ಕಲ್ಯಾಣಸಿರಿ ವಿಶೇಷ

ಸಿದ್ದು ಬಂಡಿವಡ್ಡರಿಗೆ ಭೋವಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ.

Siddu Bandivadda was given the post of President of Bhovi Nigam.

ಜಮಖಂಡಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಉತ್ತರ ಕರ್ನಾಟಕದ ಜನರ ಹಾಗೂ ನಾಯಕರ ಪ್ರಯತ್ನ ಸಿಂಹಪಾಲಿದ್ದು ಆದರೆ ನಿಗಮ ಸ್ಥಾಪನೆಯದಾ ವರ್ಷದಿಂದ ಇಲ್ಲಿವರೆಗೂ ಉತ್ತರ ಕರ್ನಾಟಕ ಒಬ್ಬ ವ್ಯಕ್ತಿಯು ಒಂದು ಬಾರಿಯೂ ನಿಗಮ ಅಧ್ಯಕ್ಷರಾಗಲಿ ಅಥವಾ ನಿರ್ದೇಶಕರಾಗಲಿ ಆಗದೇ ಇರುವುದು ದುರಷ್ಟಕರ ಸಂಗತಿ.

ಚಿಕ್ಕ ವಯಸ್ಸಿನಲ್ಲೇ ಯುವ ಘಟಕ ರಾಜ್ಯ ಸಂಚಾಲಕರಾಗಿ ರಾಜ್ಯಾದ್ಯಂತ ಸಮಾಜ ಸಂಘಟನೆ ಮಾಡಿದ್ದು ಈಗಿರುವ ಎಷ್ಟೋ ನಾಯಕರನ್ನು ಸಂಘಟನಾತ್ಮಕವಾಗಿ ಬೆಳಕಿಗೆ ತಂದವರು. ಸಮಾಜದ ಪರವಾಗಿ ಅನೇಕ ಹೋರಾಟಗಳನ್ನು ಮಾಡಿದ್ದು 2012ರ ಡಿಸೆಂಬರ 11ರಲ್ಲಿ ಸದಾಶಿವ ಆಯೋಗದ ಸಲುವಾಗಿ ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ ನಡೆದ ಗಲಾಟೆಯಲ್ಲಿ ಉತ್ತರ ಕರ್ನಾಟಕದ ಅನೇಕ ಜನರು ರಕ್ತ ಹರಿಸಿದರು. ಅದರಲ್ಲಿ ಒಬ್ಬರಾದ ಇವರು ಸಮಾಜದ ಪರವಾಗಿ ನಡೆಯುವ ಹೋರಾಟಗಳಿಗೆ ತಮ್ಮ ಭಾಗದ ಜನರಿಗೆ ಆರ್ಥಿಕವಾಗಿ ಸಹಾಯ ನೀಡುತ್ತಾ ಹಾಗೂ ಅನೇಕ ಸಮಾಜ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದಲ್ಲಿ ಬ್ರಹ್ಮಾಂಡದ ಭ್ರಷ್ಟಾಚಾರ ನಡೆದಾಗ ಈ ಬಗ್ಗೆ ರಾಜ್ಯದಲ್ಲಿ ಧ್ವನಿ ಎತ್ತಿದ ಮೊದಲ ನಾಯಕ ಇವರಾಗಿದ್ದು ಈ ಬಗ್ಗೆ ಅನೇಕ ಹೋರಾಟಗಳನ್ನು ಮಾಡಿದ್ದಾರೆ.

ರಾಜಕೀಯವಾಗಿ ಹಾಗೂ ಸಂಘಟನಾತ್ಮಕವಾಗಿ ಭೋವಿ ಸಮುದಾಯದ ಇತಿಹಾಸವನ್ನು ಮೆಲಕು ಹಾಕಿದಾಗ ಉತ್ತರ ಕರ್ನಾಟಕದ ನಾಯಕರ ಹಾಗೂ ಜನರ ಪರಿಶ್ರಮ ಬಹಳವಿದೆ. ಉತ್ತರ ಕರ್ನಾಟಕದವರು ಆರ್ಥಿಕವಾಗಿ ಹಿಂದುಳಿದ ನಾಯಕರುಗಳು ಇರಬಹುದು ಆದರೆ ಜನಶಕ್ತಿ ಪ್ರದರ್ಶಿಸುವವಲ್ಲಿ ಯಾವತ್ತು ಮುಂದೆ ಇರುತ್ತಾರೆ. ನಿಗಮದ ಹಾಗೂ ಸಮಾಜದ ಸಲುವಾಗಿ ಹೋರಾಟ ಮಾಡುವುವಲ್ಲಿ ಉತ್ತರ ಕರ್ನಾಟಕದ ನಾಯಕ ಹಾಗೂ ಜನರ ಸಿಂಹಪಾಲಿದ್ದರು ಅಧಿಕಾರ ಅನುಭವಿಸುವ ಭಾಗ್ಯ ಇರುವುದಿಲ್ಲ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಕಾಂಗ್ರೆಸ ಸರ್ಕಾರ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ‌.ಶಿವಕುಮಾರ ಅವರು ಈ ಬಾರಿ ನಿಗಮದ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದ ಹಾಗೂ ಯುವ ನಾಯಕರಾದ ಜಮಖಂಡಿಯ ಸಿದ್ದು ಬಂಡಿವಡ್ಡರ ಅವರಿಗೆ ನೀಡಬೇಕೆಂದು ಈ ಪತ್ರಿಕಾ ಪ್ರಕಟಣೆಯ ಮೂಲಕ ಸಮಾಜದ ರಾಜ್ಯ ಮಾಧ್ಯಮ ಪ್ರತಿನಿಧಿ ಹಣಮಂತ ವಡ್ಡರ, ರಾಜ್ಯ ಸಂ.ಕಾರ್ಯದರ್ಶಿ ಶ್ರೀನಿವಾಸ ಕಂದಗಲ್ಲ, ಜಿಲ್ಲಾ ಸಂಚಾಲಕರಾದ ಪ್ರಸನ್ನ ಅಮರಾವತಿ, ಮಲ್ಲೇಶ ಗಾಡಿವಡ್ಡರ, ಶಂಕರ ಗಾಡಿವಡ್ಡರ, ಮುತ್ತುರಾಜ ಬಂಡಿವಡ್ಡರ, ಯಮನೂರ ಪಾತ್ರೋಟ ಆಗ್ರಹಿಸಿದ್ದಾರೆ.

Mallikarjun

Share
Published by
Mallikarjun

Recent Posts

ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ

ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ 300th birth anniversary of…

3 hours ago

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ.

ಸಾವಿರಾರು ಸಂಖ್ಯೆಯ ರೋಡ ಹಂಪ್ಸಗಳ ತೆರುವುಗೊಳಿಸುವ ನಿಟ್ಟಿನ್ನಲ್ಲಿ ಮುಖ್ಯಮಂತ್ರಿ ಪತ್ರ. Chief Minister's letter in Nitin to clear…

17 hours ago

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ

ಸಿಲಿಂಡರ್ ವಿತರಣೆ ವಿತರಣೆ ಮಾಡುವ ಹುಡಗನ ಸಂಪಾದನೆ Earnings of a boy who distributes cylinders (ಸಾಂದರ್ಭಿಕ ಗೂಗಲ್…

17 hours ago