Solidarity Youth Moment hosts Iftar gathering with people of all religions
ಸೋಲಿಡಾರಿಟಿ ಯೂಥ್ ಮುಮೆಂಟ್ ವತಿಯಿಂದ ಸರ್ವ ಧರ್ಮದವರೊಂದಿಗೆ ಇಫ್ತಾರ್ ಕೂಟ
ಗಂಗಾವತಿ: ನಗರದ ಪ್ರಶಾಂತಿ ನಗರದಲ್ಲಿರುವ ಸೋಲಿಡಾರಿಟಿ ಯೂಥ್ ಮುಮೆಂಟ್ ಗಂಗಾವತಿ ಘಟಕದವತಿಯಿಂದ ಸರ್ವ ಧರ್ಮದವರೊಂದಿಗೆ ಸೌಹಾರ್ದ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಜ್ಞಾನಜ್ಯೋತಿ ಶಿವಲಿಂಗ ಸ್ವಾಮೀಜಿ ಸುಕ್ಷೇತ್ರ ಹೆಚ್. ವೀರಾಪುರ್ ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಸೇರಿರುವ ಎಲ್ಲಾ ಜನಸ್ತೋಮಕ್ಕೆ ರಂಜಾನಿನ ಸಂದೇಶ ನೀಡಲಿಕ್ಕಾಗಿ ಸಹೋದರರಾದ ಇಸ್ಮಾಯಿಲ್ ತೀರ್ಥಹಳ್ಳಿ.ಮುಖ್ಯ ಕಾರ್ಯದರ್ಶಿಗಳು ಸೋಲಿಡಾರಿಟಿ ಯೂಥ್ ಮೂಮೆಂಟ್ರವರು ಬೆಂಗಳೂರಿನಿಂದ ಆಗಮಿಸಿದ್ದರು..
ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಮಾತನಾಡುತ್ತಾ ಎಲ್ಲಾ ಧರ್ಮಗಳ ಸಾರವೊಂದೇ ಮಾನವೀಯತೆ ಮನುಷ್ಯ ಮನುಷ್ಯನನ್ನ ಪ್ರೀತಿಸಬೇಕೆ ಹೊರತು ಮನುಷ್ಯನ ಧರ್ಮವನಲ್ಲ ಅಂತಕಂತ ಮಾತನ್ನು ಕೂಡ ತಿಳಿಸಿದರು.
ಎಲ್ಲರೂ ಶ್ರೇಷ್ಠರು ನಾವೆಲ್ಲರೂ ಭಾರತೀಯರು ನಾವೆಲ್ಲರೂ ಪರಸ್ಪರ ಅಣ್ಣತಮ್ಮಂದಿರಂತೆ ಬದುಕಿ ಬಾಳಬೇಕು ನಮ್ಮ ದೇಶದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ಭೇದ ಭಾವ ಮಾಡದೇ ಹಗಲಿರುಳು ಶ್ರಮಿಸಬೇಕು ಅಂತಕಂತಹ ಮಾತನ್ನು ಕೂಡ ಸ್ವಾಮೀಜಿಯವರು ಈ ಸಂದರ್ಭದಲ್ಲಿ ತಿಳಿಸಿದರು.
ಸಹೋದರರಾದ ಇಸ್ಮಾಯಿಲ್ ತೀರ್ಥಳ್ಳಿ ಅವರು ಮಾತನಾಡಿ ಪವಿತ್ರ ತಿಂಗಳು ಕೇವಲ ಆಹಾರ ಮತ್ತು ಪಾನೀಯದಿಂದ ದೂರವಿರುವುದಷ್ಟೇ ಅಲ್ಲ; ಇದು ಆತ್ಮದ ತಪಸ್ಸು ಹಾಗೂ ಸಮಾಜದ ಮೇಲಿನ ಕರುಣೆ ಮತ್ತು ದಯೆಯನ್ನೂ ಬೆಳೆಸುವ ಸಮಯವಾಗಿದೆ.
ಅಲ್ಲಾಹನು ಪವಿತ್ರ ಕುರ್ಆನಿನಲ್ಲಿ ಹೀಗೆ ಹೇಳುತ್ತಾನೆ:
“ಓ ವಿಶ್ವಾಸಿಗಳೇ! ನಿಮ್ಮ ಮೇಲೆ ಉಪವಾಸವನ್ನು ವಿಧಿಸಲಾಗಿದೆ, ನೀವು ಧರ್ಮನಿಷ್ಠರಾಗುವಂತೆ.”
ಆದ್ದರಿಂದ – ದೇವರ ಭಯವು ನಮ್ಮ ಹೃದಯಗಳಲ್ಲಿ ಆಳವಾಗಿ ನೆಲೆಸಲಿ, ಮತ್ತು ನಾವು ಸತ್ಯನಿಷ್ಠ ಜೀವನವನ್ನು ನಡೆಸೋಣ.
ನಾವೆಲ್ಲರೂ ಉತ್ತಮ ಸಮಾಜಕ್ಕಾಗಿ ಒಳ್ಳೆಯ ಕೆಲಸಗಳನ್ನು ಕೂಡಿಕೊಂಡು ಮಾಡೋಣ ಅಂತಕಂತ ಮಾತನ್ನು ತಿಳಿಸಿ ಹೇಳಿದರು
ಈ ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರುಗಳು ಗಂಗಾವತಿ ರಾಷ್ಟ್ರೀಯ ಬಸವದಳದ ,ಬಸವಕೇಂದ್ರ ಪದಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸಮಾಜದ ಚಿಂತನೆಯಲ್ಲಿ ತೊಡಗಿರುವಂತಹ ಬುದ್ಧಿಜೀವಿಗಳು ಪತ್ರಕರ್ತರು ಭಾಗವಹಿಸಿದ್ದರು.
SYM ನ ಜಿಲ್ಲಾಧ್ಯಕ್ಷರಾದ ನಾಸಿರ್ ಅಹಮದ್, ತಾಲೂಕ ಅಧ್ಯಕ್ಷರಾದ ರಾಜ, ಮತ್ತು SYM ನ ಎಲ್ಲಾ ಕಾರ್ಯಕರ್ತರು ಮತ್ತು JIH ನ ತಾಲೂಕ ಆದ್ಯಕ್ಷರಾದ ಅಬ್ದುಲ್ ಖುದ್ದೂಸ್, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು,
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…