Pyramid Spiritual Society Movement, an organization celebrating International Women's Day
ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂಮೆಂಟ್,ಸಂಸ್ಥೆ ಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಮಹಿಳೆಯರಲ್ಲಿ ಸ್ತ್ರೀ-ತತ್ವಗಳಾದ ಪ್ರೀತಿ, ಸಹನೆ, ಕ್ಷಮೆ ಮುಂತಾದವುಗಳು ಜಾಗೃತವಾದರೆ ಉತ್ತಮ ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸಲಿದೆ: ಶ್ರೀಮತಿ ಲಲಿತಾ ಕಂದಗಲ್
ಗಂಗಾವತಿ: ಸ್ತ್ರೀ ಎಂದರೆ ಪ್ರೀತಿ, ಕರುಣೆ, ಸಹನೆ, ತ್ಯಾಗ, ಮಮತೆ, ಹೊಂದಾಣಿಕೆ, ಸ್ಪೂರ್ತಿ, ಶಕ್ತಿ, ಪ್ರೇರಣೆ, ಕ್ಷಮೆ ಹೀಗೆ ಹಲವಾರು ತತ್ವಗಳಿಗೆ ಪ್ರತಿಕ, ಆದರೆ ಇಂದಿನ ಕೆಲಸದ ಒತ್ತಡ, ಬದಲಾದ ಜೀವನ ವಿಧಾನ, ಆಹಾರ ಪದ್ಧತಿ ಆಲೋಚನಾ ವಿಧಾನಗಳಿಂದಾಗಿ ಸ್ತ್ರೀಯರಲ್ಲಿ ಸ್ತ್ರೀ-ತತ್ವಗಳಾದ ಪ್ರೀತಿ, ಹೊಂದಾಣಿಕೆ, ಸಹನೆ ಮುಂತಾದವುಗಳಲ್ಲಿ ಲೋಪವಾಗಿ ಸ್ವಾರ್ಥ, ಅಸಹನೆ, ಅಸೂಯೆ, ನಕರಾತ್ಮಕ ಸ್ಪರ್ಧಾ ಮನೋಭಾವ ಒಣ ಪ್ರತಿಷ್ಠೆ ಯಂತಹ ಅವಗುಣಗಳು ಬೆಳೆಯುತ್ತಿರುವುದು ಆತಂಕದ ವಿಷಯ.
ಇವು ಪರಮಾಣು ಬಾಂಬುಗಿಂತ ವಿನಾಶಕಾರಿ, ಅಪಾಯಕಾರಿ, ಪರಮಾಣು ಬಾಂಬುಗಳು ಒಂದೇ ಬಾರಿಗೆ ಜೀವ ಹಾನಿ ಮಾಡಿದರೆ ಈ ನಕರಾತ್ಮಕ ಗುಣ ಸ್ವಭಾವ ವ್ಯಕ್ತಿತ್ರ ಸಂಬಂಧ ಬಾಂಧವ್ಯ ಕುಟುಂಬ ವ್ಯವಸ್ಥೆ ಸಮಾಜದ ಸೌಹಾರ್ದತೆ ರಾಷ್ಟ್ರೀಯ ಭಾವೈಕ್ಯತೆ ವಿಶ್ವ ಪ್ರೇಮವನ್ನ ಹಾಳು ಮಾಡುತ್ತಿದೆ ಎಂದು ಒಂದನೇ ಪ್ಯಾರದ ಕೊನೆಯ ಸಾಲಿನಲ್ಲಿ ರಾಜ್ಯತಾಸ್ತ್ರ ಉಪನ್ಯಾಸಕಿ ಹಾಗೂ ಪಿರಮಿಡ್ ಸ್ಪಿರಿಚುವಲ್ ಸೊಸೈಟಿಸ್ ಮೂವೈಂಟ್ ನ ಮನ್ವಂತರ ಧ್ಯಾನ ಕೇಂದ್ರದ ರೂವಾರಿ ಶ್ರೀಮತಿ ಲಲಿತ ನಾರಾಯಣ ಕಂದಗಲ್ ಕಳವಳ ವ್ಯಕ್ತಪಡಿಸಿದರು.
ಅವರು ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಇಲಾಖೆಗಳಲ್ಲಿ ಯಾವುದೇ ಬಿರುದು ಸನ್ಮಾನಗಳಿಗೆ ಆಶಿಸದೇ ಎಲೆಮರೆಯ ಕಾಯಿಯಾಗಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಹಲವು ಮಹಿಳೆಯರನ್ನು ಇಂದು ಆಧ್ಯಾತ್ಮಿಕ ಸಂಸ್ಥೆಯಾದ ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂಮೆಂಟ್, ಗಂಗಾವತಿ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಈ ಮಹಿಳಾ ದಿನಾಚರಣೆ ಮೂಲಕ ಎಲ್ಲರಲ್ಲಿಯೂ ಸ್ತ್ರೀ ತತ್ವಗಳಾದ ಪ್ರೀತಿ ಸಹನೆ, ಕ್ಷಮೆ ಮುಂತಾದವುಗಳು ಜಾಗೃತವಾದರ ಕುಟುಂಬ, ಸಮಾಜ, ರಾಷ್ಟ್ರ ಹಾಗೂ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ವಿಶ್ವ ಭ್ರಾತೃತ್ವ ವಿಶ್ವ ಪ್ರೇಮ ನಮ್ಮ ಮೂಲಕ, ನಮ್ಮ ಕುಟುಂಬದಿಂದಲೇ ಆರಂಭವಾಗಬೇಕು. ಅದಕ್ಕೆ ಇಂತಹ ದಿನಾಚರಣೆಗಳು ವೇದಿಕೆಯಾಗಬೇಕು ಎಂದು ಇದೇ ಸದುದ್ದೇಶದಿಂದ ಇಂದು ಮುಖ್ಯವಾಗಿ ಪೌರ ಕಾರ್ಮಿಕ ಮಹಿಳೆ ಹುಲಿಗೆಮ್ಮ ನ್ಯಾಯಾಂಗ ಇಲಾಖೆಯ ರೇಣುಕಾ, ಕೆಇಬಿ ಭಾರತಿ ಜೋಶಿ, ಶಿಕ್ಷಣ ಇಲಾಖೆಯ ಜಯಶ್ರೀ ಎಂ, ಆರೋಗ್ಯ ಇಲಾಖೆಯ ಪದ್ಮಾ ಅಂಚೆ ಇಲಾಖೆಯ ಪೂರ್ಣಿಮಾ, ಸಾರಿಗೆ ಇಲಾಖೆಯ ಸೌಮ್ಯ ಹಾಗೂ ಬಿಸಿ ಊಟದ ಮುಖ್ಯ ಅಡಿಗೆದಾರ್ತಿ ಸುನಿತಾ ಸಜ್ಜನ್ ಸೇರಿದಂತೆ ಹಲವರನ್ನು ಸನ್ಮಾನಿಸಿ ಅವರು ಇಲಾಖೆಗಳಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಸರಿಸಿ ಅವರ ಸೇವೆ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸೊಸೈಟಿ ಮೂವಮೆಂಟಿನ ಮುಖ್ಯ ರೂವಾರಿಗಳಾದ ಲಲಿತ ನಾರಾಯಣ ವಗ್ಗ ನಾಗರಾಜ ಕಾಜಿ, ಕೆ ಶರಣಮ್ಮ ತಾರಾ ತಿರುಪತಿ ಜೋಶಿ, ಮಾಲಾ 1. ಮಂಜುನಾಥ್, ವಿನಯ್ ಕುಮಾರ್, ಶಿವಕುಮಾರ್, ಇನ್ನಿತರ ಪಿರಮಿಡ್ ಮೇಷ್ಟ್ರುಗಳು ಉಪಸ್ಥಿತರಿದ್ದರು.
d: 9480772332
Legal action if domestic gas is used for commercial purposes ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಅನಿಲ…
Municipal Council budget pre-meeting on March 16thPublic invited to participate by civic commissioner ಮಾ.16ರಂದು ನಗರಸಭೆ…
Let's have a plastic-free lifestyle: Nagaraj S. Guttedar ಪ್ಲಾಸ್ಟಿಕ್ ಮುಕ್ತ ಜೀವನಶೈಲಿ ನಮ್ಮದಾಗಲಿ: ನಾಗರಾಜ್ ಎಸ್ ಗುತ್ತೇದಾರ್…
Women need legal knowledge: Lawyer Nandini's advice on Women's Day ಮಹಿಳೆಗೆ ಕಾನೂನು ಅರಿವು ಅಗತ್ಯ: ಮಹಿಳಾ…
Government warns Samar International Islamic School for starting school enrollment in violation of court order…
Karnataka Provincial Farmers' Association demands justice for Kudathini land victims. ಕುಡತಿನಿ ಭೂ ಸಂತ್ರಸ್ತರಿಗೆ ನ್ಯಾಯ ಕೊಡಿಸಲು…