpg

ಎಂಟನೇಯ ದಿನಕ್ಕೆ ಕಾಲಿಟ್ಟ ಪೌರಕಾರ್ಮಿಕರ ಹೋರಾಟ

The struggle of the civil servants has entered its eighth day. ಕಾರಟಗಿ ಪುರಸಭೆಯಲ್ಲಿ ಸುಮಾರು ಹತ್ತು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.