Breaking News

ಕರಡಿ ಸಂರಕ್ಷಣಾ ಪ್ರದೇಶಘೋಷಣೆ:ಸ್ವಾಗತ

Bear Conservation Area Announcement: Welcome

ಜಾಹೀರಾತು
Screenshot 2024 02 04 17 50 34 06 6012fa4d4ddec268fc5c7112cbb265e7 300x187

ಗಂಗಾವತಿ:ಗಂಗಾವತಿ-ಕನಕಗಿರಿ ವ್ಯಾಪ್ತಿಯಲ್ಲಿ ಕರಡಿ ಸಂರಕ್ಷಣಾ ಪ್ರದೇಶವನ್ನು ಘೋಷಣೆ ಮಾಡಿರುವುದನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಸ್ವಾಗತಿಸಿದೆ.

ಹಿರೇ ಸೂಳಿಕೆರೆ,ಹಾಸಗಲ್,ಚಿಲಕಮುಖಿ,ಅರಸಿನಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 2918 ಎಕರೆ ಪ್ರದೇಶವನ್ನು ಕರಡಿ ಸಂರಕ್ಷಣಾ ಪ್ರದೇಶ ಎಂದು ಘೋಷಣೆ ಮಾಡಿರುವುದನ್ನು ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ಸ್ವಾಗತಿಸಿದ್ದಾರೆ.

ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಹಿರೇ ಬೆಣಕಲ್ ವ್ಯಾಪ್ತಿಯಲ್ಲಿ ಕರಡಿ ಧಾಮ ಪ್ರಾರಂಭಿಸಬೇಕೆಂದು ಅಶೋಕಸ್ವಾಮಿ ಹೇರೂರ ಸರಕಾರವನ್ನು ಪದೇ ಪದೇ ಒತ್ತಾಯಿಸುತ್ತಾ ಬಂದಿದ್ದರು.

ಸರಕಾರ ಕರಡಿ ಸಂರಕ್ಷಣಾ ಪ್ರದೇಶ ಘೋಷಣೆ ಮಾಡಿರುವುದಕ್ಕಾಗಿ ,ಈ ಬಗ್ಗೆ ಮುತುವರ್ಜಿ ವಹಿಸಿದ ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿಯವರನ್ನು ಅವರು ಅಭಿನಂದಿಸಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.