Breaking News

ಕುವೈತ್ ನಲ್ಲಿ ಪ್ರಬಂಧ ಮಂಡಿಸಲಿದ್ದಾರೆಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ

Dr. B. K. Ravi, Chancellor of Koppal Vishwa Vidyalaya, will present a paper in Kuwait

ಜಾಹೀರಾತು

ಅ.28ರಿಂದ ಅರಬ್-ಅಮೇರಿಕ ಮಾಧ್ಯಮ ಶಿಕ್ಷಕರ ಸಮ್ಮೇಳನ

ಕೊಪ್ಪಳ ಅಕ್ಟೋಬರ್ 26 (ಕ.ವಾ.): ಕುವೈತ್ ನಲ್ಲಿ ಅಕ್ಟೋಬರ್ 28 ರಿಂದ 30ರವರೆಗೆ ಅರಬ್-ಅಮೇರಿಕ ಮಾಧ್ಯಮ ಶಿಕ್ಷಕರ ಸಂಘದ 27ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯಲಿರುವ “ಬದಲಾಗುತ್ತಿರುವ ಮಾಧ್ಯಮದ ಆಯಾಮಗಳು : ಮಾಧ್ಯಮ ಸಂಗಮ ಮತ್ತು ವಿಭಜನೆ” ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಕೆ. ರವಿ ಪಾಲ್ಗೊಳ್ಳಲಿದ್ದಾರೆ.
ಸಂಘಟಕರ ಆಹ್ವಾನದ ಮೇಲೆ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಡಾ. ಬಿ.ಕೆ. ರವಿಯವರು “ಮಾಧ್ಯಮ ಸಂಗಮದ ಯುಗದಲ್ಲಿ ಆರೋಗ್ಯ ಸಂವಹನದ ಗ್ರಹಿಕೆ” ಕುರಿತಾದ ಸಂಶೋಧನಾ ಪ್ರಬಂಧ ಮಂಡಿಸುವರು. ಈ ಮಾಧ್ಯಮ ಶಿಕ್ಷಕರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅಮೇರಿಕ ಸೇರಿದಂತೆ ಸುಮಾರು 25 ರಾಷ್ಟ್ರಗಳ ಮಾಧ್ಯಮ ಶಿಕ್ಷಕರು, ವೃತ್ತಿಪರರು ಹಾಗೂ ಮಾಧ್ಯಮ ತಜ್ಞರು ಪಾಲ್ಗೊಳ್ಳುವರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *