ಯಾವ ಹಣ್ಣುಗಳು ಆರೋಗ್ಯಕ್ಕೆ ಉತ್ತಮ?

Which fruits are good for health?
 
Which fruits are good for health?
 

ಯಾವ ಹಣ್ಣುಗಳು ಆರೋಗ್ಯಕ್ಕೆ ಉತ್ತಮ?

ಜಾಹೀರಾತು

ಎಲ್ಲಾ ಹಣ್ಣುಗಳು ನಮಗೆ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಡಲು ಸಹಾಯ ಮಾಡುತ್ತದೆ. ಆದರೆ ಅದನ್ನು ಹೇಗೆ ಯಾವ ಹೊತ್ತಿನಲ್ಲಿ ಸೇವೆಸ ಬೇಕೆಂದು ನಿಯಮಗಳು ಇದೆ.

ಉದಾಹರಣೆಗೆ ಹಲಸಿನ ಹಣ್ಣು ಹಸಿವು ಇದ್ದಾಗ ಊಟಕ್ಕೆ ಮುಂಚೆ 2 ಗಂಟೆ ಮೊದಲು ಹಾಗೆ ಯೇ ಬಾಳೆ ಹಣ್ಣುಗಳನ್ನು ಬೆಳಗ್ಗೆ ಉಪಹಾರ ಮುಗಿಸಿ ದ ನಂತರ ಒಂದು ಗಂಟೆ ಬಿಟ್ಟು ಅಥವಾ ಉಪಹಾರ ತಪ್ಪಿ ಹೋದಾಗ ಬಾಳೆಹಣ್ಣು ಸೇವಿಸಬಹುದು.

ಕಲಂಗಡಿ, ಮಸ್ಕ್ ಮೆಲಾನ್ ತಿಂದ ನಂತರ ನೀರು ಸೇವಿಸಬಾರದು, ಪರಂಗಿ ಹಣ್ಣು, ಲಿಚಿ , ನೇರಳೆ ಹಣ್ಣುಗಳು ಬಸುರಿ ಹೆಂಗಸರು ಸೇವಿಸಬಾರದು.ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಗೆ ಧನ್ಯವಾದಗಳನ್ನು ಸಲ್ಲಿಸಬೇಕು.

ಎಷ್ಟೊಂದು ವಿಧ ವಿಧವಾದ ಹಣ್ಣುಗಳು ದೇಶ ವಿದೇಶ ದಲ್ಲಿ ಬೆಳೆದು ಲೋಕದ ಮೂಲೆ ಮೂಲೆಯ ನಮ್ಮ ಮಾರುಕಟ್ಟೆ ಯಲ್ಲಿ ಲಭ್ಯ ವಾಗಿದೆ.. ಇತ್ತೀಚೆಗೆ ಯಷ್ಟೆ ಅಪರಿಚಿತ ಹಣ್ಣುಗಳ ಹೆಸರು ಒಂದೊಂದಾಗಿ ಪರಿಚಯ ವಾಗುತ್ತಿದೆ. ನಮಗೆ ಕೆಲವೊಂದು ಹಣ್ಣು ಗಳು ನಮ್ಮ ಹಣ್ಣು ಗಳ ರುಚಿಗೆ ಹೋಲುವ ರೀತಿಯಲ್ಲಿ ಇದೆಯೇನೋ ಅನ್ನಿಸುತ್ತೆ. ಬೆಲೆ ಯೂ ಸ್ವಲ್ಪ ದುಬಾರಿ.

Exotic fruits ಎಂಬ ವಿಂಗಡಣೆ ಯಿಂದ ಎಲ್ಲಾ ಶಾಪಿಂಗ್ ಮಾಲ್ ಗಳಲ್ಲಿ ಸಿಗುತ್ತದೆ.ನಮ್ಮ ವೈವಿಧ್ಯತೆಯಲ್ಲಿ ಏಕತೆ ಯ ನಮ್ಮ ಭಾರತ ದೇಶ ಕೇವಲ ಭಾಷೆಯಲ್ಲಿ, ಉಡುಪು, ಸಂಸ್ಕೃತಿ ಮತ್ತು ಸಂಪ್ರದಾಯ ದಲ್ಲಿ ಮಾತ್ರವಲ್ಲದೆ ಕೆಲವು ಹಣ್ಣುಗಳು ಸಹ ಒಂದು ರಾಜ್ಯದಲ್ಲಿ ಮಾತ್ರ ಬೌಗೋಳಿಕ ಸ್ಥಿತಿಗೆ ಅನುಸಾರವಾಗಿ ಹೆಚ್ಚಾಗಿ ಸಿಗುತ್ತದೆ.ಪ್ರಸ್ತುತ ಹಾಗೆ ಇಲ್ಲ.

ಎಲ್ಲಾ ಪ್ರದೇಶದ ಹಣ್ಣುಗಳು ಲಭ್ಯ. ಕೆಲವೊಂದು ಇಲ್ಲಿ ಕಲೋಚಿತವಾಗಿದರೆ ಮತ್ತೊಂದು ರಾಜ್ಯದಲ್ಲಿ ಇನ್ನು ತಡವಾಗ ಬಹುದು.

ಹಣ್ಣುಗಳ ಸಲಾಡ್ (ರಸಾಯನ?) ದಲ್ಲಿ ನಮಗೆ ಹೆಚ್ಚು ಹೆಚ್ಚಾಗಿ ವರ್ಣರಂಜಿತ ಮಿಶ್ರಣ ಹಣ್ಣುಗಳ ಸವಿಯಲು ಸಿಗುತ್ತಿದೆ. ಹೆಚ್ಚು ರುಚಿಕರ ಮತ್ತು ನಮ್ಮ ಆರೋಗ್ಯವನ್ನು ಕಾಪಾಡಲು ಅನುಕೂಲ ಮಾಡುತ್ತಿದೆ.ನಾವು ಆಯಾ ಕಾಲೋಚಿತ ಹಣ್ಣುಗಳನ್ನು (seasonal fruits) ಹೆಚ್ಚಾಗಿ ಸೇವಿಸಬೇಕು.

ಕಾರಣವೆಂದರೆ ಆಯಾ ಋತುಮಾನದ ಹಣ್ಣುಗಳು ಬೆಲೆ ಕಡಿಮೆ, ರುಚಿಕರ, ತಾಜಾತನ, ಅವುಗಳ ಗುಣಮಟ್ಟವನ್ನು ಸೇರಿಸುವ ನೈಸರ್ಗಿಕ ಸುವಾಸನೆ ಹೊಂದಿರುತ್ತದೆ. ಕಾಲೋಚಿತ ಹಣ್ಣುಗಳು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.ನನಗೆ ಹಣ್ಣುಗಳು ಎಂದರೆ ಬಹಳ ಇಷ್ಟ. ಹೆಚ್ಚಾಗಿ ಬರೆಯಲು ಅಸೆ.

ಆದರೆ ಸಮಯದ ಅಭಾವ ವಿರುವುದರಿಂದ ಈಗ ಕೆಲವು ಮುಖ್ಯವಾದ ಹಣ್ಣುಗಳುಗಳು ನಮ್ಮ ಆರೋಗ್ಯಕ್ಕೆ ನೀಡುವ ಫಲದ ಬಗ್ಗೆ ಅಲ್ಲಿ ಇಲ್ಲಿ ಓದಿ ಸಂಗ್ರಹಿಸುರುವ ತುಣುಕುಗಳು ಇಲ್ಲಿ ತಿಳಿಸಲಾಗಿದೆ.

ಮುಂದೆ ಸಮಯ ಸಿಗುವಾಗ ಇನ್ನಷ್ಟು ವಿವರ ಮುಂಬರುವ ಹಣ್ಣುಗಳ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತೇನೆ.ಬೇಸಿಗೆಯಲ್ಲಿ ದೊರೆಯುವ

ಹಣ್ಣುಗಳು : ಮಾವು, ಕಲ್ಲಂಗಡಿ, ನೇರಳೆ, ಪ್ಲಮ್, ಪರಂಗಿ

ಹಣ್ಣುಗಳುಮಾವು : ವಿಟಮಿನ್ ಸಿ ಹೇರಳವಾಗಿದೆ. ದೇಹವನ್ನು ನೈಸರ್ಗಿಕ ರಕ್ಷಣೆ ಕಾರ್ಯ ವಿಧಾನ ವನ್ನು ಹೆಚ್ಚಿಸುತ್ತದೆ, ಮಾವು ಶಾಖದ ವಿರುದ್ಧ ಹೋರಾಡುತ್ತದೆ ಮತ್ತು ಬೇಸಿಗೆಯಲ್ಲಿ ಶಾಖದ ಹೊಡೆತಗಳನ್ನು ತಡೆಯುತ್ತದೆ.

(Sun strokes). ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಹೃದಯದ ಅರೋಗ್ಯ ವನ್ನು ಸುಧಾರಿಸುತ್ತದೆ.

ಕಲ್ಲಂಗಡಿ : ಕಣ್ಣುಗಳ ಆರೋಗ್ಯ, ಜೀವಕೋಶದ ಬೆಳವಣಿಗೆ, ದೇಹದ ಉಷ್ಣತೆ ಕಡಿಮೆ ಮಾಡುತ್ತದೆ, ಮೂತ್ರಪಿಂಡದ ಕಲ್ಲುಗಳು ಮತ್ತು ಸ್ನಾಯು ನೋವುಗಳು ತಡೆಯುವುದು.

ನೇರಳೆ : ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದು, ಮಧುಮೇಹ (Diabetes) ತಡೆಯುವುದು, ಮಿದುಳು ಆರೋಗ್ಯ ಸುಧಾರಣೆ, ತೂಕ ಇಳಿಸಲು ಸಹಾಯ ಮಾಡುವುದು,

ಪ್ಲಮ್ : (ಊಟಿ ಆಪಲ್) ಸೌಂದರ್ಯ ವರ್ಧಕ, ಕಲೆ, ತ್ವಚೆ ಯ ಕಾಂತಿ ಹೆಚ್ಚಿಸುವುದು, ಮಧುಮೇಹ ಸ್ಥಿಮಿತವಾಗಿ ಇಡುವುದು, ರಕ್ತದ ಒತ್ತಡ ಇಳಿಸುವುದು, ಜೀರ್ಣಕ್ಕೆ ಸಹಾಯಕಾರಿ, ಕರುಳು ಶುದ್ದಿಗೆ ಒಳ್ಳೆಯದು.

ಪರಂಗಿ ಹಣ್ಣು : ಸ್ನಾಯು ಅಂಗಾಂಶ ನವೀಕರಣ ಪ್ರಕ್ರಿಯೆಗೆ ಉತ್ತಮ, ಚರ್ಮದ ಕಾಂತಿ, ಜೀರ್ಣ ಕ್ರಿಯೆಗೆ, ನಾರಿನ ಅಂಶ ಹೆಚ್ಚಾಗಿ ಇರುವುದು, ಹೃದಯದ ಆರೋಗ್ಯ ಸಹಾಯ ಮಾಡುವುದು.

ಮಳೆಯ ಕಾಲದ ಹಣ್ಣುಗಳು : ಸೀತಾ ಫಲ, ಸೇಬು, ಬಾಳೆಹಣ್ಣುಸೀತಾ ಫಲ : ಕಣ್ಣಿನ ಆರೋಗ್ಯ ವೃದ್ಧಿ, ಉಷ್ಣತೆ ಕಡಿಮೆಗೆ ಸಹಾಯ ಮಾಡುತ್ತದೆ.

ಸೇಬು : ಮದುಮೇಹ ನಿಯಂತ್ರಣ, ಹೃದಯ ಅರೋಗ್ಯ, ತೂಕ ಕಡಿಮೆ, ಬಹಳ ಹೆಚ್ಚಾಗಿ ವಿಟಮಿನ್ ಸಿ. ಉದರ ಭಾದೆ ಸರಿಯಾಗುತ್ತದೆ.

ದಿನಕ್ಕೆ ಒಂದು ಸೇಬು ತಿಂದರೆ ವ್ಯಧ್ಯರನ್ನು ಕಾಣುವ ಅವಶ್ಯಕತೆ ಬಾರದು ಎಂಬ ಆಂಗ್ಲ ಗಾದೆಯೇ ಇದೆ.

ಉತ್ತರ ಭಾರತದಲ್ಲಿ ಸಿಗುವ ಸೇಬು ರಸವತ್ತಾಗಿರುತ್ತದೆ. ದಕ್ಷಿಣ ಭಾರತಕ್ಕೆ ರವಾನೆ ಆಗುವ ವೇಳೆಯಲ್ಲಿ ರಸ ಸ್ವಲ್ಪ ಕಡಿಮೆ ಯಾಗುತ್ತದೆ ಅಂತ ನನ್ನ ಅನಿಸಿಕೆ.

ಬಾಳೆ ಹಣ್ಣು : potassium, ನಾರಿನ ಶಕ್ತಿ ಹೇರಳ ವಾಗಿದೆ. ವಿಟಮಿನ್ ಬಿ6, ಬಿಳಿಯ ರಕ್ತ ಕಣಗಳ ಶಕ್ತಿ ಗೆ, ಉದರ ರೋಗಕ್ಕೆ, ತಲೆಸುತ್ತು, ವಾಕರಿಕೆ, ಜೀರ್ಣ, ಹಸಿವು ಉತ್ತಜಿಸಲು, ಇನ್ನು ಹಲವಾರು ಪ್ರಯೋಜನ ಗಳು ಇದೆ.

ವಸಂತ ಋತು ಹಣ್ಣುಗಳು : ಹಲಸಿನ ಹಣ್ಣು, ಅನಾನಸ್ ಲಿಚಿ, ದಾಳಿಂಬೆಹಲಸಿನ ಹಣ್ಣು : ಮೂಳೆ ಗಟ್ಟಿ ಮಾಡಲು ಸಹಾಯ, ಮಲಬದ್ಧತೆ ಗೆ ಒಳ್ಳೆಯ ಹಣ್ಣು. ಇನ್ನು ಹಲವಾರು ಪ್ರಯೋಜನ ಗಳಿವೆ.

ಅನಾನಸ್ : ರೋಗನಿರೋಧಕ ಶಕ್ತಿಯನ್ನು, ಕ್ಯಾನ್ಸರ್, ತಲೆನೋವು, ಇತರೆ ರೋಗಕ್ಕೆ ಶಕ್ತಿ ವರ್ಧಕ, ಜೀರ್ಣ ಶಕ್ತಿ ಗೆ ಮತ್ತು ಹೆರಳವಾದ ವಿಟಮಿನ್ ಗಳಿಂದ ಕೂಡಿರುವ ಹಣ್ಣು.

ಲಿಚಿ : ಕೆಂಪು ರಕ್ತದ ಕಣ ವೃದ್ಧಿ, ಮೂಳೆ ಬಲ, ಉದರ ರೋಗಗಳಿಗೆ, ಜೀರ್ಣ ವ್ಯಾದಿ ಗಳಿಗೆ ಒಳ್ಳೆ ಯದು.

ದಾಳಿಂಬೆ : ರೋಗಕ್ಕೆ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕೀಲು ನೋವುಗಳು, ಮೂಳೆ ಸಂಬಂಧ ರೋಗಕ್ಕೆ, ರಕ್ತದ ಒತ್ತಡ ಗಳಿಗೆ ಹೆಚ್ಚು ಪ್ರಯೋಜನಕಾರಿ.

ಚಳಿಕಾಲದ ಹಣ್ಣುಗಳು : ಕಿತ್ತಳೆ, ಕಿವಿ, ದ್ರಾಕ್ಷಿ, ಸಪೋಟಕಿತ್ತಳೆ : ವಿ ಟಮಿನ್ ಸಿ ಯಿಂದ ಕೂಡಿರುವ ಈ ಹಣ್ಣು ಚರ್ಮ ಕಾಂತಿ ಹಾಗೂ ಚರ್ಮದ ರೋಗಕ್ಕೆ ಉಪಕಾರಿ. ಹೃದಯ ರೋಗಕ್ಕೆ, ಮದುಮೇಹ ಗಳಿಗೆ ಒಳ್ಳೆಯದು.

ಕಿವಿ : ಹೇರಳ ವಾದ ವಿಟಮಿನ್ ಸಿ ಚರ್ಮ, ಉರಿಯೂತ, ಕಿರುಬಿಲ್ಲೆಗಳ ಹೆಚ್ಚಳ, ಜೀರ್ಣಕ್ಕೆ, ಉದರಕ್ಕೆ ಒಳ್ಳೆ ಯ ಹಣ್ಣು.

ದ್ರಾಕ್ಷಿ : ದೇಹದ ಉಷ್ಣತೆ ಸೀಮಿತವಾಗಿದೆ ಇಡುತ್ತದೆ, ಮದುಮೇಹ, ಹೃದಯ, ತಲೆನೋವು, ಸುಸ್ತು, ಉದರ ಬೇನೆ, ಇತರೆ ರೋಗಳಿಗೆ ರಾಮಬಾಣ.

ಸಪೋಟ : ರೋಗ ನಿರೋಧಕ, ಸೋಂಕು ರೋಗಕ್ಕೆ, ಚರ್ಮ ರೋಗಕ್ಕೆ ಜೀರ್ಣ ಶಕ್ತಿಯನ್ನು ಹಾಗೂ ಚಯಪಚಯ ಗಳಿಗೆ ತುಂಬಾ ಅನುಕೂಲವಾಗುವ ಹಣ್ಣು.ದಯವಿಟ್ಟು ದಿನಕ್ಕೆ ಒಂದು ಹಣ್ಣು ಗಳಾನ್ನಾದರೂ ಸೇವಿಸಿ, ಜಿಪುಣತನ ಬೇಡ.

ಹಾಗೆಯೇ ನಮ್ಮ ರೈತರನ್ನು ಉಳಿಸಿ ಸಾಧ್ಯವಾದರೆ ಅವರು ಮಾರುವ ಹಣ್ಣುಗಳನ್ನು ಹೆಚ್ಚಾಗಿ ಕೊಂಡು ಕೊಳ್ಳಿ.ಹಣ್ಣು ಸೇವಿಸಿ ಅರೋಗ್ಯ ದಿಂದ ಇರಿ.ಧನ್ಯವಾದಗಳು.

Mallikarjun

Share
Published by
Mallikarjun

Recent Posts

ಕನಕಗಿರಿ: ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಖಾಸಗಿ ಅಭ್ಯರ್ಥಿಗಳಿಗೆ ಅವಕಾಶ

Kanakagiri: Private candidates allowed to apply for ITI admission ಕನಕಗಿರಿ: ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಖಾಸಗಿ…

2 hours ago

ರೆಫ್ರಿಜರೇಷನ್, ಏರ್ ಕಂಡೀಷನಿಂಗ್ & ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

Applications invited for Refrigeration, Air Conditioning & Sheep Farming Training ರೆಫ್ರಿಜರೇಷನ್, ಏರ್ ಕಂಡೀಷನಿಂಗ್ & ಕುರಿ…

2 hours ago

2 hours ago

ಗಂಗಾವತಿ: ಐಟಿಐ ಪ್ರವೇಶಕ್ಕೆ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Gangavathi: Applications invited from private candidates for ITI admissions ಗಂಗಾವತಿ: ಐಟಿಐ ಪ್ರವೇಶಕ್ಕೆ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ…

2 hours ago

ಲೋಕ ಅದಾಲತ್‌ನಲ್ಲಿ 49,953 ಪ್ರಕರಣಗಳ ಇತ್ಯರ್ಥ

49,953 cases disposed of in Lok Adalat ಲೋಕ ಅದಾಲತ್‌ನಲ್ಲಿ 49,953 ಪ್ರಕರಣಗಳ ಇತ್ಯರ್ಥ ಕೊಪ್ಪಳ ಮಾರ್ಚ್ 16…

2 hours ago