Breaking News

ಮಾತನಾಡಿದರೆ ಮನ ಅರಳುತಿರಬೇಕು-ಮಹಾದೇವಸ್ವಾಮಿಗಳು

If you speak, your mind should be blooming – Mahadeva Swami

ಜಾಹೀರಾತು
Screenshot 2023 12 24 13 33 02 18 6012fa4d4ddec268fc5c7112cbb265e7 300x248

ಯಲಬುರ್ಗಾ— ಒಳ್ಳೆ ಮಾತಿಗಿಂತ ದುಡಿದು ತಿನ್ನುವ ಕೈಗಳು ಶ್ರೇಷ್ಠ ಎಂದಾಗಲೂ ನಮ್ಮ ಮಾತುಗಳು ಪರರ ಮನಸ್ಸನ್ನು ಅರಳಿಸುವಂತಿರಬೇಕೆಂದು ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಮಹಾದೇವ ಸ್ವಾಮಿಗಳು ಹೇಳಿದರು.

ತಾಲೂಕಿನ ಕರಮುಡಿ ಗ್ರಾಮದ ಕರವೀರಭದ್ರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ವೀರಭದ್ರೇಶ್ವರ ಪುರಾಣ ಪ್ರವಚನದ ಮೂರನೇ ದಿನದ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಗ್ರಾಮದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ನೋಡಿದರೆ ಕೈಲಾಸವೆ ಕರಮುಡಿ ಗ್ರಾಮದಲ್ಲಿ ಇದೆ ಅನಿಸುತ್ತದೆ ಜಾತಿ ಬೇಧಗಳನ್ನು ಎಣಿಸದೆ ಸಾಮರಸ್ಯದ ಬದುಕು ಸಾಗಿಸುತ್ತಿರುವ ಅನುಭವ ಮಂಟಪವೇ ಧರೆಗೆ ಇಳಿದಂತಾಗಿದೆ . ದಾನ ಮಾಡುವ ಕೈ ಹಾಗೂ ಮನಸ್ಸು ಎರಡು ಶುದ್ಧವಾಗಿರಬೇಕು ಅದು ನಿಜಕ್ಕೂ ಶಿವನಿಗೆ ಅರ್ಪಣೆ ಯಾಗುತ್ತದೆ ಅಂತಹ ಮಲ್ಲಿಗೆ ಹೂವಿನ ಮನಸ್ಸು ಗ್ರಾಮದವರದಾಗಿದೆ. ಒಂದು ಒಳ್ಳೆಯ ಧಾರ್ಮಿಕ ಕೆಲಸ ಹೇಗಿರಬೇಕು ಎಂಬುವುದಕ್ಕೆ ಗ್ರಾಮದ ಹಿರಿಯರು ˌ ಯುವಕರು ! ಮಹಿಳೆಯರು ಮಾಡುತ್ತಿರುವ ಕೆಲಸವೇ ಸಾಕ್ಷಿಯಾಗಿದೆ ಎಂದರು.

 ಗಜಗಿನಹಾಳದ ವೀರೇಶ ಶಾಸ್ತ್ರಿಗಳು  ವೀರಭದ್ರೇಶ್ವರ ಪುರಾಣ ಪ್ರವಚಿಸಿದರು. ಯರಗೇರಾದ ಚಂದಾಲಿಂಗಯ್ಯ ಹಿರೇಮಠ ˌ ವೀರಭದ್ರಯ್ಯ ಕೆಂಬಾವಿಮಠ ರವರು ಸಂಗೀತ ಕಾರ್ಯಕ್ರಮ ನೀಡಿದರು.

ಸಂಗಪ್ಪ ಬಂಡಿˌರಾಜು ಉಳ್ಳಾಗಡ್ಡಿˌ ಮಂಜುನಾಥ ತುರಬಿನˌ ಅಂದಪ್ಪ ಹೊಸಂಗಡಿ ˌವೀರಣ್ಣ ಹೆಂಡಿಗೇರಿˌ ವೀರಣ್ನ ಮಾನಶೆಟ್ಟಿ ˌಶಾರದಾ ಕುರಿ! ವೀರಮ್ಮ ಪಾಟೀಲ! ಅನ್ನಪೂರ್ಣ ಕೆಂಚರಡ್ಡಿˌ ಶಕುಂತಲಾ ಪಾಟೀಲ ˌಶಿವಪ್ಪ ಉಳ್ಳಾಗಡ್ದಿ ˌ ಕಳಕಪ್ಪ ರಾಟಿ! ಶರಣಗೌಡ ಪೋ.ಪಾಟೀಲ ˌ ಶ್ಯಾಮೀದ್ ಸಾಬ ಮುಲ್ಲಾ ˌ ಹುಚ್ಛುಸಾಬ ಬಡಿಗೇರ!ˌˌಭೀಮಪ್ಪ ಹವಳಿˌ ಮಂಜುನಾಥ ಕುಕನೂರ ಮಂಜುನಾಥ ಚನ್ನಬಸಪ್ಪ ಗೊಂಗಡಶೆಟ್ಟಿ ! ಗೌಡಪ್ಪ ಬಲಕುಂದಿ ˌ ಉಮೇಶ ಕುಕನೂರ ˌ ಮರ್ಧಾನಸಾಬ ಮುಲ್ಲಾ ˌ ˌˌಗಂಗಪ್ಪ ಹವಳಿ. ವೀರೂಪಾಕ್ಜ್ಞಪ್ಪ ಉಳ್ಳಾಗಡ್ಡಿ. ಪರುಶರಾಮ ರಾಠೊಡ ˌಇನ್ನೀತರರು ಉಪಸ್ಥಿತರಿದ್ದರು.
ದಾಸೋಹ ಸೇವೆಯನ್ನು ಮೂರನೇ ವಾರ್ಡಿನ ನಾಗರಿಕರು ಮಾಡಿದರು .

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.