Magalamani urges Education Minister to campaign for admission to government schools
ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಲು ಶಿಕ್ಷಣ ಇಲಾಖೆ ಪ್ರಚಾರ ಮಾಡುವಂತೆ ಶಿಕ್ಷಣ ಸಚಿವರಿಗೆ ಮ್ಯಾಗಳಮನಿ ಒತ್ತಾಯ
ಗಂಗಾವತಿ :13 ಬಸ್ ಹಾಗೂ ಬಸ್ ನಿಲ್ದಾಣದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ನ್ನು ಸೇರಿಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇವರನ್ನು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಒತ್ತಾಯಿಸಿದ್ದಾರೆ.
ನಗರದ ಆನೆಗುಂದಿ ರಸ್ತೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕ್ಷೆತ್ರಶಿಕ್ಷಣಾಧಿಕಾರಿ ಕಾರ್ಯಲಯದ ವ್ಯವಸ್ಥಾಪಕ ಶಿವಪ್ರಸಾದ ಇವರಿಗೆ ಮನವಿ ಸಲ್ಲಿಸಿ ಮಾತನಾಡಿ ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನಮ್ಮ ಮಾತೃ ಭಾಷೆ ಅವನತಿ ಹೊಂದುವ ಪರಿಸ್ಥಿತಿ ಬರುತ್ತದೆ.
ಆದ್ದರಿಂದ ಕನ್ನಡ ಉಳಿಯಬೇಕಾದರೆ ಸರ್ಕಾರಿ ಶಾಲೆಗಳು ಉಳಿಯಲೇ ಬೇಕು. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿ ಕನ್ನಡ ಭಾಷೆ ಉಳಿಸಿ ಎಂಬ ಘೋಷ ವಾಕ್ಯ ಉಳ್ಳ ಬ್ಯಾನರ್ ಬಸ್ ನಿಲ್ದಾಣದಲ್ಲಿ ಹಾಕಿಸುವದು ಮತ್ತು ಬಸ್ ಗಳ ಮೇಲೆ ಘೋಷಣೆ ಯ ಸ್ಟಿಕರ್ ಅಂಟಿಸುವದು ಹಾಗೂ ಬಸ್ ನಿಲ್ದಾಣದಲ್ಲಿರುವ ದ್ವನಿವರ್ಧಕಗಳ ಮೂಲಕಪ್ರಚಾರ ಮಾಡಬೇಕು ಶಾಲಾ ಅವಧಿಯಲ್ಲಿ ಮಕ್ಕಳು ಮತ್ತು ಬಾಲ ಕಾರ್ಮಿಕ ಕೆಲಸದಲ್ಲಿ ಕಂಡು ಬಂದಲ್ಲಿ ಕೂಡಲೇ 1098 ಅಥವಾ 112 ನಂಬರ್ ಗೆ ಕರೆಮಾಡಲು ಸಾರ್ವಜನಿಕಮಾಹಿತಿಗಾಗಿ ರ ಪ್ರಚಾರಪಡಿಸಬೇಕೆಂದು ಒತ್ತಾಯಿಸಿದರು.
ಕಡಿಮೆ ಸಂಖ್ಯೆ ದಾಖಲಾತಿ ಇರುವ ಶಾಲೆಗಳನ್ನು ಕಡಿಮೆ ದಾಖಲಾತಿ ನೆಪದಲ್ಲಿ ಮುಚ್ಚುವ ಬದಲು ಪೂರ್ವ ಪ್ರಾಥಮಿಕ ತರಗತಿ ಪ್ರಾರಂಬಿಸುವದರ ಮೂಲಕ ಪುನಶ್ಚತನ ನೀಡಿ ಶಾಲೆಗಳನ್ನು ಮುಚ್ಚದಂತೆ ಕ್ರಮ ಕೈಗೊಳ್ಳಬೇಕು. ಈಗ ಜಾರಿಗೆ ತಂದಿರುವ ಕೆಪಿಸಿ ಮ್ಯಾಗ್ನೆಟ್ ಶಾಲೆಗಳನ್ನು ಆರಂಬಿಸುವದರಿಂದ ಸಾವಿರಾರು ಶಾಲೆಗಳು ಮುಚ್ಚಲಿವೆ ಇದರಿಂದ ಬಡ ಮಕ್ಕಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ.
ಈ ಪದ್ಧತಿ ಅವೈದ್ನಾನಿಕವಾದದ್ದು ಕಿರಿಯ ಪ್ರಾಥಮಿಕ ಶಾಲೆಗಳು ಅದೇ ಗ್ರಾಮಗಳಲ್ಲಿ ಇರಲೆಬೇಕು.
ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಅಂದರೆ 6 ನೇ ತರಗತಿಯಿಂದ 10 ನೇ ತರಗತಿಯವರೆಗೆ ಗ್ರಾಮ ಪಂಚಾಯತ್ ಗೊಂದು ವಸತಿಯುತ ಶಾಲೆಗಳನ್ನು ಪ್ರಾರಂಬಿಸುವದರಿಂದ ಮಕ್ಕಳು ಶಾಲೆಯಿಂದ ಹೊರ ಉಳಿಯದೇ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯತ್ ಗೊಂದು ವಸತಿ ಶಾಲೆ ಪ್ರಾರಂಭಿಸಬೇಕು.
ಸರ್ಕಾರಿ ಶಾಲಾ ಶಿಕ್ಷಕರು ಯಾವ ಉದ್ದೇಶಕ್ಕೆ ನೇಮಕಾತಿ ಹೊಂದಿರುವರೋ ಅದನ್ನು ಬಿಟ್ಟು ಅನ್ಯ ಕೆಲಸಗಳಿಗೆ ಸರ್ಕಾರ ಬಳಸಿಕೊಳ್ಳುತ್ತದೆ. ಬಿಸಿಯೂಟ, ಜನಗಣತಿ, ಜಾತಿ ಗಣತಿ, ಬಿ ಎಲ್, ಓ, ಸೇರಿದಂತೆ ಬೇರೆ ಕಾರ್ಯಗಳಿಗೆ ನಿಯೋಜನೆ ಮಾಡುವದರಿಂದ ಮಕ್ಕಳ ಕಲಿಕೆಗೆ ಹಿನ್ನಡೆಯಾಗುವದರಿಂದ ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುವ ಪರಿಸ್ಥಿತಿ ಅನಿವಾರ್ಯವಾಗುತ್ತದೆ ಇದರಿಂದ ಸರ್ಕಾರಿ ಶಾಲೆಗಳು ಸುಲಭವಾಗಿ ಮುಚ್ಚುತ್ತವೆ.
ಅನ್ಯ ಕೆಲಸಗಳಿಗೆ ನಿರುದ್ಯೋಗ ಪದವೀಧರರನ್ನು ಬಳಸಿಕೊಂಡರೆ ಅವರಿಗೂ ಉದ್ಯೋಗ ಲಭಿಸಿದಂತಾಗುತ್ತದೆ.ಗುಣ ಮಟ್ಟದ ಕಲಿಕೆಯೂ ಸಿಗುತ್ತದೆ.
ಕಾರಣ ಶಿಕ್ಷಕರನ್ನು ಅನ್ಯ ಕಾರ್ಯ ಗಳಿಗೆ ನಿಯೋಜನೆ ಮಾಡಬಾರದು ಮತ್ತು ಈಗ ಹೋರಾಡಿಸಿರುವ ಶಾಲೆಗೊಬ್ಬ ಶಿಕ್ಷಕರನ್ನು ಶ್ವಾನ ನೋಡಲ್ ಅಧಿಕಾರಿ ಎಂದು ನೇಮಿಸುವ ಆದೇಶ ಕೂಡಲೇ ಹಿಂಪಡೆಯಬೇಕು.
ಮಳೆಗಾಲದಲ್ಲಿಯೇ ಜೂನ್ ತಿಂಗಳು ಶಾಲೆಗಳು ಪುನಃ ಪ್ರಾರಂಭವಾಗುತ್ತವೆ.
ಸೋರುತ್ತಿರುವ ಮತ್ತು ಅಪಾಯವಾಗುವ ಕೊಠಡಿಗಳನ್ನು ಶಾಲೆಗಳುಆರಂಬುವಾಗುವದರೊಳಗೆ ರಿಪೇರಿ ಮಾಡಿಸಿ ಮಕ್ಕಳಿಗೆ ಆಗುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ, ಮೇಘರಾಜ್, ಗಣೇಶ್, ಜಂಬಣ್ಣ ಮತ್ತಿತರರು ಇದ್ದರು
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…